ಶಿಗ್ಗಾಂವಿ: ಪ್ರಸ್ತುತ ಸಮಾಜದಲ್ಲಿ ಬಸವಣ್ಣನ ತತ್ವಗಳ ಕುರಿತು ಚಿಂತನೆ ಮಾಡುವ ಅವಶ್ಯಕತೆ ಇದೆ ಎಂದು ಗೊಟಗೋಡಿ ಜಾನಪದ ವಿವಿಯ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕಿನ ಗೌರವಾಧ್ಯಕ್ಷ ಎಂ.ಬಿ. ಹಳೆಮನಿ ಮಾತನಾಡಿ, ಬಸವಣ್ಣನವರ ಜೀವನವೇ ಆದರ್ಶಮಯವಾಗಿರುವುದರೊಂದಿಗೆ ಅನುಕರಣೀಯವೂ ಆಗಿದೆ. ಬಸವಣ್ಣನವರು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆ ನೀಡುವ ಮೂಲಕ ಕನ್ನಡ ನಾಡಿನ ಸಂಸ್ಕೃತಿಕ ಲೋಕಕ್ಕೆ ಮೆರಗು ನೀಡಿದವರಾಗಿದ್ದು, ಸರ್ಕಾರ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಘೋಷಿಸಿದ್ದು ಪ್ರಸ್ತುತವಾಗಿದೆ ಎಂದರು.
ಸುಜನಿ ನಾಟ್ಯ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಶಾಲಾ ವಿದ್ಯಾರ್ಥಿಗಳು ಬಸವಣ್ಣನವರ ವಚನ ಗಾಯನ ಮತ್ತು ವಾಚನ ಮಾಡಿದರು.ಸಂತೋಧಾರ ಜೈ ಸಂತೋಷಿಮಾತಾ ಸಂಸ್ಥಾನದ ಅಧ್ಯಕ್ಷೆ ಸಂತೋಷಿ ಮಾತಾ, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ವಿಶ್ವನಾಥ ಬಂಡಿವಡ್ಡರ, ದೇವರಾಜ ಸುಣಗಾರ, ಮಾಲತೇಶ ನಾಯ್ಕೋಡಿ, ಡಾ. ಲಕ್ಷ್ಮಣ ಶಿವಳ್ಳಿ, ಡಾ. ನೇಮಾವತಿ ಶಿವಳ್ಳಿ, ನೀಲಾ ವನಹಳ್ಳಿ, ಸುಷ್ಮಾ ಕಮ್ಮಾರ, ವಿಜಯಲಕ್ಷ್ಮೀ ಕೌದಿ, ಕಲಾವತಿ ಅಕ್ಕಿ ಇತರರಿದ್ದರು.