ಯೋಗದಿಂದ ಶರೀರ, ಮನಸ್ಸುಗಳ ಸಮನ್ವಯತೆ ಸಾಧ್ಯ

KannadaprabhaNewsNetwork |  
Published : Jun 22, 2024, 12:46 AM IST
ಸಿಕೆಬಿ-4  ತಾಲ್ಲೂಕಿನ ಪರೇಸಂದ್ರ ಗ್ರಾಮದದಲ್ಲಿ ಶಾಂತಾ ಶಿಕ್ಷಣ ಸಂಸ್ಥೆಗಳಲ್ಲಿ  ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗದಿನ  ಆಚರಣೆಯಲ್ಲಿ ವಿದ್ಯಾರ್ಥಿಗಳು ಯೋಗ ಪ್ರದರ್ಶನ ನೀಡಿದರು | Kannada Prabha

ಸಾರಾಂಶ

ಪರೇಸಂದ್ರ ಗ್ರಾಮದಲ್ಲಿ ಶಾಂತಾ ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗದಿನ ಆಚರಣೆಯಲ್ಲಿ ವಿದ್ಯಾರ್ಥಿಗಳು ಯೋಗ ಪ್ರದರ್ಶಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಯೋಗಾಬ್ಯಾಸವು ಶಾರೀರಿಕ ಚಟುವಟಿಕೆ ಮಾತ್ರವಾಗಿರದೇ ಮಾನಸಿಕ ಕ್ರಿಯಾಶೀಲತೆ ಹಾಗೂ ಭಾವನಾತ್ಮಕ ಸಮಸ್ಥಿತಿಗೆ ಉತ್ತೇಜನಕಾರಿಯಾಗಿದೆ ಎಂದು ಶಾಂತಾ ಶಿಕ್ಷಣ ಸಂಸ್ಥೆಗಳ ನಿದೇರ್ಶಕ ಡಾ.ಕೋಡಿರಂಗಪ್ಪ ಅಭಿಪ್ರಾಯ ಪಟ್ಟರು.

ತಾಲೂಕಿನ ಪರೇಸಂದ್ರ ಗ್ರಾಮದದಲ್ಲಿ ಶಾಂತಾ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗದಿನ ಆಚರಣೆಯಲ್ಲಿ ಮಾತನಾಡಿ, ಮನುಷ್ಯನಲ್ಲಿರುವ ಶಾರೀರಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ, ಸಾಮಾಜಿಕ, ನೈತಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳ ಸಮನ್ವಯತೆಯಿಂದ ಪರಿಪೂರ್ಣ ವ್ಯಕ್ತಿತ್ವ ಗಳಿಸಿಕೊಳ್ಳಲು ಯೋಗ ನೆರವಾಗುತ್ತದೆ ಎಂದರು.

ನಮ್ಮ ದೇಶದ ಪ್ರಾಚೀನ ಪರಂಪರೆಯಲ್ಲಿ ಪತಂಜಲಿ ಮಹರ್ಷಿಯವರಿಂದ ರೂಪುಗೊಂಡು ಆಚರಣೆಗೆ ಬಂದ ಯೋಗಕ್ಕೆ ಇಂದು ಜಗತ್ತಿನಾದ್ಯಂತ ಬೇಡಿಕೆಯಿದ್ದು, ಯೋಗವನ್ನು ಮನುಕುಲಕ್ಕೆ ಕೊಡುಗೆಯಾಗಿ ನೀಡಿರುವ ಗೌರವಕ್ಕೆ ಭಾರತವು ಪಾತ್ರವಾಗಿದೆ. ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಯತ್ನದಿಂದಾಗಿ 2015 ರ ಜೂನ್ 21ರಿಂದ ಅಂತಾರಾಷ್ಟ್ರೀಯ ಯೋಗ ದಿನವನ್ನು ಜಗತ್ತಿನ 180 ಕ್ಕೂ ಹೆಚ್ಚು ರಾಷ್ಟ್ರಗಳು ಆಚರಿಸುತ್ತಿವೆ ಎಂದರು.

ಭಾರತದ ಗುರುಕುಲ ಪರಂಪರೆಯಲ್ಲಿ ಕಡ್ಡಾಯವಾಗಿ ಯೋಗವನ್ನು ಬೋಧಿಸಲಾಗುತ್ತಿತ್ತು. ಯೋಗವು ಶಿಕ್ಷಣದ ಬಹುಮುಖ್ಯ ಅಂಶವಾಗಿದ್ದು, ಶಾರೀರಿಕ ವಿಕಸನ, ಜ್ಞಾನೇಂದ್ರಯಗಳ ಪಟುತ್ವ, ಪ್ರಜ್ಞೆ, ಜ್ಞಾನ ಮತ್ತು ಆಲೋಚನೆಯನ್ನು ಬಲಗೊಳಿಸಿ ಸಂಸ್ಕಾರಗೊಳಿಸಲು ಯೋಗಾಭ್ಯಾಸವು ನೆರವಾಗುತ್ತದೆ. ಯೋಗಾಭ್ಯಾಸದಿಂದ ಅಧ್ಯಯನ ಪರಿಗಣಿತಿ, ಸಂಸ್ಕಾರ ಹಾಗೂ ಸೇವಾಭಾವನೆಗಳು ಹುಟ್ಟಿ ಬೆಳೆಯುತ್ತವೆ. ಯೋಗಾಭ್ಯಾಸವು ಯಾವುದೇ ದೇಶ, ಭಾಷೆ, ಲಿಂಗ, ಜಾತಿ, ಧರ್ಮಗಳಿಗೆ ಸೀಮಿತವಾಗುವುದಿಲ್ಲ, ಸರ್ವಜನರಿಗೂ ಯೋಗದ ಅವಶ್ಯಕತೆಯಿದ್ದು, ಯೋಗದಿಂದ ಜನರ ನಡುವೆ ಸೋದರತ್ವ, ಸಹಬಾಳ್ವೆ ಹಾಗೂ ಭಾವೈಕ್ಯತೆ ಗುಣಗಳು ಬೆಳೆಯುತ್ತವೆ. ಶಾಲಾ ಹಂತದಲ್ಲಿಯೇ ವಿವಿಧ ಆಸನಗಳು, ಧ್ಯಾನ, ಪ್ರಾಣಾಯಾಮ ಹಾಗೂ ವಿಭಿನ್ನ ಮುದ್ರೆಗಳನ್ನು ಕಲಿತು ಅಭ್ಯಾಸ ಮಾಡುವುದರಿಂದ ವಿದ್ಯಾರ್ಥಿಗಳ ಅಧ್ಯಯನ ಶಕ್ತಿ ಹಾಗೂ ಜ್ಞಾನಾರ್ಜನೆ ಶಕ್ತಿಯುತವಾಗಿ ಮೂಡಿ ಬರುತ್ತದೆ ಎಂದು ಅಭಿಪ್ರಾಯ ಪಟ್ಟರು.

ಯೋಗದ ವಿವಿಧ ಆಸನಗಳನ್ನು ಪ್ರದರ್ಶನದ ಮೂಲಕ ಪ್ರಸ್ತುತಪಡಿಸಿದ ಬೆಂಗಳೂರಿನ ಎಂಸಿಕೆಎಸ್ ಸಂಸ್ಥೆಯ ಹಸಿದವರಿಗೆ ಆಹಾರ ಫೌಂಡೇಷನ್ ನ ಯೋಗಪಟು ಪವಿತ್ರಾ ಮಾತನಾಡಿ, ಯೋಗಾಭ್ಯಾಸವು ಕೇವಲ ಯೋಗದಿನಕ್ಕೆ ಮಾತ್ರ ಸೀಮಿತವಾಗದೇ ಪ್ರತಿದಿನ ನಿಯಮಿತ ಸಮಯ ಯೋಗಾಭ್ಯಾಸ ಮಾಡುವುದರಿಂದ ಮನಸ್ಸು ಪ್ರಸನ್ನತೆಯಿಂದ ಅರಳುತ್ತದೆ. ಶಾಲಾ ಹಂತದಲ್ಲಿ ಯೋಗಾಭ್ಯಾಸ ರೂಢಿಸಿಕೊಂಡರೆ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಹೇಳಿದರು.

ಸಂಸ್ಥೆಯ ಯೋಗ ಶಿಕ್ಷಕಿ ಶ್ರೇಯಾ ವಿವಿಧ ಆಸನಗಳನ್ನು ಪ್ರದರ್ಶನದೊಂದಿಗೆ ಪ್ರಸ್ತುತ ಪಡಿಸಿದರು. ಶಾಂತಾ ಸಂಸ್ಥೆಯ ವಿದ್ಯಾರ್ಥಿಗಳು ನಡೆಸಿದ ಸಾಮೂಹಿಕ ಯೂಗಾಸನವು ಅತ್ಯಂತ ಪ್ರೇರಕವಾಗಿತ್ತು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ನವೀನ್ ಸೈಮನ್, ಡಾ.ಗೋಪಿನಾಥ್, ಉಪಪ್ರಾಂಶುಪಾಲೆ ಕಲ್ಯಾಣಿ, ಅಧ್ಯಾಪಕರಾದ ರಂಗರಾಜನ್, ಕಲೀಮುಲ್ಲ, ಲವಕುಮಾರ್, ಜ್ಞಾನಾರ್ಜುನ್, ವೆಂಕಟೇಶ್, ಶಿವು, ಅಂಬಿಕ, ರೇವತಿ, ಮಮತ, ಸುಧಾ, ಮೀನಾಜ್, ಅನಿಷ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈಯಕ್ತಿಕ ಕಾರಣದಿಂದ ಬೇಸತ್ತು ಕಿರುತೆರೆ ಯುವ ನಟಿ ಆತ್ಮ*ತ್ಯೆ
ಜ.6 ಇಲ್ಲವೇ 9ಕ್ಕೆ ಡಿಕೆಶಿ ಸಿಎಂ 200% ಕನ್ಫರ್ಮ್: ಇಕ್ಬಾಲ್