ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಕ್ಷೇತ್ರದ ಮಳಗಾಳು ಗ್ರಾಮದ ದಲಿತ ಯುವಕ ಅನೀಶ್ನ ಎಡಗೈಯನ್ನು ಕತ್ತರಿಸಿದ ಹರ್ಷ ಹಾಗೂ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆಯಾಗಲಿ ಎಂದು ರಾಜ್ಯದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಆದರೂ ಕೂಡ ಕ್ಷೇತ್ರದ ಶಾಸಕರು ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಸೌಜನ್ಯಕ್ಕಾದರೂ ಕೈ ಕಳೆದುಕೊಂಡ ದಲಿತನಿಗೆ ಸಾಂತ್ವನ ಹೇಳಿಲ್ಲ. ಅಲ್ಲದೇ ಇಂತಹ ದುರ್ಘಟನೆ ನಡೆದಿದ್ದರೂ ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ಸಾಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಗ್ರಾಮಕ್ಕೆ ಭೇಟಿ ನೀಡಿ ಧೈರ್ಯ ತುಂಬುವ ಕೆಲಸ ಮಾಡಿಲ್ಲ ಎಂದರು.
ಸದನದಲ್ಲಿ ದಲಿತರ 25 ಸಾವಿರ ಕೋಟಿ ರು. ದುರ್ಬಳಕೆ ವಿಚಾರದ ಬಗ್ಗೆ ಪ್ರಸ್ತಾಪಿಸಿದರೆ ಪರಮೇಶ್ವರ್, ಹೆಚ್.ಸಿ.ಮಹದೇವಪ್ಪ, ನರೇಂದ್ರಸ್ವಾಮಿ ಪದೇ ಪದೇ ದಲಿತ ಪದವನ್ನು ಬಳಸಬೇಡಿ, ನನಗೆ ಕರುಳು ಚುರುಕ್ ಎನ್ನುತ್ತದೆ ಎನ್ನುತ್ತಾರೆ. ಈ ಮೂವರಿಗೆ ಇದೇ ನಿಮ್ಮ ಉಪಮುಖ್ಯಮಂತ್ರಿ ಕ್ಷೇತ್ರದಲ್ಲಿ ಕೈ ಕಳೆದುಕೊಂಡ ದಲಿತನ ಬಗ್ಗೆ ಕರುಳು ಚುರುಕ್ ಎನ್ನಲಿಲ್ಲವೇ? ಸದನದಲ್ಲಿ ಈ ವಿಚಾರ ಪ್ರಸ್ತಾಪ ಮಾಡದ ನಿಮ್ಮಿಂದ ದಲಿತರಿಗೆ ರಕ್ಷಣೆ ಸಿಗುವುದಿಲ್ಲ ಎಂದರು.ಸಂವಿಧಾನ ರಕ್ಷಕರೆಂಬಂತೆ ಬಿಂಬಿಸಿಕೊಳ್ಳುವ ನೀವು ಒಬ್ಬ ಬಡ ದಲಿತನ ಕೈ ಕತ್ತರಿಸಿದ್ದರೂ ರಾಮನಗರದ ಚಾಮುಂಡಿತಾಯಿ ಸನ್ನಿಧಿಗೆ ಹೋಗಿ ರಾಜ್ಯದ ಜನರ ಒಳಿತಿಗೆ ಬೇಡಿಕೊಂಡಿದ್ದೀರಿ ಎಂದು ಹೇಳಿಕೆ ನೀಡಿದ್ದೀರಿ. ಆದರೆ ದಲಿತನ ಬರ್ಬರ ಹತ್ಯೆಗೆ ಹೊಂಚು ಹಾಕಿ ಕೈ ಕಳೆದುಕೊಂಡ ಇದೇ ಗ್ರಾಮದ ದಲಿತರು ಭಯಭೀತರಾಗಿರುವ ಸಂದರ್ಭದಲ್ಲಿ ಆ ಗ್ರಾಮಕ್ಕೆ ಭೇಟಿ ನೀಡಿ ದಲಿತರಿಗೆ ಆತ್ಮಸ್ಟೈರ್ಯ ತುಂಬಲಿಲ್ಲ, ಅಧಿಕಾರ ದಾಹಕ್ಕಾಗಿ ಸಂವಿಧಾನ ಅಂಬೇಡ್ಕರ್ ಹೆಸರನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷ ದಲಿತರಿಗೆ ದ್ರೋಹ ಮಾಡುತ್ತಿದೆ ಎಂದರು.
ಸಿದ್ದರಾಮಯ್ಯ, ಎಚ್.ಸಿ.ಮಹದೇವಪ್ಪ ಮತ್ತು ದಲಿತರಿಗೆ ರಕ್ಷಣೆ ನೀಡಲಾಗದ ಗೃಹಸಚಿವ ಡಾ.ಜಿ.ಪರಮೇಶ್ವರ್ ಈ ಮೂವರಿಗೆ ದಲಿತರ ಶಾಪ ತಟ್ಟದೇ ಇರುವುದಿಲ್ಲ. ದಲಿತರನ್ನು ಕಣ್ಣೀರು ಹಾಕಿಸಿದವರು ಉದ್ಧಾರ ಆದ ಉದಾಹರಣೆಗಳೇ ಇಲ್ಲ. ದೌರ್ಜನ್ಯಕ್ಕೆ ಒಳಗಾದವರ ಹಾಗೂ ವ್ಯಾಸಂಗದಿಂದ ವಂಚಿತರಾದವರ ಕಣ್ಣೀರು ನಿಮ್ಮನ್ನು ಸುಮ್ಮನೇ ಬಿಡುವುದಿಲ್ಲ ಎಂದರು.