ಟೋಲ್ ಶುಲ್ಕ ಏರಿಕೆ: ಸಾರ್ವಜನಿಕರ ತೀವ್ರ ವಿರೋಧ

KannadaprabhaNewsNetwork |  
Published : Apr 02, 2026, 02:30 AM IST
ವಿಜಯಪುರ | Kannada Prabha

ಸಾರಾಂಶ

ಉಡುಪಿ ಜಿಲ್ಲೆಯಲ್ಲಿರುವ ರಾ.ಹೆ. ಟೋಲ್ ಗೇಟ್‌ಗಳಲ್ಲಿ ಏಕಾಏಕಿ ಶುಲ್ಕವನ್ನು ಏರಿಸಲಾಗಿದ್ದು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಉಡುಪಿ: ಉಡುಪಿ ಜಿಲ್ಲೆಯಲ್ಲಿರುವ ರಾ.ಹೆ. ಟೋಲ್ ಗೇಟ್‌ಗಳಲ್ಲಿ ಏಕಾಏಕಿ ಶುಲ್ಕವನ್ನು ಏರಿಸಲಾಗಿದ್ದು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಉಡುಪಿ ಜಿಲ್ಲೆಯ ದಕ್ಷಿಣದ ಗಡಿಭಾಗದ ಹೆಜಮಾಡಿ, ಉತ್ತರದ ಗಡಿಭಾಗದ ಶಿರೂರು ಹಾಗೂ ಬ್ರಹ್ಮಾವರದ ಸಾಸ್ತಾನಗಳಲ್ಲಿ ಸೇರಿ ಒಟ್ಟು 3 ಟೋಲ್ ಗೇಟ್‌ ಗಳಿವೆ. ಈ ಎಲ್ಲಾ ಟೋಲ್ ಗಳಲ್ಲಿ ಮಂಗಳವಾರ ಮಧ್ಯರಾತ್ರಿ 12 ಗಂಟೆಯಿಂದ ಟೋಲ್ ಶುಲ್ಕ 5-10 ರು.ಗಳವರೆಗೆ ಹೆಚ್ಚಿಸಲಾಗಿದೆ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೊಸ ಸೂಚನೆಯಂತೆ ಟೋಲ್ ದರ ಏರಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಪೂರ್ವ ಸೂಚನೆ, ಪತ್ರಿಕಾ ಪ್ರಕಟಣೆ ಇಲ್ಲದೆ ಏಕಾಏಕಿ ಈ ರೀತಿ ದರ ಏರಿಕೆಯ ಬಗ್ಗೆ ವಾಹನ ಮಾಲಕರು - ಚಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇದುವರೆಗೆ 60 ರು. ಇದ್ದ ಕಾರು ಜೀಪು ವ್ಯಾನ್ ಗಳ ಟೋಲ್ ಶುಲ್ಕವನ್ನು 65 ರು.ಗೇರಿಸಲಾಗಿದೆ. ಅದೇ ರೀತಿ ಬಸ್, ಟ್ರಕ್, ಲಾರಿಗಳ ಶುಲ್ಕವನ್ನು 210-215 ರು.ಗೆ, ಮೂರರಿಂದ ಆರು ಆ್ಯಕ್ಸೆಲ್ ವಾಹನಗಳಿಗೆ 325 ರಿಂದ 335 ರು.ಗಳಿಗೆ ಟೋಲ್ ದರ ಹೆಚ್ಚಿಸಲಾಗಿದೆ. ಇನ್ನು ಮುಂದೆ ಟೋಲ್‌ ಶುಲ್ಕ ನಗದಾಗಿ ಸ್ವೀಕರಿಸುವುದಿಲ್ಲ, ಯುಪಿಐ ಮೂಲಕವೇ ಪಾವತಿಸಬೇಕು ಎಂದೂ ನಿಮಯ ಜಾರಿಗೊಳಿಸಲಾಗಿದೆ. ಇದರಿಂದ ಬುಧವಾರ ಈ ಟೋಲ್‌ಗಳಲ್ಲಿ ಸಂಚರಿಸಿದ ವಾಹನ ಚಾಲಕರಿಗೆ ಶಾಕ್ ಆಗಿದೆ.ಉಡುಪಿ ಜಿಲ್ಲೆ ಧಾರ್ಮಿಕ ಮತ್ತು ಬೀಚ್ ಟೂರಿಸಂಗೆ ಪ್ರಸಿದ್ಧವಾಗಿದ್ದು, ಇಲ್ಲಿ ಹೊರ ಜಿಲ್ಲೆ - ರಾಜ್ಯಗಳಿಂದ ಹೆಚ್ಚು ಸಂಖ್ಯೆಯ ಪ್ರವಾಸಿಗರು ಬರುತ್ತಾರೆ, ಪ್ರತಿದಿನ ಈ ಟೋಲ್ ಗಳಲ್ಲಿ ಲಕ್ಷಾಂತರ ವಾಹನಗಳು ಹಾದುಹೋಗುತ್ತವೆ. ಈ ರೀತಿ ಏಕಾಏಕಿ ಟೋಲ್ ಶುಲ್ಕ ಏರಿಕೆಯಿಂದ ಟೋಲ್ ಸಂಸ್ಥೆಗಳು ಪ್ರತಿದಿನ ಲಕ್ಷಾಂತರ ರು. ಲಾಭ ಹೊಡೆಯುವ ಹುನ್ನಾರ ಮಾಡಲಾಗಿದೆ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಥಳೀಯರ ಸಹಕಾರದಿಂದ ನಯಂಪಳ್ಳಿಯ 50 ಮನೆಗಳಿಗೆ ನೀರು ಸಂಪರ್ಕ
ನಾಳೆಯಿಂದ ಇಂದ್ರಾಳಿ ಶ್ರೀ ಮುಖ್ಯಪ್ರಾಣ - ನಾಗದೇವರ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ