ರೈಲಲ್ಲಿ ಟಿಕೆಟ್‌ ರಹಿತ ಪ್ರಯಾಣ 9 ತಿಂಗಳಲ್ಲಿ ₹46 ಕೋಟಿ ದಂಡ: ನೈಋತ್ಯ ರೈಲ್ವೆ ಇತಿಹಾಸದಲ್ಲೇ ದಾಖಲೆ ಮೊತ್ತ!

KannadaprabhaNewsNetwork |  
Published : Jan 18, 2024, 02:02 AM ISTUpdated : Jan 18, 2024, 05:30 PM IST
South Wastern Railway

ಸಾರಾಂಶ

ನೈಋತ್ಯ ರೈಲ್ವೆಯು ಕಳೆದ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಟಿಕೆಟ್ ರಹಿತವಾಗಿ ಪ್ರಯಾಣಿಸಿದ 6,27,014 ಪ್ರಕರಣ ದಾಖಲಿಸಿಕೊಂಡು ₹46.31 ಕೋಟಿ ದಂಡ ಸಂಗ್ರಹಿಸಿದೆ.

ಕನ್ನಡಪ್ರಭವಾರ್ತೆ ಬೆಂಗಳೂರು

ನೈಋತ್ಯ ರೈಲ್ವೆಯು ಕಳೆದ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಟಿಕೆಟ್ ರಹಿತವಾಗಿ ಪ್ರಯಾಣಿಸಿದ 6,27,014 ಪ್ರಕರಣ ದಾಖಲಿಸಿಕೊಂಡು ₹46.31 ಕೋಟಿ ದಂಡ ಸಂಗ್ರಹಿಸಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಶೇ.9.95ರಷ್ಟು ಹೆಚ್ಚಳವಾಗಿದ್ದು, ಇದು ನೈಋತ್ಯ ರೈಲ್ವೆ ಪ್ರಾರಂಭವಾದಾಗಿನಿಂದ ಅತೀ ಹೆಚ್ಚು ದಂಡ ವಸೂಲಿ ಆಗಿದೆ. ಡಿಸೆಂಬರ್ ತಿಂಗಳಲ್ಲಿ 72,041 ಪ್ರಕರಣ ದಾಖಲಿಸಿ ₹5.13 ಕೋಟಿ ದಂಡ ಸಂಗ್ರಹಿಸಲಾಗಿದೆ.

ಬೆಂಗಳೂರು ವಿಭಾಗದಲ್ಲೇ ಅತಿ ಹೆಚ್ಚು 3,68,205 ಪ್ರಕರಣ ದಾಖಲಿಸಿ, ₹28.26 ಕೋಟಿ ದಂಡ ಸಂಗ್ರಹಿಸಲಾಗಿದೆ. ಹುಬ್ಬಳ್ಳಿ ವಿಭಾಗ 96,790 ಪ್ರಕರಣ ದಾಖಲಿಸಿ ₹6.36 ಕೋಟಿ, ಮೈಸೂರು ವಿಭಾಗ 1,00,538 ಪ್ರಕರಣ ದಾಖಲಿಸಿ ₹5.91 ಕೋಟಿ ದಂಡ ಸಂಗ್ರಹಿಸಿದೆ. 

ನೈಋತ್ಯ ರೈಲ್ವೆಯ ಫ್ಲೈಯಿಂಗ್ ಸ್ಕ್ವಾಡ್ (ಕೇಂದ್ರ ಕಚೇರಿ) ವಿಭಾಗ 61,481 ಪ್ರಕರಣ ದಾಖಲಿಸಿ ₹5.77 ಕೋಟಿ ದಂಡ ಸಂಗ್ರಹಿಸಿದೆ.

ಟಿಕೆಟ್ ರಹಿತ ಮತ್ತು ಅನಿಯಮಿತ ಪ್ರಯಾಣ ತಡೆಯಲು ಎಕ್ಸ್ಪ್ರೆಸ್, ವಿಶೇಷ ರೈಲು ಸೇರಿದಂತೆ ಪ್ರಯಾಣಿಕರ ರೈಲುಗಳಲ್ಲಿ ಟಿಕೆಟ್ ತಪಾಸಣಾ ಕಾರ್ಯವನ್ನು ನಿರಂತರವಾಗಿ ನಡೆಸಲಾಗುತ್ತಿದೆ. 

ರೈಲ್ವೆ ಕಾಯ್ದೆ ಪ್ರಕಾರ, ಯಾವುದೇ ಪ್ರಯಾಣಿಕರು ಪಾಸ್, ಟಿಕೆಟ್ ಇಲ್ಲದೆ ಪ್ರಯಾಣಿಸುವುದು ಕಂಡುಬಂದಲ್ಲಿ ₹250 ದಂಡ ಕಟ್ಟಬೇಕಾಗುತ್ತದೆ. (ಪ್ರಯಾಣಿಕರು ಪ್ರಯಾಣಿಸಿದ ದೂರ, ರೈಲು ಪ್ರಾರಂಭವಾದ ನಿಲ್ದಾಣದಿಂದ ಸಾಮಾನ್ಯ ಶುಲ್ಕ ಮತ್ತು ಹೆಚ್ಚುವರಿ ಶುಲ್ಕ ₹250) ವಿಧಿಸಲಾಗುತ್ತದೆ. 

ಟಿಕೆಟ್ ತಪಾಸಣೆಯಲ್ಲಿ ಹೆಚ್ಚಿನ ಪ್ರಕರಣ ದಾಖಲಿಸಿದ ಸಿಬ್ಬಂದಿಯನ್ನು ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಶ್ಲಾಘಿಸಿದ್ದಾರೆ.ಬಿಎಂಟಿಸಿಯಿಂದ ₹7.37 ಲಕ್ಷ ವಸೂಲಿ

ಕನ್ನಡಪ್ರಭ ವಾರ್ತೆ ಬೆಂಗಳೂರುಬಿಎಂಟಿಸಿ ಜಾಗೃತ ದಳ ಡಿಸೆಂಬರ್‌ ತಿಂಗಳಲ್ಲಿ 16,785 ಟ್ರಿಪ್‌ಗಳ ತಪಾಸಣೆ ನಡೆಸಿ 3,502 ಟಿಕೆಟ್‌ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ ಅವರಿಂದ ₹7.02 ಲಕ್ಷ ದಂಡ ವಸೂಲಿ ಮಾಡಿದೆ. 

ಜತೆಗೆ ನಿರ್ವಾಹಕರ ವಿರುದ್ಧ 1,085 ಪ್ರಕರಣಗಳನ್ನು ದಾಖಲಿಸಲಾಗಿದೆ. ಮಹಿಳಾ ಪ್ರಯಾಣಿಕರಿಗೆ ಮೀಸಲಿರಿಸಲಾಗಿದ್ದ ಆಸನಗಳಲ್ಲಿ ಕುಳಿತಿದ್ದ 347 ಪುರುಷ ಪ್ರಯಾಣಿಕರಿಂದ ₹34,700 ದಂಡ ವಸೂಲಿ ಮಾಡಲಾಗಿದೆ. 

ಒಟ್ಟಾರೆ ಡಿಸೆಂಬರ್‌ ತಿಂಗಳಲ್ಲಿ 3,849 ಪ್ರಯಾಣಿಕರಿಂದ ₹7.37 ಲಕ್ಷ ದಂಡ ವಸೂಲಿ ಮಾಡಿರುವುದಾಗಿ ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ
ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ