- ಉತ್ತರ ಭಾರತದಿಂದ ಬಂದ ಹೋಲ್ಸೇಲ್ ವ್ಯಾಪಾರಿಗಳಿಂದಾಗಿ ಬದುಕಿಗೆ ಕುತ್ತು: ಆರೋಪ
ಕನ್ನಡಪ್ರಭ ವಾರ್ತೆ ದಾವಣಗೆರೆ
ಉತ್ತರ ಭಾರತದಿಂದ ಬಂದಿರುವ ಮೊಬೈಲ್ ಹೋಲ್ಸೇಲ್ ವ್ಯಾಪಾರಿಗಳ ಅಸಂಘಟಿತ ನಡೆಯಿಂದಾಗಿ ಸ್ಥಳೀಯ ಮೊಬೈಲ್ ಮೆಕ್ಯಾನಿಕ್ಗಳ ಬದುಕು ದಿನೇದಿನೇ ಕಷ್ಟವಾಗುತ್ತಿದೆ. ಹೋಲ್ ಸೇಲ್ ಅಂಗಡಿಯವರು ಮೊಬೈಲ್ ರಿಪೇರಿ ಮಾಡದೇ ಕೇವಲ ವ್ಯಾಪಾರಕ್ಕೆಷ್ಟೇ ಸೀಮಿತವಾಗಿದ್ದರೆ ಎಲ್ಲರಿಗೂ ಅನುಕೂಲ ಆಗುತ್ತದೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಆಗ್ರಹಿಸಿ ದಾವಣಗೆರೆ ಜಿಲ್ಲಾ ಮೊಬೈಲ್ ಮೆಕ್ಯಾನಿಕ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಮಂಗಳವಾರ ಮೊಬೈಲ್ ಮೆಕ್ಯಾನಿಕ್ಗಳು ಜಿಲ್ಲಾದ್ಯಂತ ಸ್ವಯಂಪ್ರೇರಿತವಾಗಿ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.ನಗರದ ಅಶೋಕ ರಸ್ತೆಯ ಮುಖ್ಯ ರಸ್ತೆಯಲ್ಲಿ ಧರಣಿ ನಡೆಸಿ, ಗಾಂಧಿ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಸಿ, ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ವಾಹನಗಳಲ್ಲಿ ಮೆರವಣಿಗೆ ಮೂಲಕ ಡಿಸಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಶೇರ್ ಅಲಿ ಬೇಗ್, ಎಸ್.ಆರ್. ವೀರೇಶ್, ಎಸ್.ಬಿ.ಪುನೀತ್ ಸಿಂಗ್, ಎಂ.ಜಬೀವುಲ್ಲಾ, ನೂರಾರು ಮೆಕ್ಯಾನಿಕ್ಗಳು, ಇತರರು ಭಾಗವಹಿಸಿದ್ದರು.
-21ಕೆಡಿವಿಜಿ42: ದಾವಣಗೆರೆಯಲ್ಲಿ ಮೊಬೈಲ್ ಮೆಕ್ಯಾನಿಕ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಹೋಲ್ಸೇಲ್ ವ್ಯಾಪಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧರಣಿ ನಡೆಸಿದರು.