ಕನ್ನಡಕ್ಕೆ ಇಂಗ್ಲಿಷ್‌ ಕಥೆಗಳ ಅನುವಾದ ಸವಾಲಿನ ಕೆಲಸ

KannadaprabhaNewsNetwork |  
Published : May 28, 2025, 12:07 AM IST
೨೬ಕೆಎಲ್‌ಆರ್-೮ಹೆಸರಾಂತ ಕಥೆಗಾರ ವಸುಧೇಂದ್ರ ಕೋಲಾರ ಹೊರವಲಯದ ಬೆಂಗಳೂರು ಉತ್ತರ ವಿವಿಯ ಮಂಗಸಸಂದ್ರದ ಸ್ನಾತಕೋತ್ತರ ಕೇಂದ್ರದಲ್ಲಿ ವಿವಿಯಿಂದ ಇದೇ ಮೊದಲಬಾರಿಗೆ ಆಯೋಜಿಸಿರುವ ವಿಶೇಷ ಉಪನ್ಯಾಸ ಮಾಲಿಕೆ ಕಾಯಕ್ರಮಕ್ಕೆ ಚಾಲನೆ ನೀಡಿ ಉಪನ್ಯಾಸ ನೀಡಿದರು. | Kannada Prabha

ಸಾರಾಂಶ

ತೆಲುಗಿನಿಂದ ಕನ್ನಡಕ್ಕೆ ಅನುವಾದಿಸುವುದು ತುಂಬಾ ಸುಲಭ. ಅವು ದ್ರಾವಿಡ ಭಾಷೆಗಳು, ಆದ್ದರಿಂದ ನೀವು ಗಾದೆಗಳಿಗೆ ಉಲ್ಲೇಖಗಳನ್ನು ಸಹ ಹೊಂದಿದ್ದೀರಿ, ಆದರೆ ಇಂಗ್ಲಿಷ್ ಹಾಗಲ್ಲ. ಸಂಸ್ಕೃತಿ ಮತ್ತು ಭಾಷೆ ವಿಭಿನ್ನವಾಗಿವೆ. ಕನ್ನಡಕ್ಕೆ ಅನುವಾದಿಸಲು ಸಾಧ್ಯವಾಗದ ಹಲವು ಪದಗಳಿವೆ, ಆದ್ದರಿಂದ ಅದು ಅತ್ಯಂತ ಸವಾಲಿನ ಕೆಲಸ.

ಕನ್ನಡಪ್ರಭ ವಾರ್ತೆ ಕೋಲಾರವಿದ್ಯಾರ್ಥಿಗಳಿಗೆ ಹೊಸ ಆಯಾಮಗಳನ್ನು ಹೊಸ ವ್ಯಕ್ತಿಗಳಿಂದ ಕಲಿಸಿಕೊಡುವುದೇ ವಿಶೇಷ ಉಪನ್ಯಾಸ ಮಾಲಿಕೆಯ ಉದ್ದೇಶ. ಕನ್ನಡ ನಾಡು,ನುಡಿಗೆ ಕೊಡುಗೆ ನೀಡಿದ ಮಾಸ್ತಿ, ಡಿವಿಜಿಯಂತಹ ಮಹನೀಯರ ಪರಿಚಯ ಪ್ರತಿಯೊಬ್ಬರಿಗೂ ಆಗಬೇಕು ಎಂದು ಕಥೆಗಾರ ವಸುಧೇಂದ್ರ ತಿಳಿಸಿದರು.ನಗರ ಹೊರವಲಯದ ಬೆಂಗಳೂರು ಉತ್ತರ ವಿವಿಯ ಮಂಗಸಸಂದ್ರದ ಸ್ನಾತಕೋತ್ತರ ಕೇಂದ್ರದಲ್ಲಿ ವಿವಿ ಇದೇ ಮೊದಲಬಾರಿ ಆಯೋಜಿಸಿರುವ ವಿಶೇಷ ಉಪನ್ಯಾಸ ಮಾಲಿಕೆ ಕಾಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಥೆಗಳು ಎಲ್ಲೆಲ್ಲೂ ಇರುತ್ತವೆ. ಆದರೆ ಅವನ್ನು ನೋಡುವ ಕಣ್ಣುಗಳು, ಅರ್ಥ ಮಾಡಿಕೊಳ್ಳುವ ಮನಸ್ಸು ಇರಬೇಕು. ಜೀವನದಲ್ಲಿ ಕುತೂಹಲವಿದ್ದರೆ ಕಥೆಗಳು ತಾನಾಗಿಯೇ ಹೊಳೆಯುತ್ತವೆ ಎಂದು ತಿಳಿಸಿದರು.ಇಂಗ್ಲಿಷ್‌ನಿಂದ ಭಾಷಾಂತರ ಕಷ್ಟ

ತೆಲುಗಿನಿಂದ ಕನ್ನಡಕ್ಕೆ ಅನುವಾದಿಸುವುದು ತುಂಬಾ ಸುಲಭ. ಅವು ದ್ರಾವಿಡ ಭಾಷೆಗಳು, ಆದ್ದರಿಂದ ನೀವು ಗಾದೆಗಳಿಗೆ ಉಲ್ಲೇಖಗಳನ್ನು ಸಹ ಹೊಂದಿದ್ದೀರಿ, ಆದರೆ ಇಂಗ್ಲಿಷ್ ಹಾಗಲ್ಲ. ಸಂಸ್ಕೃತಿ ಮತ್ತು ಭಾಷೆ ವಿಭಿನ್ನವಾಗಿವೆ. ಕನ್ನಡಕ್ಕೆ ಅನುವಾದಿಸಲು ಸಾಧ್ಯವಾಗದ ಹಲವು ಪದಗಳಿವೆ, ಆದ್ದರಿಂದ ಅದು ಅತ್ಯಂತ ಸವಾಲಿನ ಕೆಲಸ ಎಂದರು.

ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ನಿರಂಜನವಾನಳ್ಳಿ ಮಾತನಾಡಿ, ಉತ್ತರ ವಿವಿ ಉಪನ್ಯಾಸ ಮಾಲಿಕೆಯ ಮೂಲಕ ದಾಪುಗಾಲು ಇಡುತ್ತಿದೆ. ಸದ್ಯವೇ ವಿವಿಯಿಂದ ಪ್ರಸಾರಾಂಗವನ್ನು ಸ್ಥಾಪಿಸುವ ಮೂಲಕ ಮೊರಸುನಾಡು ಕನ್ನಡ ಎಂಬ ಶಬ್ದಕೋಶವನ್ನು ಪ್ರಕಟಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೌಶಲ್ಯಾಭಿವೃದ್ಧಿಗೂ ಒತ್ತುಮೊದಲ ಹಂತದಲ್ಲಿ ಇಂದಿನೀಂದ ಮೇ.೩೧ ರವರೆಗೂ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಿದ್ದು, ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಜ್ಞಾನ ವೃದ್ದಿಸಿಕೊಳ್ಳಬೇಕು. ಶೈಕ್ಷಣಿಕ ಅಭಿವೃದ್ಧಿಯ ಜತೆಗೆ ಕೌಶಲ್ಯಾಭಿವೃದ್ಧಿಗೂ ವಿವಿ ಕೆಲಸಮಾಡುತ್ತಿದೆ ಎಂದು ವಿವರಿಸಿದರು.ಕಾಯಕ್ರಮದಲ್ಲಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ.ಡಿ.ಕುಮುದಾ, ವಿತ್ತಾಧಿಕಾರಿ ವಸಂತಕುಮಾರ್ ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್