ಧಾರವಾಡ: ರಂಗಭೂಮಿಯು ವ್ಯಕ್ತಿತ್ವದ ಎಲ್ಲ ಅವಶ್ಯಕತೆಗಳನ್ನು ಪೂರೈಸುವ ಒಂದು ಪ್ರಮುಖ ಕಲಾ ಪ್ರಕಾರ. ಬದುಕಿನ ಆಯಾಮಗಳನ್ನು ಮತ್ತು ಶಿಕ್ಷಣದ ಪರಿಣಾಮಕಾರಿ ಬೋಧನೆ ಮತ್ತು ಪರಿಹಾರಾತ್ಮಕ ಸಮಸ್ಯೆ ಪರಿಹರಿಸಲು ರಂಗಭೂಮಿ ಉತ್ತಮ ಮಾಧ್ಯಮವಾಗಿ ಕಾರ್ಯ ಮಾಡುತ್ತದೆ ಎಂದು ಸಂಘಟಕ ಮಾರ್ತಾಂಡಪ್ಪ ಕತ್ತಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯರಾದ ಡಾ. ಗಿರೀಜಾ ಹಿರೇಮಠ, ಉತ್ತಮ ಭೋದನೆ ಮಾಡಲು ಪಠ್ಯ ಮತ್ತು ನಾಟಕದ ಪರಿಕಲ್ಪನೆಯ ಜ್ಞಾನ ಆಳವಾಗಿ ಇದ್ದಾಗ ಮಾತ್ರ ಸಮರ್ಥವಾಗಿ ಮಕ್ಕಳ ಆಳಕ್ಕೆ ಪಾಠ ಮಾಡಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಗಾಯಕ ಪ್ರೇಮಾನಂದ ಶಿಂದೆ ರಂಗಗೀತೆ ಪ್ರಸ್ತುತಪಡಿಸಿದರು. ಸಂಸ್ಥೆಯ ಕಾರ್ಯದರ್ಶಿ ಡಾ. ಕೆ.ಆರ್. ಹಿರೇಮಠ, ಉಪನ್ಯಾಸಕ ಎಸ್.ಎಂ. ಕೊಟಬಾಗಿ, ಗಿರೀಜಾ ಸುಂಕದ, ಉಮಾ ಮಠ ಇದ್ದರು. ವಿದ್ಯಾರ್ಥಿಗಳು ಒಟ್ಟು ಎಂಟು ತಂಡಗಳಲ್ಲಿ ಎಂಟು ನಾಟಕಗಳನ್ನು ಪ್ರದರ್ಶನ ನೀಡಿದರು.ಉಪನ್ಯಾಸಕರಾದ ಜಯಶೀಲಾ ಜೆ.ಎಚ್.ಸ್ವಾಗತಿಸಿದರು. ಸಿದ್ದಮ್ಮ ದೊಡಮನಿ ವಂದಿಸಿದರು.