ನಾದಸ್ವರ ವಾದಕ ವಿದ್ವಾನ್ ನಾಗೇಶ್ ಬಪ್ಪನಾಡುಗೆ ಸನ್ಮಾನ

KannadaprabhaNewsNetwork |  
Published : Dec 17, 2024, 01:01 AM IST
ಆಕಾಶವಾಣಿ ಎ ಗ್ರೇಡ್‌ ಕಲಾವಿದ ನಾಗಸ್ವರ ವಾದಕ ವಿದ್ವಾನ್ ನಾಗೇಶ್ ಬಪ್ಪನಾಡುರಿಗೆ ಸನ್ಮಾನ  | Kannada Prabha

ಸಾರಾಂಶ

ಮೂಲ್ಕಿ ಸಮೀಪದ ಕೊಲಕಾಡಿ ಪದ್ಮಶ್ರೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಕಾಶವಾಣಿಯ ಅತ್ಯುನ್ನತ ಶ್ರೇಣಿಯ ಗೌರವಕ್ಕೆ ಪಾತ್ರರಾದ ನಾದಸ್ವರ ವಾದಕ ವಿದ್ವಾನ್ ನಾಗೇಶ್ ಬಪ್ಪನಾಡು ಅವರನ್ನು ಗೌರವಿಸಲಾಯಿತು.

ಕನ್ನಡಪ್ರಭವಾರ್ತೆ ಮೂಲ್ಕಿ

ಧಾರ್ಮಿಕ ಕ್ಷೇತ್ರದಲ್ಲಿ ಭಾಗಿಯಾಗಿ ಅವಿರತ ಪರಿಶ್ರಮದಿಂದ ಉನ್ನತ ಸಾಧನೆಗೈದ ನಾಗೇಶ್‌ ಬಪ್ಪನಾಡು ಅಭಿನಂದನೀಯ ಎಂದು ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್ ಹೇಳಿದರು.

ಮೂಲ್ಕಿ ಸಮೀಪದ ಕೊಲಕಾಡಿ ಪದ್ಮಶ್ರೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಕಾಶವಾಣಿಯ ಅತ್ಯುನ್ನತ ಶ್ರೇಣಿಯ ಗೌರವಕ್ಕೆ ಪಾತ್ರರಾದ ನಾದಸ್ವರ ವಾದಕ ವಿದ್ವಾನ್ ನಾಗೇಶ್ ಬಪ್ಪನಾಡು ಅವರನ್ನು ಗೌರವಿಸಿ ಮಾತನಾಡಿದರು.

ಕೊಲಕಾಡಿ ಪದ್ಮಶ್ರೀ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ ಶುಭಾ ಶಂಸನೆಗೈದರು. ಈ ಸಂದರ್ಭ ವಿದ್ವಾನ್ ನಾಗೇಶ್ ಬಪ್ಪನಾಡು ಪತ್ನಿ ಶ್ರೀಲತಾ ಅವರನ್ನು ಟ್ರಸ್ಟ್ ವತಿಯಿಂದ ಗೌರವಿಸಲಾಯಿತು. ಅಚ್ಯುತ ರಾವ್ ಪಾವಂಜೆ, ಸುರತ್ಕಲ್ ಮಣಿಕೃಷ್ಣ ಅಕಾಡೆಮಿಯ ನಿತ್ಯಾನಂದರಾವ್, ವೇದಮೂರ್ತಿ ಶ್ರೀಕಾಂತ್ ಭಟ್ ಕೊಲಕಾಡಿ, ರಂಗಕರ್ಮಿ ಚಂದ್ರಶೇಖರ ಸುವರ್ಣ, ಗುರುಪ್ರಸಾದ್, ಟ್ರಸ್ಟ್ ನ ಶಶಿಕಲಾ ಉಪಾಧ್ಯಾಯ, ಡಾ.ಶ್ರೀವತ್ಸ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.

ಟ್ರಸ್ಟ್ ನ ಅಧ್ಯಕ್ಷ ವಾದಿರಾಜ ಉಪಾಧ್ಯಾಯ ಸ್ವಾಗತಿಸಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ