ಕನ್ನಡಪ್ರಭ ವಾರ್ತೆ ಸೂಲಿಬೆಲೆ
ಈ ಹಿಂದೆ ರಾಜಕಾರಣಿಗಳು ಜಾತಿ, ಪಕ್ಷ ಕೇಳಿ ರಾಜಕಾರಣ ಮಾಡುತ್ತಿದ್ದರು, ಸಾಗುವಳಿ ಚೀಟಿಗಳನ್ನು ರಾತ್ರಿ ಸಮಯದಲ್ಲಿ ಕದ್ದು ಮುಚ್ಚಿ ವಿತರಣೆ ಮಾಡಲಾಗುತ್ತಿತ್ತು, ಅಂತಹ ಸಂಪ್ರದಾಯಗಳು ಇನ್ನು ಮುಂದೆ ನಡೆಯಲು ಬಿಡುವುದಿಲ್ಲ, ಎಲ್ಲವೂ ಬಹಿರಂಗವಾಗಿಯೇ ನಡೆಯುತ್ತದೆ. ರೈತರ ಹಕ್ಕುಗಳು ರೈತರ ಕುಟುಂಬಕ್ಕೆ ಸೇರುತ್ತವೆ. ಸೂಲಿಬೆಲೆ ಹೋಬಳಿ ವ್ಯಾಪ್ತಿಯ 187 ಎಕರೆ ಪ್ರದೇಶವನ್ನು 202 ಫಲಾನುಭವಿಗಳಿಗೆ ಪೋಡಿ ಮೂಲಕ ಹಕ್ಕು ನೀಡಲಾಗಿದೆ ಎಂದು ತಿಳಿಸಿದರು. ಹೊಸಕೋಟೆ ತಾಲೂಕಿನ 5 ಹೋಬಳಿಗಳಲ್ಲಿ ಪ್ರತಿ ತಿಂಗಳಿಗೊಮ್ಮೆ, ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಪೋಡಿ ಮುಕ್ತ ಗ್ರಾಮವನ್ನಾಗಿ ಮಾಡುವ ಜವಾಬ್ದಾರಿಯನ್ನು ತಾಲೂಕು ದಂಡಾಧಿಕಾರಿಗಳು ನಿಭಾಯಿಸಬೇಕು ಎಂದು ಸೂಚನೆ ನೀಡಿದರು.
ಹೊಸಕೋಟೆ ತಾಲೂಕು ದಂಡಾಧಿಕಾರಿ ಸೋಮಶೇಖರ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರವು ಕಂದಾಯ ಇಲಾಖೆಯ ನೂತನ 15 ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದ್ದು, ಪ್ರತಿ ರೈತನ ಮನೆ ಬಾಗಿಲಿಗೆ ಸೇವೆಗಳನ್ನು ಕೊಡುವುದು ನಮ್ಮ ಕರ್ತವ್ಯವಾಗಿದೆ. ಕರ್ನಾಟಕ ರಾಜ್ಯದಲ್ಲಿಯೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕನ್ನು ಪೋಡಿ ಮುಕ್ತ ತಾಲೂಕಾಗಿ ಮಾಡಲು ಎಲ್ಲಾ ಆಧಿಕಾರಿಗಳು ಶ್ರಮಿಸಿ ಮಾದರಿ ತಾಲೂಕು ಮಾಡುತ್ತೇವೆ ಎಂದರು.ಹೊಸಕೋಟೆ ತಾಲೂಕಿನ ಪೋಡಿಗೆ ಸಂಬಂಧಪಟ್ಟ 5250 ಪ್ರಕರಣಗಳಲ್ಲಿ 4300 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, ಶೀಘ್ರವಾಗಿ ಇತರೆ ಪ್ರಕರಣಗಳನ್ನು ಮುಗಿಸಿಕೊಡುತ್ತೇವೆ ಹಾಗೂ ಶಾಸಕರ ಆಶಯದಂತೆ ಇಲಾಖೆ ಸೇವೆ ನೀಡುತ್ತದೆ ಎಂದರು.