ಸಿ.ಕೆ. ನಾಗರಾಜ
ಕೆ.ವಿ. ಸುಬ್ಬಣ್ಣ, ಕೆ.ವಿ. ಅಕ್ಷರ, ಚಿದಂಬರ ರಾವ್ ಜಂಬೆ, ಸಿಜಿಕೆ, ಸಿ.ಬಸವಲಿಂಗಯ್ಯ, ಬಿ.ವಿ. ಕಾರಂತ, ಕಿ.ರಂ. ನಾಗರಾಜ, ಕೀರ್ತಿನಾಥ ಕುರ್ತಕೋಟಿ, ಯು.ಆರ್. ಅನಂತಮೂರ್ತಿ, ಮೇಕಪ್ ನಾಣಿ, ಹುಲುಗಪ್ಪ ಕಟ್ಟಿಮನಿ, ಅಲೆಮನೆ ಸುಂದರಮೂರ್ತಿ, ಮಾಲತೇಶ ಬಡಿಗೇರ್, ವೆಂಕಟರಮಣ ಐತಾಳ, ಸುರೇಶ್ ಆನಗಳ್ಳಿ, ಕೃಷ್ಣಕುಮಾರ್ ಯಾದವ್, ಪ್ರಮೋದ್ ಶಿಗ್ಗಾಂವ್, ಇಕ್ಬಾಲ್ ಅಹಮ್ಮದ್ ಸೇರಿದಂತೆ ಅನೇಕ ರಂಗಭೂಮಿಯ ದಿಗ್ಗಜರೊಡನೆ ಒಡನಾಟ ಹಾಗೂ ಘಟಾನುಘಟಿ ನಿರ್ದೇಶಕರು ನಿರ್ದೇಶಿಸಿರುವ ನಾಟಕಗಳಲ್ಲೂ ಉತ್ತಮ ಕಲಾವಿದೆಯಾಗಿ ಮಿಂಚಿದರು.
ನೀನಾಸಂ, ಶಿವಸಂಚಾರ ತಂಡಗಳ ತಿರುಗಾಟದಿಂದಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದು, ಪಂಚರಾತ್ರ, ತುಘಲಕ್, ವೆನಿಸಿನ ವರ್ತಕ, ಅಗ್ನಿ ಮತ್ತು ಮಳೆ ಸೇರಿದಂತೆ ನೂರಾರು ನಾಟಕಗಳಲ್ಲಿ ಅಭಿನಯಿಸಿ ಉತ್ತಮ ಕಲಾವಿದೆಯಾಗಿ ನಾಡಿನಾದ್ಯಂತ ಹೆಸರು ಸಂಪಾದಿಸಿದರು.ನಾಟಕಗಳಿಂದ ಕೀರ್ತಿ:
ಮುಡಿಗೇರಿದ ಪ್ರಶಸ್ತಿ:
2017ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಮುಂಬೈ ಕನ್ನಡ ಕಲಾ ಸಂಘ ಸ್ಪರ್ಧೆಯಲ್ಲಿ ಮತ್ತು ರಾಜ್ಯ ನಾಟಕ ಸ್ಪರ್ಧೆಯಲ್ಲಿ ಎರಡು ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ, ಕನ್ನಡ ಕಲಾ ಸಂಘದ ಟಿ.ಪಿ. ಕೈಲಾಸಂ ಪ್ರಶಸ್ತಿ, ಕೊಟ್ಟೂರು, ಕೂಡ್ಲಿಗಿಯಲ್ಲಿ ರಂಗ ಗೌರವ, ಇವರ ತಂದೆ ದುರ್ಗಾದಾಸಗೆ 1980ರಲ್ಲಿ ಹಾಗೂ 2017ರಲ್ಲಿ ಹನುಮಕ್ಕಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸುವ ಮೂಲಕ ತಂದೆ-ಮಗಳಿಬ್ಬರೂ ನಾಟಕ ಅಕಾಡಮಿ ಪ್ರಶಸ್ತಿ ಪಡೆದ ಅಪರೂಪದ ರಂಗ ಕುಟುಂಬವಾಗಿದೆ.ಚಲನಚಿತ್ರದಲ್ಲಿ ಪಾತ್ರ:
ರಿಷಬ್ ಶೆಟ್ಟಿ ಪ್ರೊಡಕ್ಷನ್ ನ ರೂಪಾಂತರ, ಸುದೀಪ್ ಅಭಿನಯದ ವಿಕ್ರಾಂತ್ ರೋಣ, ಶಿವರಾಜಕುಮಾರ ಅಭಿನಯದ ಭಜರಂಗಿ-2 ಸೇರಿದಂತೆ ಹಲವಾರು ಚಲನಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದ್ದರು. ಕುಬುಸ ಇವರ ಕೊನೆಯ ಚಿತ್ರವಾಗಿತ್ತು.‘ಹನುಮಕ್ಕ ಕನ್ನಡ ರಂಗಭೂಮಿಯ ಜೂನಿಯರ್ ಬಿ.ಜಯಶ್ರೀ ಎಂದೇ ಖ್ಯಾತರು. ಅನಾರೋಗ್ಯದ ಮುಂಚೆ ಕುಂ.ವೀರಭದ್ರಪ್ಪ ಕಥೆಯಾಧಾರಿತ ‘ಕುಬುಸ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಜನವರಿ ಕೊನೆಯಲ್ಲಿ ತೆರೆಗೆ ಬಂದಿತ್ತು. ಆ ವೇಳೆಗೆ ಅವರು ಬ್ರೈನ್ ಸ್ಟ್ರೋಕ್ ಗೆ ತುತ್ತಾದರು. ತಾವೇ ಅಭಿನಯಿಸಿದ ಕುಬುಸ ಚಿತ್ರವನ್ನು ನೋಡಲೇ ಇಲ್ಲ.
ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಸೃಷ್ಟಿಸಿದ ಸುಫ್ರಂಸೋ, ಕಾಂತಾರ 1 ಚಿತ್ರಕ್ಕೂ ಇವರು ಬುಕ್ ಆಗಿದ್ದರು. ತಮ್ಮ ಕೊನೆಯ ಚಿತ್ರ ಕುಬುಸ ಚಿತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದರು.