ಸಕಲೇಶಪುರ - ಬಾಳ್ಳುಪೇಟೆ ನಡುವೆ ಭೂಕುಸಿತ ಕಾರಣದಿಂದ ಈ ಮಾರ್ಗದ ಹತ್ತು ರೈಲುಗಳು ಸಂಚಾರ ರದ್ದು

KannadaprabhaNewsNetwork |  
Published : Aug 12, 2024, 01:35 AM ISTUpdated : Aug 12, 2024, 08:00 AM IST
ರೈಲು | Kannada Prabha

ಸಾರಾಂಶ

ಸಕಲೇಶಪುರ - ಬಾಳ್ಳುಪೇಟೆ ನಡುವೆ ಭೂಕುಸಿತ ಕಾರಣದಿಂದ ಈ ಮಾರ್ಗದ ಹತ್ತು ರೈಲುಗಳು ಸಂಚಾರ ರದ್ದಾಗಿವೆ.

 ಬೆಂಗಳೂರು :  ಸಕಲೇಶಪುರ - ಬಾಳ್ಳುಪೇಟೆ ನಡುವೆ ಭೂಕುಸಿತ ಕಾರಣದಿಂದ ಈ ಮಾರ್ಗದ ಹತ್ತು ರೈಲುಗಳು ಸಂಚಾರ ರದ್ದಾಗಿವೆ.

ಕೆಎಸ್‌ಆರ್‌ ಬೆಂಗಳೂರು-ಕಾರವಾರ ಎಕ್ಸಪ್ರೆಸ್‌ (16595) ರೈಲು, ಎಸ್‌ಎಂವಿಟಿ ಬೆಂಗಳೂರು-ಮುರ್ಡೇಶ್ವರ ಎಕ್ಸ್‌ಪ್ರೆಸ್‌ (16585), ವಿಜಯಪುರ-ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್ ಸ್ಪೆಷಲ್‌ ರೈಲು (07377) ಆ. 12,13ರಂದು ರದ್ದಾಗಿದೆ. ಕಾರವಾರ-ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ (16596) ಆ. 13ರಂದು ರದ್ದಾಗಿದೆ. 

ಮಂಗಳೂರು ಸೆಂಟ್ರಲ್‌-ವಿಜಯಪುರ ಎಕ್ಸ್‌ಪ್ರೆಸ್ ಸ್ಪೆಷಲ್‌ ಆ.13,14ರಂದು ರದ್ದಾಗಿದೆ. ಕಾರವಾರ-ಯಶವಂತಪುರ (16516), ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್‌ ಆ.13ರಂದು ರದ್ದಾಗಿದೆ. ಕಣ್ಣೂರು-ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌, ಕೆಎಸ್‌ಆರ್‌ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್‌ (16511) ಆ.12,13ರಂದು ರದ್ದಾಗಿದೆ ಎಂದು ನೈಋತ್ಯ ರೈಲ್ವೇ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ