ಬಿರುಗಾಳಿ ಮಳೆಗೆ ಧರೆಗುರುಳಿದ ಮರಗಳು

KannadaprabhaNewsNetwork |  
Published : Apr 24, 2025, 11:51 PM IST
 ಬುದ್ದಿಮಾಂದ್ಯಶಾಲೆಯ ಎದುರಿನ ಬೃಹತ್ ಆಲದಮರ ಉರುಳಿಬಿದ್ದು ಬೈಕ್‌ ಅಪ್ಪಚ್ಚಿಯಾಗಿರುವುದು. | Kannada Prabha

ಸಾರಾಂಶ

ಅಮೀನಗಡ ಪಟ್ಟಣದಲ್ಲಿ ಸಂಜೆ ಸುರಿದ ಭಾರೀ ಬಿರುಗಾಳಿ ಮಳೆಗೆ ಭಾರಿ ಗಾತ್ರದ ಮರಗಳು ಧರೆಗುರುಳಿವೆ.

ಕನ್ನಡಪ್ರಭ ವಾರ್ತೆ ಅಮೀನಗಡ

ಪಟ್ಟಣದಲ್ಲಿ ಸಂಜೆ ಸುರಿದ ಭಾರೀ ಬಿರುಗಾಳಿ ಮಳೆಗೆ ಭಾರಿ ಗಾತ್ರದ ಮರಗಳು ಧರೆಗುರುಳಿವೆ. ವಿಜಯಾ ಕರದಂಟು ಫ್ಯಾಕ್ಟರಿಯಲ್ಲಿ ಛಾವಣಿ ಶೀಟ್‌ ಹಾರಿ ಗಾಜಿನ ಕಿಟಕಿಗಳು ಮುರಿದುಬಿದ್ದ ಪರಿಣಾಮ ಕಾರ್ಯನಿರ್ವಹಿಸುತ್ತಿದ್ದ 7 ಜನ ಕಾರ್ಮಿಕರಿಗೆ ಗಾಯಗಳಾಗಿದ್ದು ಕೆಲವರನ್ನು ಅಮೀನಗಡ ಸರಕಾರಿ ಆಸ್ಪತ್ರೆ ಹಾಗೂ ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.ಪಟ್ಟಣದ ಬುದ್ದಿಮಾಂದ್ಯಶಾಲೆಯ ಎದುರಿನ ಬೃಹತ್ ಆಲದಮರ ಉರುಳಿಬಿದ್ದಿದ್ದು, ಅದರ ಕೆಳಗೆ ನಿಲ್ಲಿಸಿದ್ದ ಶಿಕ್ಷಕ ಹೊಸಮನಿಯವರ ಹೊಂಡ ಬೈಕ್ ಅಪ್ಪಚ್ಚಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ