ಹೂವಿನಹಡಗಲಿ: ಕನಿಷ್ಠ ಜ್ಞಾನ ತಿಳಿವಳಿಕೆ ಇಲ್ಲದ ವ್ಯಕ್ತಿ ಶಾಸಕರಾಗಿದ್ದಾರೆ. ಇಂಥವರು ನನ್ನ ವಿರುದ್ಧ ತನಿಖೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ನಾನು ತಪ್ಪು ಮಾಡಿದ್ದರೆ ಆ ಶಿಕ್ಷೆಯನ್ನು ಅನುಭವಿಸಲು ಸಿದ್ಧನಿದ್ದೇನೆ ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ ಕಿಡಿಕಾರಿದರು.
ಅಧಿಕಾರಿಗಳ ಸಭೆ ಮಾಡಿದ್ದು ರೈತರಿಗೊಸ್ಕರ. ನನ್ನ ವಿರುದ್ಧ ತನಿಖೆಗೆ ಶಾಸಕರು ಅರ್ಜಿ ಹಾಕಿದ್ದಾರೆ. ಈ ಸಮಸ್ಯೆ ಇತ್ಯಾರ್ಥವಾಗುವ ವರೆಗೂ, ನಾನು ವಿಜಯನಗರ ಜಿಲ್ಲೆಯಲ್ಲಿ ಬೆಂಗಾವಲು ಪಡೆ ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನನ್ನ ಬಗ್ಗೆ ಈ ಶಾಸಕರಿಗೆ ಅಸೂಯೆ ಇದೆ. ಪ್ರಾಧಿಕಾರ, ನಿಗಮಗಳು ಗಂಜಿ ಕೇಂದ್ರ ಎಂದು ಜರಿದಿರುವ ಬಿಜೆಪಿಗರು, ತಮ್ಮ ಸರ್ಕಾರದ ಅವಧಿಯಲ್ಲಿ ಎಷ್ಟು ಜನರಿಗೆ ನೀಡಿದ್ದರು ಎನ್ನುವುದು ಗೊತ್ತಿದೆ. ನನಗೂ ಕಾನೂನು ಪ್ರಜ್ಞೆ ಇದೆ. ಸಾಮಾನ್ಯ ತಿಳಿವಳಿಕೆ ಇಲ್ಲದವರಿಗೆ ನಾನು ಉತ್ತರಿಸಲ್ಲ. ಇದಕ್ಕೆ ಸಮಯ ಬಂದಾಗ ಉತ್ತರಿಸುವೆ. ಬಿಜೆಪಿಗೆ ತಕ್ಕ ಪಾಠ ಕಲಿಸಲು ಜನ ಕಾಯುತ್ತಿದ್ದಾರೆ. 2028ಕ್ಕೆ ಅವರನ್ನು ಮತದಾರರು ಮನೆಗೆ ಕಳಿಸುತ್ತಾರೆ ಎಂದು ಭವಿಷ್ಯ ನುಡಿದರು.
ಬೆಂಗಾವಲು ವಾಹನ ಹಾಗೂ ಎಸ್ಕಾರ್ಟ್ ಬಗ್ಗೆ ಸರ್ಕಾರ ಈಗಾಗಲೇ ಶಾಸಕರಿಗೆ ಉತ್ತರ ನೀಡಿದೆ. ರಾಜ್ಯ ಗುಪ್ತವಾರ್ತೆಯ ನಿರ್ದೇಶನದಂತೆ ಜಿಲ್ಲೆ ಪ್ರವಾಸ ಕೈಗೊಳ್ಳುವ ಗಣ್ಯ ವ್ಯಕ್ತಿಗಳಿಗೆ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ಭದ್ರತೆ ಒದಗಿಸಲು ಸೂಚಿಸಿದೆ. ಆದ್ದರಿಂದ ಬೆಂಗಾವಲು ವಾಹನ ನೀಡಿದ್ದಾರೆ ಎಂದು ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.ಪ್ರತಿ ಗ್ರಾಪಂ ಮಟ್ಟದಲ್ಲಿ 6 ಜನರ ಗ್ಯಾರಂಟಿ ಯೋಜನೆ ಸಮಿತಿ ರಚನೆಹೂವಿನಹಡಗಲಿ: ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಚಿಸಿ ಪ್ರತಿ ಗ್ರಾಪಂಗೆ 6 ಜನರ ಆಯ್ಕೆ ಮಾಡಲಾಗುವುದು ಎಂದು ಗ್ಯಾರಂಟಿ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.ಪಟ್ಟಣದ ಅವರ ನಿವಾಸದಲ್ಲಿ ಭಾರತ್ ಜೋಡೋ ಅಭಿಯಾನ, ಗ್ಯಾರಂಟಿ ಯೋಜನೆ ಗ್ರಾಪಂ ಮಟ್ಟದಲ್ಲಿ ಸಮಿತಿ ರಚನೆ ಸಭೆಯಲ್ಲಿ ಮಾತನಾಡಿ, ರಾಜ್ಯದ ಯುವಕರಿಗೆ ರಾಜಕಾರಣದ ಜವಾಬ್ದಾರಿ ನೀಡುವ ಉದ್ದೇಶದಿಂದ, ಭಾರತ್ ಜೋಡೋ ಅಭಿಯಾನ ಜತೆಗೆ, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಯುವಕರು ಆನ್ಲೈನ್ ಮೂಲಕ ನೋಂದಣಿ ಮಾಡುತ್ತಿದ್ದಾರೆ. ಕ್ಷೇತ್ರದ 31 ಗ್ರಾಪಂನಲ್ಲಿ 4500 ಯುವಕರು ಸದಸ್ಯತ್ವ ಹೊಂದಿದ್ದಾರೆ. ರಾಜ್ಯದಲ್ಲಿ 7ನೇ ಸ್ಥಾನದಲ್ಲಿದೆ ಪ್ರತಿ ಸಂಘಕ್ಕೂ ₹10 ಲಕ್ಷವನ್ನು ಸರ್ಕಾರ ಅನುದಾನ ನೀಡಲಿದೆ ಎಂದರು.