ಹೊಸಕೋಟೆ: ಇತ್ತೀಚಿನ ತಂತ್ರಜ್ಞಾನ ಯುಗದಲ್ಲಿ ನಾಟಕಗಳನ್ನು ಮೊಬೈಲ್ಗಳಲ್ಲಿ ಪರಿಸ್ಥಿತಿಯಾಗಿದೆ. ಇದರ ನಡುವೆಯೂ ಗ್ರಾಮೀಣ ಭಾಗಗಳಲ್ಲಿ ರಂಗಭೂಮಿ ಕಲೆ ಜೀವಂತವಾಗಿರುವುದು ಪ್ರಶಂಸನೀಯ ಎಂದು ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ.ಗೋಪಾಲ್ ತಿಳಿಸಿದರು.
ರಾಜ್ಯ ಒಕ್ಕಲಿಗರ ಸಂಘದ ಮಾಜಿ ಹಿರಿಯ ನಿರ್ದೇಶಕ ಗೋಪಾಲಗೌಡ ಮಾತನಾಡಿ, ಗ್ರಾಮಗಳಲ್ಲಿ ಸಂಜೆ ವೇಳೆ ಒಂದೆಡೆ ಸೇರಿ ಹರಿಕಥೆ, ಭಜನೆ, ನಾಟಕ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ನಮ್ಮ ಹಿಂದೂ ಸಂಸ್ಕೃತಿ ಬಗ್ಗೆ ಕುಟುಂಬಸ್ಥರಿಗೆ ಹಾಗೂ ಗ್ರಾಮಸ್ಥರಿಗೆ ಅರಿವು ಮೂಡಿಸಿ ಜನರಿಗೆ ಮನವರಿಕೆ ಮಾಡಿಸುತ್ತಿದ್ದರು. ಜೊತೆಗೆ ದೇವರ ಚರಿತ್ರೆ ಅದರ ಬಗ್ಗೆ ಉಪಕಥೆಗಳನ್ನು ಮನರಂಜನಾ ರೀತಿಯಲ್ಲಿ ಮನವರಿಕೆ ಮಾಡಿಕೊಡುತ್ತಿದ್ದರು ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿವಿ ಸತೀಶ್ಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರಗೌಡ, ಯುವ ಮುಖಂಡ ನಾರಾಯಣಗೌಡ, ಟಿಎಪಿಸಿಎಂಎಸ್ನ ಉಪಾಧ್ಯಕ್ಷ ರವೀಂದ್ರ, ತಾಪಂನ ಮಾಜಿ ಅಧ್ಯಕ್ಷ ಕೆಂಚೆಗೌಡ, ಮಾಜಿ ಸದಸ್ಯ ವೆಂಕಟೇಶ್, ಯಾದವ ಮುಖಂಡ ಆನಂದಪ್ಪ, ಗ್ರಾಪಂ ಸದಸ್ಯರಾದ ಜಯರಾಮ್, ರಮೇಶ್, ಮುರುಳಿಮೋಹನ್, ನಾರಾಯಣಮ್ಮ, ಮುಖಂಡರಾದ ಐ.ಸಿ. ಮುನಿಶಾಮಗೌಡ, ದೊಡ್ಡನಾರಾಯಣಪ್ಪ, ವಾಸುದೇವಮೂರ್ತಿ, ಲಕ್ಷ್ಮೀನಾರಾಯಣ್, ಮಂಜುನಾಥ್, ನವೀನ್ ಇತರರಿದ್ದರು.