ಗೋಕಾಕ ತಾಲೂಕಿನ ತಳಕಟನಾಳ ಗ್ರಾಮ ದೇವತೆ ಲಕ್ಷ್ಮೀದೇವಿಗೆ ಕೃಷ್ಣೆಯ ದಡದಲ್ಲಿ ವಿಶೇಷ ಪೂಜೆ ನಿಮಿತ್ತ ಮಂಗಳವಾರ ಮಧ್ಯಾಹ್ನ ೩ ಕ್ವಿಂಟಲ್ ಕಡಲೆ ಬೇಳೆಯ ಹೋಳಿಗೆ ತಯಾರಿಸಿ ಪ್ರಸಾದ ರೂಪದಲ್ಲಿ ಜನತೆ ಸವಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಗೋಕಾಕ ತಾಲೂಕಿನ ತಳಕಟನಾಳ ಗ್ರಾಮ ದೇವತೆ ಲಕ್ಷ್ಮೀದೇವಿಗೆ ಕೃಷ್ಣೆಯ ದಡದಲ್ಲಿ ವಿಶೇಷ ಪೂಜೆ ನಿಮಿತ್ತ ಮಂಗಳವಾರ ಮಧ್ಯಾಹ್ನ ೩ ಕ್ವಿಂಟಲ್ ಕಡಲೆ ಬೇಳೆಯ ಹೋಳಿಗೆ ತಯಾರಿಸಿ ಪ್ರಸಾದ ರೂಪದಲ್ಲಿ ಜನತೆ ಸವಿದರು. ಮಧ್ಯಾಹ್ನ 500ಕ್ಕೂ ಅಧಿಕ ಮಹಿಳೆಯರಿಗೆ ಉಡಿ ತುಂಬುವ ಕಾರ್ಯ ನಡೆಯಿತು. ನಂತರ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಹೋಳಿಗೆ ಪ್ರಸಾದ ಜರುಗಿತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಬಸಪ್ಪ ಸವತಿಹಾರ, ಬಾಳಪ್ಪ ಜಕ್ಕನ್ನವರ, ಹಣಮಂತ ಹೊನ್ನನ್ನವರ, ಶೇಖರ ಹೊಳಿಕಡೆ ಸೇರಿದಂತೆ ಅನೇಕರಿದ್ದರು. ಸುಮಾರು ೨ ಶತಮಾನಗಳಿಂದ ತಲೆತಲಾಂತರದಿಂದ ತಳಕಟನಾಳ ಗ್ರಾಮ ಗ್ರಾಮದೇವತೆ ಮಹಾಲಕ್ಷ್ಮೀದೇವಿಗೆ ಕೃಷ್ಣೆಯ ತೀರದಲ್ಲಿ ವಿಶೇಷ ಪೂಜೆ ಸಲ್ಲಿಸುವ ಹಾಗೂ ಉಡಿ ತುಂಬುವ ಕಾಯಕ ನಡೆಯುತ್ತ ಬಂದಿದೆಯಂತೆ. ಇದು ಪ್ರತಿ 3 ವರ್ಷಕ್ಕೊಮ್ಮೆ ಮಾತ್ರ ಗೋಕಾಕ ತಾಲೂಕಿನಿಂದ ರಬಕವಿ-ಬನಹಟ್ಟಿ ಸಮೀಪದ ಕೃಷ್ಣಾನದಿ ತೀರದಲ್ಲಿ ಈ ಸಂಭ್ರಮ ಮಾಡಲಾಗುತ್ತದೆ.
-ಲಗಮಣ್ಣ ದೊಡಮನಿ,
ಗ್ರಾಮದ ಹಿರಿಯರು.
ಸೋಮವಾರ ರಾತ್ರಿ ಕೃಷ್ಣಾ ನದಿ ತಟಕ್ಕೆ ಬಂದು ರಾತ್ರಿಯಿಡೀ ಹೋಳಿಗೆ ಮಾಡಿ ಬೆಳಗ್ಗೆ ದೇವಿಗೆ ನೈವೇದ್ಯ ಅರ್ಪಿಸಲಾಗುತ್ತದೆ. ಹೀಗೆ ಮೂರು ದಿನಗಳ ಕಾಲ ಈ ಕಾರ್ಯ ನಡೆಯುತ್ತದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಊರಿಗೆ ಊರೇ ಕೀಲಿಹಾಕಿ ಇಲ್ಲಿಗೆ ಬರುತ್ತೇವೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.