ಬದುಕನ್ನು ಚಿತ್ರಿಸುವ ರಂಗಭೂಮಿ ಕಲೆಗೆ ಧ್ವನಿಯಾಗಿ: ಜಯಂತ್ ಕಾಯ್ಕಿಣಿ

KannadaprabhaNewsNetwork |  
Published : Nov 20, 2025, 01:15 AM IST
ಹಾನಗಲ್ಲಿನ ಶೇಷಗಿರಿಯಲ್ಲಿ ನಡೆದ ಕಾವ್ಯದ ರಂಗ ಪ್ರಯೋಗ ಕಾರ್ಯಕ್ರಮದಲ್ಲಿ ಕವಿ ಜಯಂತ್ ಕಾಯ್ಕಿಣಿ ಮಾತನಾಡಿದರು. | Kannada Prabha

ಸಾರಾಂಶ

ಹಾನಗಲ್ಲ ತಾಲೂಕಿನ ರಂಗ ಗ್ರಾಮ ಶೇಷಗಿರಿಯಲ್ಲಿ ಬೀದಿ ನಾಟಕ -50 ಹಾಗೂ ಈ ನೆಲದ ಕವಿ ಸತೀಶ ಕುಲಕರ್ಣಿ ಅವರ ಕಟ್ಟುತ್ತೇವೆ ನಾವು ಕಾವ್ಯದ ರಂಗ ಪ್ರಯೋಗ ಕಾರ್ಯಕ್ರಮ ನಡೆಯಿತು.

ಹಾನಗಲ್ಲ: ಮಾನವೀಯತೆ ಎಚ್ಚರಿಸುವ ಕಾವ್ಯ ಬದುಕಿನ ಕಿಟಕಿಯಂತೆ, ಬದುಕನ್ನು ಚಿತ್ರಿಸುವ ರಂಗಭೂಮಿ ಕಲೆಗೆ ಮನುಷ್ಯ ಧ್ವನಿಯಾಗುವ ಅಗತ್ಯ ಇಂದಿನದಾಗಿದ್ದು, ಹೊಸ ತಲೆಮಾರು ನಾಟಕ ಕಲೆಯತ್ತ ವಾಲಬೇಕಾಗಿದೆ ಎಂದು ಖ್ಯಾತ ಕವಿ ಜಯಂತ್ ಕಾಯ್ಕಿಣಿ ಕರೆ ನೀಡಿದರು.

ತಾಲೂಕಿನ ರಂಗ ಗ್ರಾಮ ಶೇಷಗಿರಿಯಲ್ಲಿ ಬೆಂಗಳೂರಿನ ಕರ್ನಾಟಕ ನಾಟಕ ಅಕಾಡೆಮಿ, ಶೇಷಗಿರಿಯ ಗಜಾನನ ಯುವಕ ಮಂಡಳ ಸಂಯುಕ್ತವಾಗಿ ಆಯೋಜಿಸಿದ ಬೀದಿ ನಾಟಕ -50 ಹಾಗೂ ಈ ನೆಲದ ಕವಿ ಸತೀಶ ಕುಲಕರ್ಣಿ ಅವರ ಕಟ್ಟುತ್ತೇವೆ ನಾವು ಕಾವ್ಯದ ರಂಗ ಪ್ರಯೋಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶೇಷಗಿರಿಯ ಅದ್ಭುತ ರಂಗ ಯಾನ ಒಂದು ಅತ್ಯದ್ಭುತ ಯಶಸ್ಸಿನ ಗಾಥೆ. ಒಂದು ಪುಟ್ಟ ಹಳ್ಳಿಯಲ್ಲಿ ರಂಗ ಮಹಿಮೆಯನ್ನ ಅವಿಷ್ಕಾರಗೊಳಿಸಿದ ಯಶಸ್ಸು ಇಲ್ಲಿದೆ. ಇಂದಿನ ಸಿನಿಮಾಗಳು ಬಂದಿದ್ದೇ ರಂಗಭೂಮಿಯಿಂದ. ಸಿನಿಮಾಗಳಲ್ಲಿ ಹಾಡುಗಳಿರುವುದು ಭಾರತದ ವೈಶಿಷ್ಟ್ಯ ಎಂದು ಹೇಳಿದರು.

ರಂಗಭೂಮಿ ಸಂಯುಕ್ತ ಮನಸ್ಸನ್ನು ಘೋಷಿಸುತ್ತದೆ. ನಾಟಕ ಕಾವ್ಯಗಳಲ್ಲಿರುವ ಧ್ವನಿ ಸಮಾಜಕ್ಕೆ ಪ್ರೇರಣೆಯಾಗುತ್ತವೆ. ಮಾನವೀಯತೆ ಎಚ್ಚರಿಸುವ ನಾಟಕ ಕವಿತೆಗಳು ನಿಜವಾದ ಸಮಾಜಮುಖಿ ಕಾರ್ಯ. ಹೊಸ ತಲೆಮಾರು ಈ ನಾಟಕ ಮತ್ತು ಕಾವ್ಯದ ಸೃಜನಶೀಲ ಕೃಷಿಗೆ ಮುಂದಾಗಬೇಕು ಎಂದರು.

ಹುಬ್ಬಳ್ಳಿಯ ಕವಿ ರಂಜಾನ್ ಹೆಬಸೂರ ಸತೀಶ ಕುಲಕರ್ಣಿ ಅವರ ಕಾವ್ಯ ಕುರಿತು ಮಾತನಾಡಿ, ಕವಿ ಸತೀಶ ಕುಲಕರ್ಣಿ ಜನ ಮಿಡಿತ ಬಲ್ಲವರು. ಗಾಂಧಿ ವಾದಕ್ಕೆ ಆಕರ್ಷಿತರಾದವರು. ಸೌಹಾರ್ದ ನೆಲೆಗಟ್ಟಿನ ಬದುಕು ಬರಹವಾದ ಸತೀಶ ಮನುಷ್ಯವಾದವನ್ನು ಅಳವಡಿಸಿಕೊಂಡವರು. ಅವರ ಬರಹಗಳೆಲ್ಲ ಸಮಾಜವನ್ನು ಎಚ್ಚರಿಸುವ ಶಕ್ತಿ ಸಾಹಿತ್ಯ. ಅವರ ಬೀದಿ ನಾಟಕಗಳು ಕಾಲ ಕಾಲಕ್ಕೆ ಎಚ್ಚರಿಕೆಯಾಗಿ ಹೊರ ಹೊಮ್ಮಿವೆ ಎಂದರು.

ಖ್ಯಾತ ಛಾಯಾಗ್ರಾಹಕ ಹುಬ್ಬಳ್ಳಿಯ ಶಶಿಧರ ಸಾಲಿ ಮಾತನಾಡಿ, ಸಂಬಂಧಗಳನ್ನು ಬೆಸೆಯುವ ಸಾಹಿತ್ಯ ಚಟುವಟಿಕೆ ನಮ್ಮ ಸ್ನೇಹ, ಪ್ರೀತಿಯನ್ನು ಇಮ್ಮಡಿಗೊಳಿಸುವ ಶಕ್ತಿಯನ್ನು ಹೊಂದಿವೆ ಎಂದರು.

ಗಜಾನನ ಯುವಕ ಮಂಡಳದ ಅಧ್ಯಕ್ಷ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಪ್ರಭು ಗುರಪ್ಪನವರ ಅಧ್ಯಕ್ಷತೆ ವಹಿಸಿದ್ದರು. ವಿಜಯಕುಮಾರ ಮುದಕಮ್ಮನವರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕವಿ ಸತೀಶ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.

ಡಾ. ವಿಶ್ವನಾಥ ಬೋಂದಾಡೆ, ಪ್ರೊ. ಮಾರುತಿ ಶಿಡ್ಲಾಪುರ, ದೀಪಾ ಗೋನಾಳ, ಶಂಕ್ರಣ್ಣ ಗುರಪ್ಪನವರ, ಪ್ರಾಚಾರ್ಯರಾದ ಡಿ. ಸೋಮನಾಥ, ಮಂಜುನಾಥ ವಡ್ಡರ, ಬಸವರಾಜ ಪಾಟೀಲ, ಎಸ್.ವಿ. ಹೊಸಮನಿ, ಪ್ರೊ. ಸಿ. ಮಂಜುನಾಥ, ಶೇಖರ ಭಜಂತ್ರಿ, ಕುಮಾರ ಕಾಟೇನಹಳ್ಳಿ, ಲಿಂಗರಾಜ ಸೊಟ್ಟಪ್ಪನವರ, ಬಸವರಾಜ ಪೂಜಾರ, ಸಾವಿತ್ರಿ ಸಿಂಘ, ಮಲ್ಲಿಕಾರ್ಜುನ ಶಾಂತಗಿರಿ ಪಾಲ್ಗೊಂಡಿದ್ದರು.

ಅನಿತಾ ಮಂಜುನಾಥ ಸ್ವಾಗತಿಸಿದರು. ಯುವ ರಂಗ ನಿರ್ದೇಶಕ ಸಂತೋಷ ಸಂಕೊಳ್ಳಿ ಆಶಯ ನುಡಿ ನುಡಿದರು. ನಾಗರಾಜ ನಡುವಿನಮಠ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ನಾಗರಾಜ ಧಾರೇಶ್ವರ ವಂದಿಸಿದರು.

ಕಾವ್ಯ ಗಾಯನ: ಇದೇ ಸಂದರ್ಭದಲ್ಲಿ ಸಂಗೀತ ಕಲಾವಿದರಾದ ನರಸಿಂಹ ಕೋಮಾರ, ಪ್ರತೀಕ್ಷಾ ಕೋಮಾರ, ನಿಖಿತಾ ಮಾಳಗಿ ರಂಗ ಗೀತೆಗಳನ್ನು ಹಾಡಿದರು.

ಕಾವ್ಯ ರಂಗ ಪ್ರಯೋಗ: ಸತೀಶ ಕುಲಕರ್ಣಿ ಅವರ ಕಾವ್ಯ ಕುರಿತು ಕಟ್ಟುತ್ತೇವೆ ನಾವು ಕಾವ್ಯ ರಂಗ ಪ್ರಯೋಗ ಶೇಷಗಿರಿ ಕಲಾ ತಂಡದಿಂದ, ಖ್ಯಾತ ನಿರ್ದೇಶಕ ಸಂತೋಷ ಸಂಕೊಳ್ಳಿ ಅವರ ನಿರ್ದೇಶನದಲ್ಲಿ ಸಹೃದಯರನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.

PREV

Recommended Stories

ಪರಿಶುದ್ಧ ಬದುಕಿನಿಂದ ಜೀವನ ಉಜ್ವಲ: ಡಾ. ವೀರಸೋಮೇಶ್ವರ ಸ್ವಾಮೀಜಿ
ಜಿಲ್ಲೆಯಲ್ಲಿ ಶೇ.100ರಷ್ಟು ಕನ್ನಡ ಅನುಷ್ಠಾನವಾಗಲಿ: ಸಾಜೀದ್ ಮುಲ್ಲಾ.