ರಾಣಿಬೆನ್ನೂರು: ಪ್ರಪಂಚದಲ್ಲಿ ಶಿವದೀಕ್ಷೆಗಿಂದ ದೊಡ್ಡ ದೀಕ್ಷೆ ಬೇರೊಂದಿಲ್ಲ. ಶಿವದೀಕ್ಷೆ ತೆಗೆದುಕೊಂಡವರಿಗೆ ಲೌಕಿಕ ಬದುಕಿನಲ್ಲಿ ದೈವಿಗುಣ ಹೆಚ್ಚಾಗಲಿದೆ ಎಂದು ಆವರಗೊಳ್ಳ ಹಿರೇಮಠದ ಓಂಕಾರ ಶಿವಾಚಾರ್ಯರು ನುಡಿದರು. ನಗರದ ದೊಡ್ಡಪೇಟೆ ಹಿರೇಮಠದ ಪಂಚಾಚಾರ್ಯ ಆವರಗೊಳ್ಳ ಗುರುಕಾರಣ್ಯ ಮಂಗಲ ಮಂದಿರದಲ್ಲಿ ಭಾನುವಾರ ಜಂಗಮ ನೌಕರರ ವೇದಿಕೆ ಹಾಗೂ ಜಂಗಮ ಸಮಾಜದಿಂದ ಏರ್ಪಡಿಸಿದ್ದ ಜಂಗಮ ವಟುಗಳಿಗೆ ಶಿವದೀಕ್ಷಾ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವಿಧಡೆಯಿಂದ ಆಗಮಿಸಿದ 52 ಜಂಗಮ ವಟುಗಳಿಗೆ ಶಿವದೀಕ್ಷೆ ನೀಡಲಾಯಿತು. ರಾಚಯ್ಯ ಹಿರೇಮಠ ನೇತೃತ್ವದ ಪುರೋಹಿತರ ತಂಡ ಶಾಸ್ತ್ರೋಕ್ತವಾಗಿ ಶಿವದೀಕ್ಷೆ ಕಾರ್ಯಕ್ರಮ ನಡೆಸಿಕೊಟ್ಟರು.ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪ್ರಶಾಂತ ದುಗ್ಗತ್ತಿಮಠ, ವಿ.ಎಂ. ಕೊಗನೂರಮಠ, ವಾಗೀಶ ಮಳೇಮಠ, ವೀರಬಸಯ್ಯ ಹಿರೇಮಠ ಮಾತನಾಡಿದರು. ಇದಕ್ಕೂ ಪೂರ್ವ ರೇಣುಕಾಚಾರ್ಯ ಮೂರ್ತಿಗಳಿಗೆ ರುದ್ರಾಭಿಷೇಕ, ಅಷ್ಟೋತ್ತರ ನಾಮಾವಳಿ, ಅಲಂಕಾರ ಪೂಜೆ ಹಾಗೂ ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು. ಪ್ರಕಾಶ ಗಚ್ಚಿನಮಠ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.ವೀರೇಶ ಬಾಳಿಹಳ್ಳಿಮಠ, ಶಿವಯೋಗಿ ಹಿರೇಮಠ, ಜಯದೇವಯ್ಯ ಹನಗೋಡಿಮಠ, ಪ್ರೊ. ಸುಜನ್ ಸಾಲೀಮಠ, ರವಿಕುಮಾರ ಪಾಟೀಲ, ಎಸ್.ಸಿ. ಷಡಕ್ಷರಿಮಠ, ಕೊಟ್ರೇಶ ಅಜ್ಜೋಡಿಮಠ, ಜಗದೀಶ ಮಳೇಮಠ, ವಾಗೀಶ ನೀರಲಗಿಮಠ, ಎಂ.ಕೆ. ಸಾಲೀಮಠ ಹಾಗೂ ತಾಲೂಕು ಜಂಗಮ ಅರ್ಚಕರ ಸಂಘದ ಪದಾಧಿಕಾರಿಗಳು ಇದ್ದರು.