ಕನ್ನಡಪ್ರಭ ವಾರ್ತೆ ಬೀದರ್
ಈ ಕುರಿತು ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ಬಹುತೇಕ ಗ್ರಾಮಸ್ಥರು ಕೂಲಿ ಕೆಲಸ ಮಾಡಿ, ತಮ್ಮ ಕುಟುಂಬದ ನಿರ್ವಹಣೆ ಮಾಡುತ್ತಿದ್ದು, ತಾವು ಗಳಿಸುವ ಕೂಲಿ ಹಣ ಕುಡಿತಕ್ಕೆ ಬಳಸುತ್ತಿದ್ದು, ಅಲ್ಲದೇ ಕುಡಿದ ಅಮಲಿನಲ್ಲಿ ಹೆಂಡತಿ ಮಕ್ಕಳೆನ್ನದೇ ಎಲ್ಲರಿಗೂ ಹೊಡೆಬಡೆ ಮಾಡುವುದು ಹಾಗೂ ಕುಡಿದ ನಶೆಯಲ್ಲಿ ಚಿರಾಟ, ಅವಾಚ್ಯ ಶಬ್ಧಗಳಿಂದ ಬೈಯುವುದು ಮಾಡುತ್ತಿರುವುದರಿಂದ ಶಾಂತ ರೀತಿಯಲ್ಲಿದ್ದ ಗ್ರಾಮ ಇಂದು ಸರಾಯಿ ಮಾರಾಟದಿಂದ ಶಾಂತಿ ಕಳೆದುಕೊಳ್ಳುತ್ತಿದೆ.
ಗ್ರಾಮದಲ್ಲಿ ಅನಧಿಕೃತವಾಗಿ ಮಾರಾಟ ಮಾಡುತ್ತಿರುವ ಸರಾಯಿಯಿಂದ ಗ್ರಾಮದ ಸಂಪೂರ್ಣ ನೆಮ್ಮದಿ ಹಾಳಾಗಿದ್ದು, ಬಹುತೇಕ ಕುಡುಕರು ಸರಾಯಿ ಚಟಕ್ಕೆ ಗುಲಾಮರಾಗಿ ಅಷ್ಟಿಷ್ಟ ಇದ್ದ ಜಮೀನು ಕೂಡ ಮಾರಾಟ ಮಾಡಿಕೊಂಡು ತಮ್ಮ ಕುಟುಂಬವನ್ನು ಬಿದಿಗೆ ತಂದಿರುತ್ತಾರೆ. ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಸರಾಯಿ ಮಾರಾಟ ಮಾಡುತ್ತಿರುವ ಕಿರಾಣಾ ಅಂಗಡಿಗಳ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ಹಾಳಾಗುತ್ತಿರುವ ಗ್ರಾಮದ ನೆಮ್ಮದಿ, ಶಾಂತಿ ಉಳಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ವಿಳಾಸಪೂರ ಗ್ರಾಮದ ಮಹಿಳೆಯರು ಮನವಿ ಮಾಡಿಕೊಂಡಿದ್ದಾರೆ.