ಕನ್ನಡಪ್ರಭ ವಾರ್ತೆ ಮಂಡ್ಯ
ದಿವ್ಯ ಸಾನ್ನಿಧ್ಯವನ್ನು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ನೆಲದನಿ ಬಳಗದ ಪೋಷಕಿ ರುಕ್ಮಿಣಿ ಶಂಕರೇಗೌಡ ವಹಿಸುವರು. ಮಿಮ್ಸ್ ಸಹಾಯಕ ಪ್ರಾಧ್ಯಾಪಕರಾದ ಡಾ.ಎಚ್.ಎಸ್.ರವಿಕುಮಾರ್, ಡಾ.ಆರ್.ಮನೋಹರ್, ಕನ್ನಿಕ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ನ ಕಾರ್ಯದರ್ಶಿ ಎಚ್.ಆರ್.ಕನ್ನಿಕ ಅವರನ್ನು ಅಭಿನಂದಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪಿಎಸ್ಎಲ್ಎಫ್ ಅಂತಾರಾಷ್ಟ್ರಿಯ ನಿರ್ದೇಶಕ ಡಾ.ನಾಗರಾಜು ಬೈರಿ, ನಿವೃತ್ತ ಸಹ ಪ್ರಾಧ್ಯಾಪಕ ಮರೀಗೌಡ, ಸೌತ್ ಮಲ್ಟಿಪಲ್ ಉಪಾಧ್ಯಕ್ಷ ಕೆ.ಟಿ.ಹನುಮಂತು ಅಭಿನಂದಿಸಲಿದ್ದಾರೆ ಎಂದರು.ನೆಲದನಿ ಬಳಗವು ಹಲವವಾರು ಸಮಾಜಮುಖಿ ಕೆಲಸಗಳೊಂದಿಗೆ ರಂಗ ಭೂಮಿಯಲ್ಲೂ ಕೆಲಸ ಮಾಡುತ್ತಾ ಬಂದಿದೆ. ರಂಗಾಯಣ, ನೀನಾಸಂ, ಆಟಮಾಟ, ರಂಗಪಯಣ, ನಿರ್ಧಿಗಂತ, ಕಲಾಗಂಗೋತ್ರಿ ಸೇರಿದಂತೆ ರಾಜ್ಯದ ಪ್ರತಿಷ್ಠಿತ ಕಲಾತಂಡಗಳನ್ನು ಕರೆಸಿ ನಾಟಕ ಪ್ರದರ್ಶಿಸಿರುವುದಾಗಿ ಹೇಳಿದರು.
ಅಣ್ಣನ ನೆನಪು ಕೃತಿ ಮಹಾಕವಿ ಕುವೆಂಪುರವರ ಜೀವನದ ಹಲವು ಮಹತ್ವದ ಅಧ್ಯಾಯಗಳನ್ನು ಒಳಗೊಂಡಿದೆ. ಕುವೆಂಪು ಕನ್ನಡ ಸಾಂಸ್ಕೃತಿಕ ಚರಿತ್ರೆಯಲ್ಲಿ ವಹಿಸಿದ ಮಹತ್ವಪೂರ್ಣ ಪಾತ್ರದಿಂದ ಇವು ಕನ್ನಡ ಸಾಂಸ್ಕೃತಿಕ ಚರಿತೆಯ ಬಹುಮುಖ್ಯ ಅಧ್ಯಾಯಗಳೂ ಆಗಿವೆ. ಕುವೆಂಪು ವ್ಯಕ್ತಿತ್ವದಲ್ಲಿದ್ದ ಮಾನವೀಯತೆ, ಮುಗ್ಧತೆ, ವೈಜ್ಞಾನಿಕ ಮನೋಭಾವ, ನಿಷ್ಠುರತೆಯನ್ನು ಅವರ ಅನೇಕ ಪ್ರಸಂಗಗಳ ಮುಖಾಂತರ ತಿಳಿಸುತ್ತದೆ.
ಗೋಷ್ಠಿಯಲ್ಲಿ ಎಂ.ಸಿ.ಕುಮಾರ್ಗೌಡ, ಶಿವಮಲ್ಲು, ಹೆಚ್.ಎನ್.ನಾಗೇಶ್, ನವೀನ್ಕುಮಾರಿ ಇದ್ದರು.