ಕನಕಪುರ: ಅಧಿಕಾರ ಪಡೆದು ವಲಸೆ ಹೋಗುವ ಮಂದಿಯಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಮರಸಪ್ಪ ರವಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ವಲಸೆ ಬಂದವರು ಈ ನೆಲದಲ್ಲಿ ಅಧಿಕಾರ ಸವಿದು ಅಭಿವೃದ್ಧಿ ಕೆಲಸಗಳನ್ನು ಗೌಣವಾಗಿಸಿ, ಈಗ ಬೇರೊಂದು ಜಿಲ್ಲೆಗೆ ಪಲಾಯನ ಮಾಡಿ, ಅಲ್ಲಿ ಅಧಿಕಾರದ ಸಿಹಿ ಅನುಭವಿಸುತ್ತಿದ್ದಾರೆ. ಮುಂದೆ ಮತ್ತೆಲ್ಲಿಗೆ ಹೋಗುತ್ತಾರೋ ಯಾರಿಗೆ ಗೊತ್ತು. ವಲಸಿಗ ಕುಮಾರಸ್ವಾಮಿ ಅವರು ಎಚ್ಡಿ ಇನ್ಸಿಯಲ್ ತೆಗೆದು, ರಾಮನಗರಕ್ಕೆ ಬಂದಾಗ ಆರ್.ಡಿ.ಕುಮಾರಸ್ವಾಮಿ, ಚನ್ನಪಟ್ಟಣಕ್ಕೆ ಹೋದಾಗ ಸಿ.ಡಿ.ಕುಮಾರಸ್ವಾಮಿ ಎಂದು ತಮ್ಮ ಇನ್ಸಿಯಲ್ ಬದಲಿಸಿಕೊಳ್ಳಬೇಕಿತ್ತು. ಈಗ ಮಂಡ್ಯಕ್ಕೆ ಹೋಗಿದ್ದಾರೆ. ಅಲ್ಲಿಯಾದರೂ ಎಂ.ಡಿ.ಕುಮಾರಸ್ವಾಮಿ ಎಂದು ಬದಲಿಸಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಅವರು, ನಿಖಿಲ್ ರಾಜಕೀಯದಲ್ಲಿನ್ನು ಎಳಸು. ನಿಖಿಲ್ ವಯಸ್ಸಿನಲ್ಲಿ ಡಿ.ಕೆ.ಶಿವಕುಮಾರ್ ಅವರು ಜಿಲ್ಲಾ ಪರಿಷತ್ ಸದಸ್ಯರಾಗಿ, ಶಾಸಕರಾಗಿ, ಮಂತ್ರಿಯಾಗಿದ್ದರು. ಇಂತಹವರಿಂದ ಪಾಠ ಕಲಿಯವ ಅಗತ್ಯವಿಲ್ಲ. ಅಧಿಕಾರದ ಹಪಾಹಪಿಯಿಂದ ಮಾಧ್ಯಮದಲ್ಲಿ ಅವರ ತಂದೆ ಹೇಳಿಕೊಟ್ಟ ಸುಳ್ಳಿನ ಪುಂಗಿಯನ್ನು ಊದುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಿಂತ ಚುನಾವಣೆಗಳಲ್ಲಿ ಸೋಲಿನ ರುಚಿ ಅನುಭವಿಸಿರುವ ನಿಖಿಲ್ ಅವರು, ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತನಾಡಿ ದೊಡ್ಡವರಾಗಲು ಹೊರಟಿದ್ದಾರೆ. ಸ್ಮಾರ್ಟ್ ಸಿಟಿ ಪರವಾಗಿರುವ ರೈತರು ಮತ್ತು ರೈತ ಮುಖಂಡರನ್ನು ಏಜೆಂಟರು, ದಳ್ಳಾಲಿಗಳು ಎಂದು ಕರೆಯುವ ಇವರು ಮಣ್ಣಿನ ಮೊಮ್ಮಗನ ಎಂದು ಟಾಂಗ್ ನೀಡಿದ್ದಾರೆ.
ಕೆ ಕೆ ಪಿ ಸುದ್ದಿ 03: ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ಮರಸಪ್ಪ ರವಿ