ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಟ್ರ್ಯಾಕ್ಟರ್ ಕಳವು ಪ್ರಕರಣ: ಆರೋಪಿ ಬಂಧನ

KannadaprabhaNewsNetwork | Published : Oct 14, 2023 1:00 AM

ಟ್ರ್ಯಾಕ್ಟರ್ ಕಳವು ಪ್ರಕರಣ: ಆರೋಪಿ ಬಂಧನ

ಸಿರವಾರ : ತಾಲೂಕಿನ ಹರವಿ ಬಸವಣ್ಣ ಕ್ಯಾಂಪ್ ಸೇರಿದಂತೆ ಹಲವು ಕಡೆ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪಿಎಸ್ಐ ಗುರುಚಂದ್ರ ಯಾದವ್ ತಿಳಿಸಿದರು. ಕ್ಯಾಂಪ್ ಸೇರಿ ಹಲವೆಡೆ 12 ಲಕ್ಷ ರು.ಗೂ ಅಧಿಕ ಮೌಲ್ಯದ ಟ್ರ್ಯಾಕ್ಟರ್‌ ಮತ್ತು ಟ್ರ್ಯಾಲಿಗಳನ್ನು ಕಳ್ಳವು ಮಾಡಿದ್ದ ಮಲ್ಲಟ ಗ್ರಾಮದ ಮಲ್ಲಯ್ಯ ದುರುಗಪ್ಪನನ್ನು ಬಂಧಿಸಲಾಗಿದೆ ಎಂದು ಪಿಎಸ್ಐ ತಿಳಿಸಿದರು. ಪಿಎಸ್ಐ ಗುರುಚಂದ್ರ ಯಾದವ್ ಅವರ ನೇತೃತ್ವದ ಮಲ್ಲೇಶ, ಸಂತೋಷ, ಭೀಮರಡ್ಡಿ, ಸುರೇಶ, ಅಮರೇಶ, ದೇವರಡ್ಡಿ ಪೊಲೀಸರ ತಂಡದಿಂದ ಕಾರ್ಯಚರಣೆ ಕೈಗೊಳ್ಳಲಾಗಿತ್ತು.