ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಮಠದ ಹೊನ್ನಾಯಕನಹಳ್ಳಿ ಹೊರಭಾಗದಲ್ಲಿ ನಡೆದ ಶ್ರೀಗುರುಸಿದ್ದಪ್ಪಾಜಿ ಜಾತ್ರೆ ಹಾಗೂ ಸೇವಾ ಮಹೋತ್ಸವದ ಅಂಗವಾಗಿ ಮೈಸೂರು ಪಡುವರಹಳ್ಳಿ ಅಶ್ವ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಲಾ ಟ್ರಸ್ಟ್ನಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಡೆದ ಹಳ್ಳಿ ಹಕ್ಕಿ ಹಾಡು ಜಾನಪದ ಕಾರ್ಯಕ್ರಮವನ್ನು ತಂಬೂರಿ ವೀಣೆ ನುಡಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಪೂರ್ವಜರು ನೀಲಗಾರರ ಸೇವೆಗಳ ಪರಂಪರೆಯನ್ನು ಹಿಂದಿನಿಂದಲೂ ಸಂಪ್ರದಾಯ ಬದ್ದವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಮಂಟೇಸ್ವಾಮಿ ಪರಂಪರೆ ಅರ್ಥ ಮಾಡಿಕೊಂಡು ಮುಂದಕ್ಕೆ ಕೊಂಡೊಯ್ಯುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಂಟೇಸ್ವಾಮಿ ನೀಲಗಾರರ ಪರಂಪರೆಯಲ್ಲಿ ಆಡಂಬರವಿಲ್ಲ. ಸರಳತೆ ಕಾಪಾಡುವುದು ಮುಖ್ಯವಾಗಿದೆ. ಮಂಟೇಸ್ವಾಮಿ ವಿಚಾರಗಳನ್ನು ಅರ್ಥ ಮಾಡಿಕೊಂಡು ಜೀವನ ರೂಪಿಸಿಕೊಂಡು ಹೋಗಬೇಕಿದೆ ಎಂದರು.ಮಳವಳ್ಳಿ ಮಹದೇವಸ್ವಾಮಿ ಜಾನಪದ ಕಲೆಯನ್ನು ಕಳೆದು 50 ವರ್ಷಗಳಿಂದ ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ಜಾನಪದ ಕಲೆಯ ಮೂಲಕ ಮಹಾನೀಯರ ಚರಿತ್ರೆ ಜಗತ್ತಿಗೆ ತಿಳಿಯಲಿ ಎಂದರು.
ಜಾನಪದ ಗಾಯನ. ಸೋಬಾನೆ ಪದ, ಪೂಜಾಕುಣಿತ ಸೇರಿದಂತೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.