ಗದಗ: ಗದಗ ನಗರದ ಐತಿಹಾಸಿಕ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿರುವ
ತೋಂಟದಾರ್ಯ ಮಠ ಕೋಮು ಸೌಹಾರ್ದತೆ ಹಾಗೂ ಭಾವೈಕ್ಯತೆಗೆ ಹೆಸರಾದ ಮಠವಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಜಾತಿ ಧರ್ಮ ಭೇದ ಭಾವ ಇಲ್ಲದೆ ಪ್ರತಿವರ್ಷವೂ ಜಾತ್ರಾ ಮಹೋತ್ಸವದಲ್ಲಿ ಎಲ್ಲರೂ ಪಾಲ್ಗೊಳ್ಳುವುದರ ಮೂಲಕ ಭಾನುವಾರ ವಿಜೃಂಭಣೆಯಿಂದ ಜಾತ್ರೆ ಜರುಗಿತು.ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷವು ಜಾತ್ರೆಯ ಮೆರವಣಿಗೆಯ ಸಂಪ್ರದಾಯದಂತೆ ಎಸ್.ಎಸ್. ಕಳಸಾಪುರ ಇವರ ಮನೆಯಿಂದ ಪ್ರಾರಂಭವಾಗಿ ಪ್ರಮುಖ ಬೀದಿಗಳಿಂದ ಮೆರವಣಿಗೆ ಮುಖಾಂತರ ಮಠಕ್ಕೆ ತೆರಳುತ್ತದೆ.ಜಾತ್ರಾ ಮೆರವಣಿಗೆ ನಗರದ ಜಾಮಿಯಾ ಮಸ್ಜಿದ್ ಮುಂದೆ ಬಂದಾಗ ಮಸ್ಜಿದ್ ನ ಕಮಿಟಿ ವತಿಯಿಂದ ಪ್ರತಿವರ್ಷದಂತೆ ಈ ವರ್ಷವು ಶ್ರೀ ಸಿದ್ದರಾಮ ಮಹಾಸ್ವಾಮೀಜಿಯವರಿಗೆ ಫಲ ಪುಷ್ಪ ನೀಡಿ ಗೌರವದಿಂದ ಸನ್ಮಾನಿಸಿ ಜಾತ್ರಾ ಮೆರವಣಿಗೆಯಲ್ಲಿ ಮೊತ್ತೊಮ್ಮೆ ಸಾಮರಸ್ಯ ಮೆರೆಯಲಾಯಿತು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರ್ ಸಾಬ ಬಬರ್ಚಿಯವರು ಈ ಬಾರಿ ತೊಂಟದಾರ್ಯ ಮಠದ ಭಾವಚಿತ್ರವನ್ನು ಸವಿ ನೆನಪಿನ ಕಾಣಿಕೆಯಾಗಿ ಜಾಮಿಯಾ ಮಸ್ಜಿದ್ ವತಿಯಿಂದ ನೀಡಿ ಆಶೀರ್ವಚನ ಪಡೆದರು.ಪ್ರತಿ ವರ್ಷದಂತೆ ಈ ವರ್ಷವು ತಂಪು ಪಾನೀಯ ವ್ಯವಸ್ಥೆಯನ್ನು ಅಬ್ದುಲಗನಿ ರಾಯದುರ್ಗ ಹಾಗೂ ಸಂಗಡಿಗರಿಂದ ನೆರವೇರಿಸಿದರು.ಈ ಸಂದರ್ಭದಲ್ಲಿ ಜಾಮಿಯಾ ಮಸ್ಜಿದ್ ಚೇರಮನ್ ಸಾದಿಕ್ ನರಗುಂದ, ಉಪಾಧ್ಯಕ್ಷ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ, ಕಾರ್ಯದರ್ಶಿ ಹಾಜಿ ಮಕಬೂಲ್ ಸಾಬ ಶಿರಹಟ್ಟಿ, ರಿಯಾಜ್ ಅತ್ತಾರ್, ಹಾಜಿ ಮಹಮ್ಮದ್ ಹುಸೇನ್ ಸಾಬ್ ಧಾರವಾಡ, ಮಹಮ್ಮದ್ ಶಫಿ ಕುದರಿ, ಹಾಜಿ ಮಹಮ್ಮದ್ ಅಲಿ ಕಲೆಗಾರ, ರಶೀದ್ ಮದರಂಗಿ, ಇಸ್ಮಾಯಿಲ್ ಮದರಂಗಿ, ರಜಾಕ್ ಶಿರಹಟ್ಟಿ, ಅಬ್ಬು ರಾಟಿ,ನಜೀರ್ ಕುದರಿ, ಇನ್ನೂ ಹಲವಾರು ಮುಸ್ಲಿಂ ಗಣ್ಯರು ಉಪಸ್ಥಿತರಿದ್ದರು.