ದೇಶಿಪುರ ಕಾಲೋನಿ ಬಳಿ ಹುಲಿ ಸೆರೆಗೆ ಕೂಂಬಿಂಗ್

KannadaprabhaNewsNetwork |  
Published : Jun 21, 2025, 12:49 AM IST
20ಸಿಎಚ್‌ಎನ್‌59ಗುಂಡ್ಲುಪೇಟೆ ತಾಲೂಕಿನ ದೇಶಿಪುರ ಕಾಲೋನಿ ಬಳಿ ಗುರುವಾರ ಕುರಿಗಾಹಿ ಗಿರಿಜನ ಮಹಿಳೆಯನ್ನು ಬಲಿ ಪಡೆದ ಹುಲಿ ಸೆರೆಗೆ ಅರಣ್ಯ ಇಲಾಖೆ ಶುಕ್ರವಾರ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿರುವುದು. | Kannada Prabha

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ದೇಶಿಪುರ ಕಾಲೋನಿ ಬಳಿ ಗುರುವಾರ ಕುರಿಗಾಹಿ ಗಿರಿಜನ ಮಹಿಳೆಯನ್ನು ಬಲಿ ಪಡೆದ ಹುಲಿ ಸೆರೆಗೆ ಅರಣ್ಯ ಇಲಾಖೆ ಶುಕ್ರವಾರ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿತು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ತಾಲೂಕಿನ ದೇಶಿಪುರ ಕಾಲೋನಿ ಬಳಿ ಗುರುವಾರ ಕುರಿಗಾಹಿ ಗಿರಿಜನ ಮಹಿಳೆಯನ್ನು ಬಲಿ ಪಡೆದ ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಶುಕ್ರವಾರ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದರು. ಗುರುವಾರ ಸಂಜೆಯಿಂದಲೇ ದೇಶಿಪುರ ಕಾಲೋನಿಯಲ್ಲಿ ಬೀಡು ಬಿಟ್ಟಿದ್ದ ಎಸ್ ಟಿಪಿಎಫ್ 12, ಎಲಿಫೆಂಟ್ ಟಾಸ್ಕ್ ಫೋರ್ಸ್‌ 3, ಕ್ಯಾಂಪ್ ವಾಚರ್ 10, ಡಿಆರ್ ಎಫ್ ಒ 2, ಗಾರ್ಡ್ಸ್ 2, ಇಬ್ಬರು ವಾಚರ್ ಗಳು ಎಸಿಎಫ್ ಸುರೇಶ್ ಹಾಗು ಆರ್ ಎಫ್ ಒ ಕೆ.ಪಿ.ಸತೀಶ್ ಕುಮಾರ್ ನೇತೃತ್ವದಲ್ಲಿ 4 ವಾಹನಗಳನ್ನು ಬಳಸಿಕೊಂಡು ಎರಡು ತಂಡಗಳಲ್ಲಿ ಶುಕ್ರವಾರ ಬೆಳಗ್ಗೆ ಗಸ್ತು ತಿರುಗುವ ಮತ್ತು ಲದ್ದಿ ಹಾಕಿರುವ, ಹೆಜ್ಜೆ ಗುರುತು ಮೂಡಿರುವ ಬಗ್ಗೆ ಪರಿಶೀಲಿಸುವ ಮೂಲಕ ಹುಲಿಯ ಚಲನವಲನ ಗಮನಿಸಿದರು. ಎರಡು ಭಾರಿ ಡ್ರೋಣ್ ಹಾರಿಸುವ ಮೂಲಕ ಹದ್ದಿನ ಕಣ್ಣಿಟ್ಟಿದ್ದರು. ಆದರೆ ಎಲ್ಲೂ ಹುಲಿಯ ಸುಳಿವು ಸಿಗಲಿಲ್ಲ. ಬೇಟೆಯಾಡಿದ ಜಾಗಕ್ಕೆ ಮತ್ತೆ‌ ಬರಬಹುದು ಎಂಬ ನಿರೀಕ್ಷೆಯಲ್ಲಿ ದಾಳಿ ನಡೆಸಿದ ಜಾಗದಲ್ಲಿ ಬೋನ್ ಇರಿಸಿ ಬಲಿ ಪ್ರಾಣಿ ಕಟ್ಟಲಾಗಿದೆ. ಅಲ್ಲದೇ ಟ್ರ್ಯಾಪಿಂಗ್ ಸಲುವಾಗಿ 10 ಕ್ಯಾಮರಾಗಳನ್ನು ಆಯಕಟ್ಟಿನ ಜಾಗಗಳಲ್ಲಿ ಕಟ್ಟಲಾಗಿದೆ.

ಅಂತ್ಯಸಂಸ್ಕಾರ:ಹುಲಿ ದಾಳಿಯಿಂದ ಮೃತಪಟ್ಟ ಪುಟ್ಟಮ್ಮನ ಅಂತ್ಯ ಸಂಸ್ಕಾರ ಜೇನುಕುರುಬ ಸಂಪ್ರದಾಯದಂತೆ ಶುಕ್ರವಾರ ನೆರವೇರಿತು. ಹುಲಿ ದಾಳಿ ಘಟನೆ ಹಿನ್ನೆಲೆಯಲ್ಲಿ ಶುಕ್ರವಾರವೂ ದೇಶಿಪುರ, ಬರಗಿ, ಆಲತ್ತೂರು ಗ್ರಾಮಗಳ ರೈತರು, ಯುವಕರು ತಂಡಗಳಲ್ಲಿ ಆಗಮಿಸಿ ಕೂಂಬಿಂಗ್ ಕಾರ್ಯಾಚರಣೆ, ಕ್ಯಾಮರಾ ಅಳವಡಿಕೆ ಇತರೆ ಕ್ರಮಗಳನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರು. ದಾಳಿ ನಂತರ ಹುಲಿ ಅರಣ್ಯದೊಳಗೆ ಹೋಗಿರುವ ಅಥವಾ ತಮ್ಮ ಊರುಗಳತ್ತ ಬಂದಿರುವ ಸಾಧ್ಯತೆ ಗಳ ಬಗ್ಗೆ ಚರ್ಚಿಸುತ್ತಿದ್ದರು. ತಾಲೂಕಿನಲ್ಲಿ ಹುಲಿ ದಾಳಿ ಘಟನೆ ಮರುಕಳುಹಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡಿರುವ ಹಿನ್ನೆಲೆಯಲ್ಲಿ ಜಾನುವಾರುಗಳನ್ನು ಜಮೀನಿಗೆ ಕರೆದುಕೊಂಡು ಹೋಗಲು, ಹುಲ್ಲು ಕೀಳಲು, ಮೇವು,ಸೊಪ್ಪು ತರಲು ರೈತರು ಒಬ್ಬೊಬ್ಬರೇ ಹೋಗಲು ಭಯ ಪಡುತ್ತಿದ್ದಾರೆ. ಬಾಳೆ ತೋಟಗಳ ಒಳಗೆ ನುಗ್ಗಲು ನಾಲ್ಕಾರು ಭಾರಿ ಯೋಚಿಸುತ್ತಿದ್ದಾರೆ.

ಹುಲಿ ದಾಳಿ ನಡೆಸಿದ ಪ್ರದೇಶದ ಬದಲು ಬೇರೆ ಕಡೆಯಲ್ಲಿ ಜಾನುವಾರು ಮೇಯಿಸುವಂತೆ ಸುತ್ತಲಿನ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿ ಮತ್ತು ನೌಕರರು ಟಾಂಟಾಂ ಹಾಕಿಸುವ ಮೂಲಕ ತಿಳಿವಳಿಕೆ ನೀಡಲಾಗಿದೆ.-ಸುರೇಶ್, ಎಸಿಎಫ್, ಗುಂಡ್ಲುಪೇಟೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ