ಉಚ್ಚಿಲ: ಇಲ್ಲಿನ ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಸುಮಾರು 3.50 ಕೋಟಿ ರು. ವೆಚ್ಚದಲ್ಲಿ 30 ಅಡಿ ಎತ್ತರದ ಮೊಗವೀರ ಸಮಾಜದ ಕುಲಗುರುಗಳಾದ ಕೀರ್ತಿಶೇಷ ಶ್ರೀಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ನಿರ್ಮಾಣದ ಪ್ರಯುಕ್ತ ಭಾನುವಾರ ಸಾಮೂಹಿಕ ಗುರು ಪಾದಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಿತು.
ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ದ.ಕ. ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಮೋಹನ ಬೆಂಗ್ರೆ, ಉಚ್ಚಿಲ ಕ್ಷೇತ್ರಾಧ್ಯಕ್ಷ ಗಿರಿಧರ ಸುವರ್ಣ, ಪುತ್ಥಳಿ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಮನೋಜ್ ಸಾಲ್ಯಾನ್, ಪ್ರಮುಖರಾದ ಹರಿಯಪ್ಪ ಕೋಟ್ಯಾನ್, ಯುವರಾಜ್ ಸಾಲ್ಯಾನ್, ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು. ಶರಣ್ ಕುಮಾರ್ ಮಟ್ಟು ನಿರೂಪಿಸಿದರು.
ಕೋಟಿ ಮಿಕ್ಕಿದ ಗುರುಪಾದ ಕಾಣಿಕೆ: ಈ ಸಾಮೂಹಿಕ ಪಾದಕಾಣಿಕೆ ಕಾರ್ಯಕ್ರಮದಲ್ಲಿ ಮೊಗವೀರರ ಬಾರ್ಕೂರು ವಲಯದಿಂದ 35 ಲಕ್ಷ ರು., ಮಂಗಳೂರು ವಲಯದಿಂದ 25 ಲಕ್ಷ ರು., ಮಧ್ಯ ವಲಯದಿಂದ 25 ಲಕ್ಷ ರು., ಉಡುಪಿ ವಲಯದಿಮದ 25 ಲಕ್ಷ ರು., ಬಗ್ವಾಡಿ ವಲಯದಿಂದ 25 ಲಕ್ಷ ರು. ಸಲ್ಲಿಕೆಯಾಯಿತು.ಜೊತೆಗೆ ವೇದಪ್ರಕಾಶ್ 10 ಲಕ್ಷ ರು., ಪ್ರಸಾದ್ ರಾಜ್ ಕಾಂಚನ್ 5 ಲಕ್ಷ ರು., ಮಸ್ಕತ್ ಸಂಘಟನೆಯಿಂದ 3 ಲಕ್ಷ ರು., ಮೀನು ಮಾರಾಟ ಪೆಡರೇಷನ್ 2 ಲಕ್ಷ ರು., ಮೋಹನ್ ಬೇಂಗ್ರೆ 2 ಲಕ್ಷ ರು., ಅನಿಲ್ ಕುಮಾರ್ 2 ಲಕ್ಷ ರು., ಸಂಧ್ಯಾ ಸುನಿಲ್ 2 ಲಕ್ಷ ರು. ಮತ್ತು ನೂರಾರು ಮಂದಿ ತಂತಮ್ಮ ಶಕ್ತ್ಯಾನುಸಾರ ಪಾದಕಾಣಿಕೆ ಸಲ್ಲಿಸಿದರು.