ಕನ್ನಡಪ್ರಭ ವಾರ್ತೆ ಮೇಲುಕೋಟೆ
ಗೋದಾವರಿ ನದಿ ತಟದಲ್ಲಿರುವ ತೆಲಂಗಾಣದ ಶ್ರೀವೈಷ್ಣವ ಸಿದ್ಧಾಂತದ ಪ್ರಖ್ಯಾತ ಭದ್ರಾಚಲಂ ಸೀತಾ ಸಮೇತ ಶ್ರೀರಾಮಚಂದ್ರ ಪ್ರಭುವಿನ ದೇವಾಲಯದ ಸಾಂಪ್ರದಾಯಿಕ ಪ್ರಚಾರ ರಥ ಬಂದರೆ, ಅದರ ನಂತರ ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ರಥ ಬಂದು ಪ್ರಚಾರ ನಡೆಸಿತು.
ಈ ಅನಿರೀಕ್ಷಿತವಾಗಿ ಬಂದ ಭದ್ರಾಚಲಂ ರಥದ ದರ್ಶನ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಶ್ರೀಚೆಲುವನಾರಾಯಣನ ಸನ್ನಿಧಿಯಲ್ಲಿ ದೊರೆತ ಶುಭಸೂಚನೆಯೆಂದೇ ಭಕ್ತರಲ್ಲಿ ಭಾವನೆ ಮೂಡಿತು. ಭದ್ರಾಚಲಂ ದೇಗುಲದ ಸಿಇಒ ಮತ್ತು ಅರ್ಚಕರು ಚೆಲುವನಾರಾಯಣಸ್ವಾಮಿ ಮತ್ತು ಬೆಟ್ಟದೊಡೆಯ ಯೋಗನರಸಿಂಹನ ದರ್ಶನ ಪಡೆದರೆ ಮೇಲುಕೋಟೆಗೆ ಆಗಮಿಸಿದ್ದ ಭಕ್ತರು ರಥದಲ್ಲಿ ಸೀತಾಮಾತೆಯೊಂದಿಗೆ ವಿರಾಜಮಾನನಾಗಿದ್ದ ರಾಮಚಂದ್ರನ ದರ್ಶನ ಪಡೆದರು.ರಥದಲ್ಲಿ ವೇದ ಮಂತ್ರಗಳು ಕೇಳಿಬಂದು ಪುಳಕಿತಗೊಳಿಸಿದವು. ಮತ್ತೊಂದೆಡೆ ಮಂಡ್ಯದ ಕಲಾವಿದೆ ಮಂಜುಳರ ಅರುಣೋದಯ ತಂಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಪ್ರಸ್ತುತ ಪಡಿಸಿದ ಕವಿಗಳ ಪರಿಚಯದ ನೃತ್ಯರೂಪಕ ಜನಮನ ಸೂರೆಗೊಂಡಿತು. ರಥದ ಮೂಲಕ ಕನ್ನಡಾಭಿಮಾನ ಮೂಡಿಸುವ ಗೀತೆಗಳು ನಾಗರೀಕರನ್ನು ಮುದಗೊಳಿಸಿತು.
ಶ್ರೀರಂಗಪಟ್ಟಣ: