ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಹಿಂದೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಜಾತ್ಯಾತೀತ ಎಂಬ ನಕಲಿ ಡೋಂಗಿಗಳು ನಡೆಸುತ್ತಿರುವ ಸರ್ಕಾರ, ಹಿಂದೂ ಒಕ್ಕಲಿಗ, ಲಿಂಗಾಯತ, ದಲಿತ, ಹಿಂದುಳಿದ ವರ್ಗಗಳ ಸರ್ಕಾರವಲ್ಲ. ಅದು ಕೇವಲ ಮುಸಲ್ಮಾನರ ಸರ್ಕಾರವಾಗಿದೆ ಎಂದು ದೂಷಿಸಿದರು.
ಇಸ್ರೇಲ್ ಮಾದರಿಯಲ್ಲಿ ಡ್ರೋನ್ ಮೂಲಕ ಹಿಂದೂಗಳನ್ನು ಹತ್ಯೆಗೈಯುವ ಸಂಚು ನಡೆಸಿರುವುದು ಬಯಲಾಗಿದೆ. ಹಿಂದೂ ಪವಿತ್ರ ದೇವಸ್ಥಾನಗಳ ಕುಡಿಯುವ ನೀರಿನ ಪೈಪ್ಗಳಿಗೆ ವಿಷಮಿಶ್ರಣ ಮಾಡಿ ಪ್ರಸಾದದಲ್ಲಿ ವಿಷಹಾಕಿ ಹಿಂದೂಗಳನ್ನು ಕೊಲೆ ಮಾಡಲು ಯತ್ನಿಸಿರುವುದನ್ನು ಎನ್ಐಎ ಪತ್ತೆ ಹಚ್ಚಿದೆ ಎಂದು ಎಚ್ಚರಿಸಿದರು.ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹಿಂದೂಪರ ಸರ್ಕಾರ ಅಧಿಕಾರಕ್ಕೆ ಬರಬೇಕೆಂದರೆ ಜಾತಿ ನೋಡದೆ ಪ್ರತಿಯೊಬ್ಬರೂ ಹಿಂದೂ ಪರ ವ್ಯಕ್ತಿಗೆ ಮತ ಹಾಕಲು ಪ್ರತಿಜ್ಞೆ ಮಾಡಬೇಕು. ರಾಜ್ಯದಲ್ಲಿ ಹಿಂದುತ್ವವನ್ನು ಉಳಿಸಬೇಕೆಂಬ ಚಿಂತನೆಯಿಂದ ಜಾತಿ, ಮತ ಬಿಟ್ಟು ಎಲ್ಲರೂ ಒಂದಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಹಿಂದೂಗಳು ಒಂದಾಗದಿದ್ದರೆ ಮತ್ತು ಹಿಂದೂಗಳನ್ನು ಪ್ರತಿನಿಧಿಸುವ ವ್ಯಕ್ತಿ ರಾಜ್ಯದ ನೇತೃತ್ವ ವಹಿಸದಿದ್ದರೆ ದೇಶದಲ್ಲಿ ಹಿಂದೂಗಳಿಗೆ ಭವಿಷ್ಯವಿಲ್ಲ ಎಂದು ಎಚ್ಚರಿಸಿದರು.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಾಯಿ ತೆಗೆದರೆ ಮುಸ್ಲಿಂ ಎನ್ನುತ್ತಾರೆ. ರಾಜ್ಯದ ವಿಧಾನಸೌಧ ಇಂದು ದಾಡಿ ಮತ್ತು ಬುರ್ಕಾಗಳಿಂದ ತುಂಬಿ ತುಳುಕುತ್ತಿದ್ದು, ಇದು ಕರ್ನಾಟಕದ ವಿಧಾನಸಭೆಯೋ ಅಥವಾ ಅರಬಸ್ತಾನದ ವಿಧಾನಸಭೆಯೋ ಎನ್ನುವಂತಾಗಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದರೂ ಕೂಡ ರಾಜ್ಯದ ಸಿಎಂ, ಡಿಸಿಎಂ ಮತ್ತು ಗೃಹ ಸಚಿವರು ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.
ಹಿಂದೂಗಳು ಜಾಗೃತರಾಗದಿದ್ದರೆ ಕಳೆದ 25 ವರ್ಷ ಮುಸ್ಲಿಂ ಮತ್ತು ಯಾದವರು ಬಿಹಾರವನ್ನು ಲೂಟಿ ಮಾಡಿದಂತೆ ರಾಜ್ಯದಲ್ಲಿಯೂ ಲೂಟಿ ನಡೆಯುತ್ತದೆ. ಗ್ಯಾರಂಟಿಯನ್ನು ನಂಬಿಕೊಂಡು ರಾಜ್ಯದ ಜನರು ಕಾಂಗ್ರೆಸ್ಗೆ ಮತ ನೀಡಿದ್ದರಿಂದ ಸರ್ಕಾರ ದಿವಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೋಟ್ ಚೋರಿ ಎಂದು ಈಗ ಬಾಯಿ ಬಡಿದುಕೊಳ್ಳುತ್ತಿರುವವರು ಮೊದಲು ಅವರ ಮುತ್ಯಾ (ತಾತ) ಅಧಿಕಾರಕ್ಕಾಗಿ ಏನು ಮಾಡಿದರೆಂದು ದೇಶದ ಜನರಿಗೆ ತಿಳಿಸಲಿ ಎಂದು ಪರೋಕ್ಷವಾಗಿ ರಾಹುಲ್ಗಾಂಧಿ ಅವರನ್ನು ಜರಿದರು.
ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡ ಯತ್ನಾಳ್ ಬಳಿಕ ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನಮಠಕ್ಕೆ ಭೇಟಿ ಕೊಟ್ಟು ಕ್ಷೇತ್ರಾಧಿದೇವತೆಗಳು ಮತ್ತು ಶ್ರೀಗಳ ದರ್ಶನಾಶೀರ್ವಾದ ಪಡೆದು ತೆರಳಿದರು.