ಕಲಾಪೋಷಕರ ಕೈಯಲ್ಲಿ ರಂಗಭೂಮಿ ಅಳಿವು- ಉಳಿವು: ಚಿಂದೋಡಿ ಶ್ರೀಕಂಠೇಶ್

KannadaprabhaNewsNetwork |  
Published : Feb 21, 2026, 02:45 AM IST
ಕೊಟ್ಟೂರಿನಲ್ಲಿ  ಕೊಟ್ಟೂರೇಶ್ವರ ಕಲಾ ರಂಗ ಕನ್ನಡ  ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಏರ್ಪಡಿಸಿದ ರಂಗ ಸಂಭ್ರಮಕಾರ್ಯಕ್ರಮದಲ್ಲಿ  ಗಣ್ಯರು ಭಾಗವಹಿಸಿದರು  | Kannada Prabha

ಸಾರಾಂಶ

ಸ್ತುತ ವೃತ್ತಿರಂಗಭೂಮಿಯ ಉಳಿವು ಚಿಂತಾಜನಕ ಸ್ಥಿತಿಯಲ್ಲಿದೆ. ಕೇವಲ ಪ್ರತಿಭೆ ಮತ್ತು ಜಾಣ್ಮೆ ಇರುವ ಕಲಾವಿದರು ಮಾತ್ರ ಇದರಲ್ಲಿ ಬದುಕು ಕಂಡುಕೊಳ್ಳುತ್ತಾರೆಯೇ ಹೊರತು ಉಳಿದ ನಟರ ಸ್ಥಿತಿ ಖಂಡಿತ ಶೋಚನೀಯ.

ಕೊಟ್ಟೂರು: ವೃತ್ತಿ ರಂಗಭೂಮಿ ಇಲ್ಲವೇ ಹವ್ಯಾಸಿ ರಂಗಭೂಮಿಗಳು ಉಳಿಯಲು ಮತ್ತು ಬೆಳೆಯಲು ಕಲಾ ಪೋಷಕರ ಪ್ರೋತ್ಸಾಹ ಅತ್ಯಗತ್ಯವಾಗಿದೆ ಎಂದು ನಟ ಚಿಂದೋಡಿ ಶ್ರೀಕಂಠೇಶ್ ಹೇಳಿದರು.ಬುಧವಾರ ಸಂಜೆ ಪಟ್ಟಣದಲ್ಲಿನ ಖಾಸ್ಗತೇಶ್ವರ ನಾಟಕ ಮಂಡಳಿಯವರ ರಂಗಮಂದಿರದಲ್ಲಿ ಶ್ರೀಗುರು ಕೊಟ್ಟೂರೇಶ್ವರ ಕಲಾರಂಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ಕಲಾವಿದರ ಸಂಘ ಸಂಯಕ್ತವಾಗಿ ಆಯೋಜಿಸಿದ್ದ ರಂಗ ಸಂಭ್ರಮ ಕಾರ್ಯಕ್ರಮವನ್ನು ಬುಧುವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ವೃತ್ತಿರಂಗಭೂಮಿಯ ಉಳಿವು ಚಿಂತಾಜನಕ ಸ್ಥಿತಿಯಲ್ಲಿದೆ. ಕೇವಲ ಪ್ರತಿಭೆ ಮತ್ತು ಜಾಣ್ಮೆ ಇರುವ ಕಲಾವಿದರು ಮಾತ್ರ ಇದರಲ್ಲಿ ಬದುಕು ಕಂಡುಕೊಳ್ಳುತ್ತಾರೆಯೇ ಹೊರತು ಉಳಿದ ನಟರ ಸ್ಥಿತಿ ಖಂಡಿತ ಶೋಚನೀಯ. ಇಂತಹ ರಂಗವನ್ನು ಉಳಿಸಿ ಕಾಪಾಡಿಕೊಂಡು ಹೋಗುವತ್ತ ಪ್ರತಿಯೊಬ್ಬರು ಮುಂದಾಗಬೇಕು ಎಂದು ಅವರು ಹೇಳಿದರು.

ನಾಟಕಗಳು ಮನಸ್ಸಿನ ಕೈಗನ್ನಡಿಯಾಗಿವೆ. ರಾಜ್ಯದಲ್ಲಿ ವೃತ್ತಿ ರಂಗಭೂಮಿ 19ನೇ ಶತಮಾನದ ಅಂತ್ಯ ಮತ್ತು 20ನೇ ಶತಮಾನದ ಆರಂಭದಲ್ಲಿ ಹುಟ್ಟಿಕೊಂಡಿದೆ ಎಂದು ಅವರು ಹೇಳಿದರು.

ಹವ್ಯಾಸಿ ಬರಹಗಾರ ಅಂಚೆ ಕೊಟ್ರೇಶ್ ಮಾತನಾಡಿ, ಗುಬ್ಬಿ ವೀರಣ್ಣ ನಾಟಕ ಕಂಪನಿ ವೃತ್ತಿ ರಂಗಭೂಮಿಗೆ ಮೆರಗು ತಂದುಕೊಟ್ಟ ಮಹಾನ್ ನಟರು. ಇಂತಹ ಕಲಾವಿದರನ್ನು ಮತ್ತು ಕಲಾ ಸಂತತಿಯನ್ನು ಗೌರವಿಸಿ ಮುಂದುವರಿಸಿಕೊಂಡು ಹೋಗಬೇಕು ಎಂದರು.

ಎಂ.ಎಸ್. ಶಿವನಗುತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿವರ್ಷ ನಮ್ಮ ಕಲಾತಂಡದಿಂದ ನಾಟಕಗಳಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.

ಕಲಾವಿದ ಬಿ.ಎ. ಕೊಟ್ರೇಶ್, ಭರತರಾಜ್ ತಾಳಿಕೋಟೆ, ಪ್ರಶಾಂತ್ ರಾಜ್, ಬಿ.ಎಂ. ಗೀರೀಶ್, ಕಸಾಪ ತಾಲೂಕು ಅಧ್ಯಕ್ಷ ದೇವರಮನಿ ಕೊಟ್ರೇಶ್ ಇದ್ದರು. ಚಿಂದೋಡಿ ಶಂಭುಲಿಂಗಪ್ಪ ಸ್ವಾಗತಿಸಿ, ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತ್ರಿಪದಿಗಳ ಭಾಷಾಂತರ ಕಾರ್ಯ ನಡೆಯಬೇಕು: ಲೀಲಾಕುಮಾರಿ
ಪವನ ವಿದ್ಯುತ್ ಕಂಬ ತೆರವಿಗೆ ಆಗ್ರಹ