ದಾಬಸ್ಪೇಟೆ: ಐತಿಹಾಸಿಕ ತಿಪ್ಪಗೊಂಡನಹಳ್ಳಿ (ಚಾಮರಾಜಸಾಗರ) ಜಲಾಶಯದ ಸ್ಲೂಯಿಸ್ ಗೇಟ್ಗಳ ತಾಂತ್ರಿಕ ದೋಷದಿಂದಾಗಿ ಒಂದು ವಾರದಿಂದ ನಿರಂತರ ನೀರು ಪೋಲಾಗುತ್ತಿದ್ದು, ಕೂಡಲೇ ಗೇಟ್ಗಳ ದುರಸ್ತಿ ಮಾಡದಿದ್ದರೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ನೆಲಮಂಗಲದ ಸುತ್ತಮುತ್ತಲ ರೈತರು ಎಚ್ಚರಿಸಿದ್ದಾರೆ.
ಬಣ್ಣ ಬಳಿದು ವಂಚಿಸಿದರೇ ಅಧಿಕಾರಿಗಳು?:
ಕೆಲವು ತಿಂಗಳ ಹಿಂದೆಯಷ್ಟೇ ಉಪಮುಖ್ಯಮಂತ್ರಿಗಳು ಆದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಜಲಾಶಯಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅಧಿಕಾರಿಗಳು ಕೇವಲ ಮೇಲ್ಭಾಗದ ಕ್ರೆಸ್ಟ್ ಗೇಟ್ಗಳಿಗೆ ಬಣ್ಣ ಬಳಿದು ಹೊಸ ಯಂತ್ರಗಳಂತೆ ಬಿಂಬಿಸಿದ್ದರು. ಆದರೆ ಜಲಾಶಯದ ತಳಭಾಗದಲ್ಲಿರುವ ನೀರನ್ನು ಖಾಲಿ ಮಾಡಲು ಬಳಸುವ ಹಳೆಯ 4 ಗೇಟ್ಗಳನ್ನು ದುರಸ್ತಿ ಮಾಡದೆ ಹಾಗೇ ಬಿಟ್ಟಿರುವುದರಿಂದಲೇ ನೀರು ಪೋಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ನೀರಿದ್ದರೆ ಮಾತ್ರ ನೆಲಮಂಗಲ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಕೊಳವೆಬಾವಿಗಳಲ್ಲಿ ನೀರು ಲಭ್ಯವಿರುತ್ತದೆ. ಈಗಾಗಲೇ ಮಳೆ ಕೊರತೆಯಿಂದ ಕಂಗಾಲಾಗಿರುವ ರೈತರಿಗೆ, ಕಣ್ಣೆದುರೇ ಜಲಾಶಯದ ನೀರು ಪೋಲಾಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಜಲಾಶಯದ ಗೇಟ್ಗಳು ಹಳೆಯದಾಗಿರುವ ಪರಿಣಾಮ ನೀರು ಸೋರಿಕೆಯಾಗುತ್ತಿದೆ. ಈ ವಿಷಯವನ್ನು ಈಗಾಗಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಗೇಟ್ಗಳ ದುರಸ್ತಿ ಅಥವಾ ಹೊಸ ಯಂತ್ರಗಳನ್ನು ಅಳವಡಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು.
ಕೋಟ್............
-ಚಿಕ್ಕಹನುಮೇಗೌಡ, ಅಧ್ಯಕ್ಷರು, ಕುಮುದ್ವತಿ ರೈತ ಸಂಸ್ಥೆ
ತಿಪ್ಪಗೊಂಡನಹಳ್ಳಿ ಜಲಾಶಯದ ಸ್ಲೂಯಿಸ್ ಗೇಟ್ಗಳ ತಾಂತ್ರಿಕ ದೋಷವನ್ನು ಸರಿಪಡಿಸುವಂತೆ ಕುಮುದ್ವತಿ ರೈತ ಸಂಸ್ಥೆ ಅಧ್ಯಕ್ಷ ಚಿಕ್ಕಹನುಮೇಗೌಡ ಹಾಗೂ ಪದಾಧಿಕಾರಿಗಳು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.