ಎ.ಜಿ. ಕಾರಟಗಿ ಕಾರಟಗಿ
ಕನ್ನಡಪ್ರಭಕ್ಕೆ ಲಭ್ಯವಾದ ಪತ್ರದಲ್ಲಿ ಈ ಕುರಿತು ಸ್ಪಷ್ಟವಾಗಿದ್ದು, ಅಣೆಕಟ್ಟಿನಲ್ಲಿ ಗಂಭೀರ ಸ್ವರೂಪದ ಬದಲಾವಣೆ ಕ್ರಸ್ಟ್ಗೇಟ್ ಅಳವಡಿಕೆಗೆ ಸರಿ ಸುಮಾರು ಐದಾರು ತಿಂಗಳ ಕಾಲಮಿತಿ ಬೇಕಾಗಿರುವುದರಿಂದ ಎರಡನೇ ಬೆಳೆಗೆ ನೀರು ಲಭ್ಯದ ಕರಿಮೋಡ ಛಾಯ ಆವರಿಸಲಿದೆ.ಇದಕ್ಕೆ ಇಂಬು ನೀಡುವಂತೆ ಜಲಸಂಪನ್ಮೂಲ ಸಚಿವ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಎರಡನೇ ಬೆಳೆಗೆ ನೀರು ಬೇಕೋ, ಅಣೆಕಟ್ಟಿಗೆ ಕ್ರಸ್ಟ್ಗೇಟ್ ಅಳವಡಿಸಬೇಕೋ ಎನ್ನುವ ಪ್ರಶ್ನೆ ಹಾಕಿದ್ದು ನೋಡಿದರೆ ಬಹುಶಃ ಈ ಬಾರಿ ಅಚ್ಚುಕಟ್ಟು ಪ್ರದೇಶಕ್ಕೆ ರಾಜ್ಯ ಸರ್ಕಾರ ನೀರು ಬಿಡುವುದು ಅನುಮಾನವಾಗಿದೆ.
ಅಧ್ಯಯನದ ವರದಿ, ತಜ್ಞರ ಸ್ಥಾಯಿ ಸಲಹಾ ಸಮಿತಿ, ತಾಂತ್ರಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಬರುವ 2026 ಜೂನ್ ಒಳಗೆ ಹೊಸದಾಗಿ ಕ್ರಸ್ಟ್ಗೇಟ್ ಅಳವಡಿಸಬೇಕೆಂದು ಒಕ್ಕೂರಲಿನಿಂದ ತೀರ್ಮಾನಿಸಿ ಮಂಡಳಿಗೆ ಈ ಪತ್ರ ಬರೆಯಲಾಗಿದೆ ಎಂದು ನಾಯ್ಡು ತಿಳಿಸಿದ್ದಾರೆ.ನೀರಿನ ರಭಸಕ್ಕೆ ಕೊಚ್ಚಿಹೋದ 19ನೇ ಕ್ರಸ್ಟ್ಗೇಟ್ ಬದಲಿ ವ್ಯವಸ್ಥೆ, ಜತೆಗೆ 32 ಕ್ರಸ್ಟ್ಗೇಟ್ ಸಧ್ಯದ ಸ್ಥಿತಿ, ಅಣೆಕಟ್ಟೆಯ ಮೇಲೆ ಬೇರೆ ಅಡ್ಡ ಪರಿಣಾಮ ಬೀರದಂತೆ ಗೇಟ್ ಅಳವಡಿಸಬೇಕಾಗಿದ್ದು, ಯಾವುದೇ ಅಡ್ಡ ಪರಿಣಾಮ ಬೀರದಂತೆ ಕಾಪಾಡಲು ಅಣೆಕಟ್ಟಿನಲ್ಲಿ ಕನಿಷ್ಠ 12ರಿಂದ 15 ಅಡಿಗಳಿಗೆ ನೀರು ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಬಗ್ಗೆ ತಜ್ಞರು ಪತ್ರದಲ್ಲಿ ವಿವರಿಸಿದ್ದಾರೆ.
ಜಲಾಶಯದ ಒಂಬತ್ತು ಕ್ರಸ್ಟ್ಗೇಟ್ಗಳು ಶೇ.39 ರಿಂದ 49ರಷ್ಟು ಹಾನಿಗೀಡಾಗಿವೆ, 15 ಕ್ರಸ್ಟ್ಗೇಟ್ಗಳು (1,6,7,8,9,14,15,16,17,20,21,28,31 ಮತ್ತು 33) ಶೇ.60ರಷ್ಟು, ಎಂಟು ಕ್ರಸ್ಟ್ಗೇಟ್ (3,4,5,13,18,24,29 ಮತ್ತು 32)ಗಳು ಶೇ. 50ರಿಂದ 59ರಷ್ಟು ಹಾನಿಗೀಡಾಗಿವೆ. ಮುಖ್ಯವಾಗಿ ಅಣೆಕಟ್ಟು, ಕ್ರಸ್ಟ್ಗೇಟ್ಗಳ ಚೌಕಟ್ಟು ಹಾಗೂ ಗೇಟ್ಗಳಿಗೆ ಅಳಡಿಸಿದ ಸರಪಳಿ ಸುರಕ್ಷತೆಗಾಗಿ ಕಟ್ಟೆಯ ಮೇಲೆ 12ರಿಂದ 13ರಡಿ ಎತ್ತರದವರೆಗೆ ಗರಿಷ್ಠ ನೀರು ಸಂಗ್ರಹ ಕಾಯ್ದುಕೊಳ್ಳಬೇಕು. ಆ ಪ್ರಕಾರ ಅಣೆಕಟ್ಟಿನಲ್ಲಿ 80 ಟಿಎಂಸಿ ಅಡಿ ಎತ್ತರದವರೆಗೆ ಗರಿಷ್ಠ ಸಂಗ್ರಹ ಅವಶ್ಯಕ. ಪ್ರಸಕ್ತ ವರ್ಷ 2025-26ರ ಒಂದು ಹಂಗಾಮಿನ ಒಂದು ಬೆಳೆ ನಂತರ ಕುಡಿವ ನೀರು ಪೂರೈಕೆ ಬಳಕೆ ಮಾಡಿಕೊಳ್ಳಬೇಕೆಂದು ತಜ್ಞ ಕನ್ಹಯ್ಯ ನಾಯ್ಡು ಕಳೆದ 2025 ಏ.16ಕ್ಕೆ ತುಂಗಭದ್ರ ಮಂಡಳಿ ಅಧ್ಯಕ್ಷರಿಗೆ ಪತ್ರ ಬರೆದು ಎಚ್ಚರಿಸಿದ್ದಾರೆ. ಹೀಗಾಗಿ ಕಳೆದ ಎಪ್ರಿಲ್ನಲ್ಲಿ ಅಚ್ಚುಕಟ್ಟು ಪ್ರದೇಶಕ್ಕೆ ಎರಡನೇ ಬೆಳೆ ನೀರು ಪೂರೈಕೆ ಸ್ಥಗಿತಗೊಳಿಸಿ ಕ್ರಸ್ಟ್ಗೇಟ್ ಅಳವಡಿಕೆ ಕಾಮಗಾರಿ ನಡೆಸುವಂತೆ ಸೂಚಿಸಿದ್ದರು ಎಂದು ಪತ್ರದಲ್ಲಿ ಉಲ್ಲೇಖವಾಗಿದೆ.
ಜಾಗರೂಕತೆ:
ಸವಾಲು ಸಭೆ: