ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಇಲ್ಲಿನ ರಾಜನಗರ ಮೈದಾನದಲ್ಲಿ ಆಯೋಜಿಸಿದ್ದ ಅಂಡರ್-16 ಇಂಟರ್ ಕ್ಲಬ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಎಸ್ಡಿಎಂ ಕ್ರಿಕೆಟ್ ಅಕಾಡೆಮಿ ಟಾಸ್ ಗೆದ್ದು ಕ್ಷೇತ್ರ ರಕ್ಷಣೆ ಆಯ್ದುಕೊಂಡಿತು.
ಹುಬ್ಬಳ್ಳಿ:
ಅರ್ಜುನ ಗೊಥೆ 53, ಶಿವಂ ಕಾಟವೆ 28 ಅವರ ಉತ್ತಮ ಬ್ಯಾಟಿಂಗ್ ಹಾಗೂ ಸುಚೇತನ್ ಹರಿಹರ 22-3, ನಿತಾಂತ್ ಪಾವಸ್ಕರ್ 20-3 ಇವರ ಉತ್ತಮ ಬೌಲಿಂಗ್ನಿಂದ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ ಎ ತಂಡ ಎಸ್ಡಿಎಂ ಕ್ರಿಕೆಟ್ ಅಕಾಡೆಮಿ ಎ ತಂಡದ ವಿರುದ್ಧ 47 ರನ್ಗಳಿಂದ ಜಯ ಗಳಿಸಿ ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತು.ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಇಲ್ಲಿನ ರಾಜನಗರ ಮೈದಾನದಲ್ಲಿ ಆಯೋಜಿಸಿದ್ದ ಅಂಡರ್-16 ಇಂಟರ್ ಕ್ಲಬ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಎಸ್ಡಿಎಂ ಕ್ರಿಕೆಟ್ ಅಕಾಡೆಮಿ ಟಾಸ್ ಗೆದ್ದು ಕ್ಷೇತ್ರ ರಕ್ಷಣೆ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ ಎ ತಂಡ 40.4 ಓವರ್ನಲ್ಲಿ 149ಕ್ಕೆ ಆಲ್ಔಟ್ ಆಯಿತು. ತಂಡದ ಪರ ಅರ್ಜುನ ಗೊಥೆ 53, ಶಿವಂ ಕಾಟವೆ 28, ನಿತಾಂತ್ ಪಾವಸ್ಕರ್ 16 ರನ್ ಗಳಿಸಿದರು.
ಲೀಲಾಕೃಷ್ಣ 32-3, ಅಣ್ಣಪ್ಪ ಹೊಸಮನಿ 28-2, ನವಾಜ್ ಶಿಬಾರಗಟ್ಟಿ 23-2 ವಿಕೆಟ್ ಪಡೆದರು. ನಂತರ ಬ್ಯಾಟಿಂಗ್ ಮಾಡಿದ ಎಸ್ಡಿಎಂ ಕ್ರಿಕೆಟ್ ಅಕಾಡೆಮಿ 45.4 ಓವರ್ನಲ್ಲಿ 102 ರನ್ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಸೋಲು ಅನುಭವಿಸಿತು. ತಂಡದ ಪರ ಶಲೊಕ್ ಮಹಾಲೆ 32 ರನ್ ಗಳಿಸಿದರು. ಸುಚೇತನ್ ಹರಿಹರ 22-3, ನಿತಾಂತ್ ಪಾವಸ್ಕರ್ 20-3, ಹರೀಶಗೌಡ ತೋಟದ 15-2 ವಿಕೆಟ್ ಪಡೆದುಕೊಂಡರು. ಕೋಚ್ ನಟರಾಜ ಯಾವಗಲ್, ನಿರ್ದೇಶಕ ಪ್ರಮೋದ ಜಂಬಗಿ ಗೆದ್ದ ತಂಡವನ್ನು ಅಭಿನಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.