ಕೊಳ್ಳೇಗಾಲ: ಮಾನವನ ಈ ದೇಹಕ್ಕೆ ಸಾವಿದೆ. ಆದರೆ ಜ್ಞಾನಕ್ಕೆ ಎಂದಿಗೂ ಸಾವಿಲ್ಲ ಎನ್ನುವುದನ್ನು ಬಸವಾದಿ ಶರಣರು ಹೇಳಿದ್ದಾರೆ. ಕನ್ನಡಕ್ಕೆ ಷಟ್ ಶಾಸ್ತ್ರಗಳನ್ನು ಬರೆದವರು ನಿಜಗುಣ ಶಿವಯೋಗಿಗಳು. ಹಲವಾರು ತತ್ವಜ್ಞಾನಿಗಳು ಬಂದು ಹೋಗಿದ್ದಾರೆ, ಆದರೆ ಜ್ಞಾನದ ಸಂಪತ್ತು ಎಂದರೆ ಅದು ನಿಜಗುಣ ಶಿವಯೋಗಿಗಳು ಮಾತ್ರ ಎಂದು ಶಿಕ್ಷಕ ಸದಾನಂದಸ್ವಾಮಿ ಹೇಳಿದರು.
ನಿಜಗುಣ ಶಿವಯೋಗಿ ಕನ್ನಡದಲ್ಲಿ ವಿವೇಕಚಿಂತಾಮಣಿ, ಕೈವಲ್ಯಪದ್ದತಿ, ಪುರಾತನರ ತ್ರಿವಿಧಿ, ಅನುಭವಸಾರ, ಪರಮಾರ್ಥಪ್ರಕಾಶಿಕೆ, ಪರಮಾನುಭವಬೋಧ, ಪರಮಾರ್ಥಗೀತೆ ಎಂಬ ಏಳು ಗ್ರಂಥಗಳನ್ನು ಬರೆದಿದ್ದಾರೆ. ಸಂಸ್ಕೃತದಲ್ಲಿ ಆತ್ಮತರ್ಕಚಿಂತಾಮಣಿ ಮತ್ತು ದರ್ಶನಸಾರ ಎಂಬ ಗ್ರಂಥಗಳನ್ನು ಬರೆದರೆಂದು ನಂಬಲಾಗಿದೆ. ಆದರೆ ಅವು ಉಪಲಬ್ಧವಿಲ್ಲ. ಕೆಲವು ತಮಿಳು, ತೆಲುಗು, ಮರಾಠಿ ಭಾಷೆಗಳಗೆ ಅನುವಾದವಾಗಿವೆ ಎಂದರು. ಜೆಎಸ್ಬಿ ಪ್ರತಿಷ್ಠಾನದ ಅಧ್ಯಕ್ಷ ಶಶಿಕುಮಾರ್, ಪ್ರಾಂಶುಪಾಲ ಬಿ ಗಿರೀಶ, ಸಹ ಶಿಕ್ಷಕರಾದ ಮಹೇಶ್ವರಿ, ರಾಶರಾಜು, ಶಿಲ್ಪ, ಯಲ್ಲಪ್ಪ, ಮಲ್ಲೇಶ, ದೀಪ್ತಿ, ನಮಿತಾ, ಶಿವನಂದಯ್ಯ, ಬಸವರಾಜು ಇದ್ದರು.