30 ದಿನಗಳಲ್ಲಿ ನವಚೇತನ ತುಂಬಿಕೊಂಡ ಉಡುಪಿ ಪೊಲೀಸರು

KannadaprabhaNewsNetwork |  
Published : Aug 01, 2025, 02:15 AM IST
ನವಚೇತನ | Kannada Prabha

ಸಾರಾಂಶ

ಉಡುಪಿ ಜಿಲ್ಲಾ ಪೊಲೀಸರಿಗೆ 30 ದಿನಗಳ ಉಚಿತ ‘ನವಚೇತನ ಶಿಬಿರ’ವನ್ನು ಆತ್ರಾಡಿಯಲ್ಲಿರುವ ಶ್ರೀ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ‘ಸೌಖ್ಯವನ’ ಪರೀಕದಲ್ಲಿ ನಡೆಸಲಾಯಿತು.

ಉಡುಪಿ: ಉಡುಪಿ ಜಿಲ್ಲೆಯ ಆಯ್ದ 71 ಪೊಲೀಸ್ ಅಧಿಕಾರಿ/ ಸಿಬ್ಬಂದಿಗೆ ಉತ್ತಮ ಆರೋಗ್ಯ ಹೊಂದಲು ಮತ್ತು ದೈಹಿಕ ಮತ್ತು ಮಾನಸಿಕವಾಗಿ ಸದೃಡವಾಗಿರಲು 30 ದಿನಗಳ ಉಚಿತ ‘ನವಚೇತನ ಶಿಬಿರ’ವನ್ನು ಆತ್ರಾಡಿಯಲ್ಲಿರುವ ಶ್ರೀ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ‘ಸೌಖ್ಯವನ’ ಪರೀಕದಲ್ಲಿ ಜೂ. 1ರಿಂದ ನಡೆಸಲಾಯಿತು.

ಈ 30 ದಿನಗಳ ತರಬೇತಿಯಲ್ಲಿ ಪ್ರತಿದಿನ ಬೆಳಗ್ಗೆ ಸೌಖ್ಯವನ ಪರೀಕ ಇದರ ಯೋಗ ತರಬೇತುದಾರದಿಂದ ಒಂದು ಗಂಟೆ ಡೈನಮಿಕ್ ಯೋಗ ತರಬೇತಿ, ನಂತರ ಒಂದು ಗಂಟೆಯ ತರಬೇತಿಯಲ್ಲಿ ಪೊಲೀಸ್ ತರಬೇತಿ ಶಾಲೆಯ ಶಿಕ್ಷಕರಿಂದ ಭೌತಿಕ ವ್ಯಾಯಾಮ ನೀಡಲಾಯಿತು.ಯುವ ಸಬಲೀಕರಣ ಇಲಾಖೆಯಿಂದ ಫಿಟ್ನೆಸ್ ತರಬೇತಿ, ಸ್ವಾಯ್ ಡಾನ್ಸ್ ಅಕಾಡೆಮಿಯವರಿಂದ ಝಂಬಾ ನೃತ್ಯ ತರಗತಿ, ವಿವಿಧ ಕ್ಷೇತ್ರದ ಪರಿಣಿತರಿಂದ ಆರೋಗ್ಯದ ಬಗ್ಗೆ ಉಪನ್ಯಾಸ ಹಾಗೂ ಪ್ರತಿದಿನ ಸಂಜೆ ಒಂದು ಗಂಟೆ ನೇಚರ್ ವಾಕ್ ನೀಡಲಾಗಿರುತ್ತದೆ. ಇವರಲ್ಲಿ ಅವಶ್ಯಕತೆ ಇದ್ದವರಿಗೆ ಫಿಶಿಯೋಥೆರಪಿ ಹಾಗೂ ಸ್ಟೀಮ್ ಬಾತ್ ಮಾಡಿಸಲಾಗಿತ್ತು.

ಈ ಶಿಬಿರ ಬಹಳ ಯಶಸ್ವಿಯಾಗಿ 30 ದಿನಗಳನ್ನು ಪೂರೈಸಿ, ಇದರ ಸಮಾರೋಪ ಸಮಾರಂಭವನ್ನು ಅಮಣ್ಣಿ ರಾಮಣ್ಣ ಶೆಟ್ಟಿ ಮೆಮೋರಿಯಲ್ ಆಡಿಟೋರಿಯಂನಲ್ಲಿ ಬುಧವಾರ ಸಂಜೆ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ಪ್ರಮೋದ್ ಶೆಟ್ಟಿ ಹಾಗೂ ಉಡುಪಿಯ ಅಂತಾರಾಷ್ಟ್ರೀಯ ಕ್ರೀಡಪಟು ಅಭಿನ್ ದೇವಾಡಿಗ ಆಗಮಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಎಸ್ಪಿ ಸುಧಾಕರ್ ನಾಯಕ್, ಶಾಂತಿವನ ಟ್ರಸ್ಟ್ ನ ಸೀತಾರಾಮ್ ತೋಳ್ಪಡಿತ್ತಾಯ, ಮುಖ್ಯ ವೈದ್ಯಾಧಿಕಾರಿ ಡಾ. ಗೋಪಾಲ ಪೂಜಾರಿ ಭಾಗವಹಿಸಿದ್ದರು. ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಶಿಬಿರಾರ್ಥಿಗಳಿಗೆ ತರಬೇತಿ ನೀಡಿದ ಎಲ್ಲರನ್ನು ಗೌರವಿಸಲಾಯಿತು. ಈ ಶಿಬಿರದಲ್ಲಿ ಶಿಬಿರಾರ್ಥಿಗಳು ಒಟ್ಟು 500 ಕೆ ಜಿ ತೂಕ ಕಳೆದುಕೊಂಡಿದ್ದು, ಪ್ರತಿಯೊಬ್ಬರು ತಲಾ 7 ಕೆ.ಜಿ.ಯಷ್ಟು ತೂಕ ಕಡಿಮೆ ಮಾಡಿಕೊಂಡಿರುತ್ತಾರೆ. ಎಲ್ಲಾ ಶಿಬಿರಾರ್ತಿಗಳು ತಮ್ಮ ಬಿಎಂಐ ಕಡಿಮೆ ಮಾಡಿಕೊಂಡಿರುತ್ತಾರೆ ಹಾಗೂ ಬಿಪಿ ಮತ್ತು ಶುಗರ್ ಗಳನ್ನು ಕೂಡ ಕಡಿಮೆ ಮಾಡಿಕೊಂಡಿರುತ್ತಾರೆ ಎಂದು ಮೂಲಗಳು ತಿಳಿಸಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ