- ಹರಿಹರ ಗ್ರಾಮಾಂತರ ಠಾಣೆ ಪೊಲೀಸರಿಂದ ಕಾರ್ಯಾಚರಣೆ । ಜಿಲ್ಲಾ ಎಸ್ಪಿ ಶ್ಲಾಘನೆ - - - ಕನ್ನಡಪ್ರಭ ವಾರ್ತೆ ಹರಿಹರ
ಜಿಲ್ಲೆಯ ವಿವಿಧೆಡೆ ಕಳವು ಕೃತ್ಯ ಎಸಗುತ್ತಿದ್ದ ಆರೋಪಿಗಳಿಂದ 160 ಗ್ರಾಂ ತೂಕದ ₹12,80,000 ಮೌಲ್ಯದ ಬಂಗಾರದ ಆಭರಣಗಳು ಮತ್ತು 1 ಕೆಜಿ 600 ಗ್ರಾಂ ತೂಕದ 1,35,000 ಮೌಲ್ಯದ ಬೆಳ್ಳಿಯ ಸಾಮಾನುಗಳು ಹಾಗೂ ₹35,000 ಮೌಲ್ಯದ ಟಿ.ವಿ. ಹಾಗೂ ಕೃತ್ಯಕ್ಕೆ ಬಳಸಿದ ₹1,50,000 ಬೆಲೆ ಬಾಳುವ 2 ಬೈಕ್ಗಳನ್ನು ಜಪ್ತಿ ಮಾಡಿದ್ದಾರೆ.
ಕಳೆದ ಸೆ.12ರಂದು ಅವರಾವತಿ ಕಾಲೋನಿಯ ಜ್ಯೋಹಿತ್ ಡಿಸೋಜಾ ಕಾರ್ಯನಿಮಿತ್ತ ಕಾರ್ಯಕ್ರಮಕ್ಕೆ ತೆರಳಿದ್ದರು. ಆಗ ಮನೆ ಕಿಟಕಿಯ ಸರಳನ್ನು ಕಟ್ ಮಾಡಿ, ಮನೆಯೊಳಗೆ ಪ್ರವೇಶಿಸಿದ ಸದರಿ ಕಳ್ಳರು ಬೆಡ್ ರೂಂನಲ್ಲಿ ಇದ್ದ 10 ಗ್ರಾಂ ತೂಕದ ₹65000 ಬೆಲೆ ಬಾಳುವ ಬಂಗಾರದ ಕಿವಿಯೋಲೆ, ₹35000 ಬೆಲೆ ಬಾಳುವ ಟಿವಿ ಕದ್ದಿದ್ದಾರೆ. ಮರುದಿನ ಮನೆಗೆ ಬಂದು ನೋಡಿದಾಗ, ವಸ್ತುಗಳು ಕಳುವಾದ ಸಂಗತಿ ತಿಳಿದುಬಂದಿದೆ. ತಕ್ಷಣ ಡಿಸೋಜಾ ಅವರು ನೀಡಿದ ದೂರು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದರು.ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ, ದಾವಣಗೆರೆ ವಿದ್ಯಾನಗರ ಠಾಣೆ, ಗಾಂಧಿನಗರ ಠಾಣೆಗಳಲ್ಲಿ ದಾಖಲಾದ ಒಟ್ಟು 5 ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ತನಿಖೆ ಮುಂದುವರಿದಿದೆ.
- - - -17ಎಚ್ಆರ್ಆರ್04:
ಹರಿಹರದಲ್ಲಿ ಕಳ್ಳರಿಂದ ವಶಕ್ಕೆ ಪಡೆದ ವಸ್ತುಗಳೊಂದಿಗೆ ಗ್ರಾಮಾಂತರ ಠಾಣೆ ಪೊಲೀಸರ ತಂಡ.