ರಾಜಿ ಸಂಧಾನದಲ್ಲಿ ಒಂದಾದ ಎರಡು ಜೋಡಿಗಳು

KannadaprabhaNewsNetwork |  
Published : Sep 28, 2024, 01:33 AM IST
ಚಿತ್ರ 27ಬಿಡಿಆರ್50 | Kannada Prabha

ಸಾರಾಂಶ

Two pairs united in compromise

-ನ್ಯಾಯಾಧೀಶರ ಸಮ್ಮುಖ ರಾಜಿ ಸಂಧಾನದ ಮೂಲಕ ನ್ಯಾಯಾಧೀಶರ ಎದುರು ಒಂದಾದ ದಂಪತಿ

----

ಕನ್ನಡಪ್ರಭ ವಾರ್ತೆ ಬೀದರ್‌

ದಂಪತಿ ಚಿಕ್ಕ ಪುಟ್ಟ ವಿಚಾರಗಳಿಗೆ ಪೊಲೀಸ್ ಠಾಣೆ ನ್ಯಾಯಾಲಯಕ್ಕೆ ಅಲೆದಾಡುವ ಬದಲಾಗಿ ಮನೆಯ/ಗ್ರಾಮದ ಹಿರಿಯರ ಮಾತನ್ನು ಕೇಳಿ ನೆಮ್ಮದಿಯಿಂದ ಬದುಕಬೇಕು. ಆಗಲೇ ಸಂಸಾರಕ್ಕೊಂದು ಅರ್ಥ ಬರುತ್ತದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ರಾಜಿ ಸಂಧಾನ ಮಾಡಿಕೊಂಡ ದಂಪತಿ. ಇತರರಿಗೆ ಮಾದರಿಯಾಗುವಲ್ಲಿ ಬದುಕು ಸಾಗಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಪ್ರಕಾಶ ಅರ್ಜುನ ಬನಸೊಡೆ ಸಲಹೆ ನೀಡಿದರು.

ಅವರು ಬೀದರ್ ತಾಲೂಕಿನ ಕುತ್ತಾಬಾದನ ಸುಮ್ಮಯ್ಯಾ ಗಂಡ ತಿಪ್ಪಣ್ಣ ಬೀದರ ಅವರೊಂದಿಗೆ ಸಾಂಪ್ರದಾಯಿಕವಾಗಿ ಮದುವೆ ಆಗಿದ್ದರು. ಸುಮಯ್ಯಾಳು ತನ್ನ ಗಂಡನಿಗೆ ಮತ್ತು ಅತ್ತೆಗೆ ಅವಾಚ್ಯ ಶಬ್ದಗಳಿಂದ ಬೈಯುವುದು, ಹೊಡೆಯುವುದು ಮಾಡುತ್ತಾರೆ ಎಂದು ಅತ್ತೆಯಾದ ಚಂದ್ರಮ್ಮ ಅವರು ಮಹಿಳಾ ಪೊಲೀಸ್ ಠಾಣೆಗೆ ಹಾಜರಾಗಿ ದೂರನ್ನು ನೀಡಿದರು.

ಬೀದರ್ ಹೌಸಿಂಗ್ ಬೋರ್ಡ ಕಾಲೋನಿಯ ಪಲ್ಲವಿ ಗಂಡ ಶಿಕಾರೇಶ್ವರ ಅವರೊಂದಿಗೆ ಮದುವೆ ಆಗಿದ್ದರು. ಶಿಕಾರೇಶ್ವರನು ಪಲ್ಲವಿಯನ್ನು ಸರಾಯಿ ಕುಡಿದು ಅವಾಚ್ಯ ಶಬ್ದಗಳಿಂದ ಬೈಯುವುದು, ಹೊಡೆಯುವುದು ಮಾಡುತ್ತಾರೆ ಎಂದು ಪಲ್ಲವಿ ತನ್ನ ಗಂಡನ ಬಗ್ಗೆ ಮಹಿಳಾ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದರು.

ಮಹಿಳಾ ಪೊಲೀಸ್ ಠಾಣೆಯಿಂದ ರಾಜಿ ಸಂದಾನಕ್ಕಾಗಿ ಎರಡು ಅರ್ಜಿಯನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಕಳುಹಿಸಲಾಗಿತ್ತು. ನಂತರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ, ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಎರಡು ಅರ್ಜಿಗೆ ಸಂಬಂಧಿಸಿದವರನ್ನು ಪ್ರಾಧಿಕಾರಕ್ಕೆ ಕರೆಯಸಿ ಅವರ ಕೌಟುಂಬಿಕ ಸಮಸ್ಯೆ ಆಲಿಸಿ, ಗಂಡನನ್ನು ಬುದ್ಧಿ ಮಾತು ಹೇಳಿ ಒಂದಾಗುವುದು ಮುಖ್ಯ. ಕಾನೂನಾತ್ಮಕ ವಿಚಾರಗಳನ್ನು ತಿಳಿಸಿ ಮನಪರಿವರ್ತನೆಗೊಳಿಸಿ ಸೆ. 27 ರಂದು ದಂಪತಿಗಳಿಬ್ಬರನ್ನು ರಾಜಿ ಸಂಧಾನದ ಮೂಲಕ ಒಂದುಗೂಡಿಸಿ ಸಿಹಿ ಹಂಚಿ ದಂಪತಿಯನ್ನು ಒಂದು ಮಾಡಿದ್ದಾರೆ.

ಮದುವೆ ಮತ್ತು ಕುಟುಂಬ ಸಾಮಾಜಿಕವಾಗಿ ಹೆಚ್ಚಿನ ಸಾಮಾಜಿಕ ಪ್ರಗತಿಯ ಹಂತವನ್ನು ಸೂಚಿಸುತ್ತದೆ. ಇದು ಭಾವನೆ, ಸಾಮರಸ್ಯ ಮತ್ತು ಸಂಸ್ಕೃತಿಯ ಜಗತ್ತಿನಲ್ಲಿ ಮನುಷ್ಯನ ಪ್ರವೇಶವನ್ನು ಸೂಚಿಸುತ್ತದೆ. ಕುಟುಂಬ ಸಂತಸವಾಗಿದ್ದರೆ ಇಡೀ ಸಮುದಾಯ ಮತ್ತು ಸಮಾಜ ಎರಡು ಸುಂದರವಾಗಿರುತ್ತವೆ ಎಂದರು

ಇಬ್ಬರು ದಂಪತಿ ಸಂಬಂಧಿಕರು ಸೇರಿದಂತೆ ಪ್ರಾಧಿಕಾರದ ಸಿಬ್ಬಂದಿ ಜಗದೀಶ್ವರ ದೊರೆ, ಆಕಾಶ ಸಜ್ಜನ, ನಾಗರಾಜ, ಪ್ರೀತಿ, ಜೀವನ ಮತ್ತು ಯೋಹನ ಕಾಳೆ, ಈರಮ್ಮ ಇತರರು ಉಪಸ್ಥಿತರಿದ್ದರು.

--

ಚಿತ್ರ 27ಬಿಡಿಆರ್50

ಬೀದರ್‌ನಲ್ಲಿ ರಾಜಿ ಸಂಧಾನದ ಮೂಲಕ ದಂಪತಿ ನ್ಯಾಯಾಧೀಶರ ಎದುರು ಒಂದಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ