ನಟನಾಭಿನಯದಿಂದ ಸತ್ಯ ಅರ್ಥ ಮಾಡಿಕೊಳ್ಳಿ

KannadaprabhaNewsNetwork |  
Published : Nov 29, 2025, 12:15 AM IST
ಹೆಗ್ಗೊಡು ಪ್ರಸನ್ನ | Kannada Prabha

ಸಾರಾಂಶ

ಇಂದಿನ ಸಮಾಜ ಆರ್ಥಿಕ ಗಳಿಕೆಯತ್ತ ಗಮನ ನೀಡುವ ಬದಲು ಸಾಮಾಜಿಕ ಗಳಿಕೆಯತ್ತ ಹೆಚ್ಚಿನ ಗಮನ ನೀಡಬೇಕಾಗಿದೆ ಎಂದು ಖ್ಯಾತ ರಂಗಕರ್ಮಿ ಹೆಗ್ಗೊಡು ಪ್ರಸನ್ನ ಹೇಳಿದರು.

ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ

ಇಂದಿನ ಸಮಾಜ ಆರ್ಥಿಕ ಗಳಿಕೆಯತ್ತ ಗಮನ ನೀಡುವ ಬದಲು ಸಾಮಾಜಿಕ ಗಳಿಕೆಯತ್ತ ಹೆಚ್ಚಿನ ಗಮನ ನೀಡಬೇಕಾಗಿದೆ ಎಂದು ಖ್ಯಾತ ರಂಗಕರ್ಮಿ ಹೆಗ್ಗೊಡು ಪ್ರಸನ್ನ ಹೇಳಿದರು.

ಮೂರು ದಿನಗಳ ಮಾನಸೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಯುವ ಜಡನತೆ ತಮ್ಮ ಸಾಮರ್ಥ್ಯ ಮತ್ತು ಧೈರ್ಯದಿಂದ ವಯೋವೃದ್ದರನ್ನು ರಕ್ಷಿಸುವ ಕೆಲಸ ಮಾಡಬೇಕು, ಇಂದಿನ ಸಮಾಜ ಹೆಚ್ಚುಗಾರಿಕೆ ಎಂಬ ಹುಂಬತನಕ್ಕೆ ಸಿಲುಕಿ ತತ್ತರಿಸುತ್ತಿದೆ ಎಂದರು.

ಮೂರು ದಿನಗಳ ಕಾಲ ಜರುಗುವ ಮಾನಸೋತ್ಸವ ನಮ್ಮ ಸಂಸ್ಕೃತಿಯ ಭವ್ಯತೆ ಮೆರೆಯಲಿ. ಪ್ರಸ್ತುತ ಮೊಬೈಲ್ ಎಂಬ ಕಾಯಿಲೆಯಿಂದ ಹೊರಬರಬೇಕಾದರೆ ನಾಟಕ ಎಂಬ ಔಷಧಿಯೇ ಇದಕ್ಕೆ ಪರಿಹಾರವಾಗಿದೆ. ನಾಟಕ ಎಂಬ ನಟನಾಭಿನಯದ ಮೂಲಕ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಮೊಬೈಲ್ ನಲ್ಲಿ ಒಳ್ಳೇಯದ್ದು ಇದೆ, ಕೆಟ್ಟದ್ದು ಇದೆ. ವಿಪರೀತವಾಗಿ ಬಳಸಿದರೆ ಇದು ಕೆಟ್ಟ ಚಟವಾಗಿ ಬದಲಾಗುತ್ತೆ ಎಂದು ಹೇಳಿದರು.

ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠಾಧ್ಯಕ್ಷ ಡಾ.ಶ್ರೀ ಶ್ರೀ ನಿಶ್ಚಲಾನಂದಸ್ವಾಮಿಜಿ ಮಾತನಾಡಿ, ರಾಷ್ಟ್ರ ನಾಯಕರ ಆದರ್ಶ ಪಾಲಿಸಬೇಕಾದ ಯುವ ಸಮುದಾಯ ದೇಶ ದ್ರೋಹಗಳಂತಹ ಕೖತ್ಯಗಳಲ್ಲಿ

ಪಾಲ್ಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಮಕ್ಕಳು ಸಮಾಜ ಮುಖಿಗಳಾಗುವ ಮೂಲಕ ಶೋಭೆ ತರಬೇಕೆ ಹೊರತು ಕ್ಷೋಭೆಯನ್ನು ಉಂಟುಮಾಡಬಾರದು,

ತಂದೆ, ತಾಯಯಂದಿರು ನಿಮಗಾಗಿ ಮಾಡಿದ ತ್ಯಾಗ ಸ್ಮರಿಸುವಂತಾಗಬೇಕು, ರಾಷ್ಟ್ರಕ್ಕಾಗಿ ಮಕ್ಕಳು ತ್ಯಾಗಕ್ಕೆ ಸಜ್ಜಾಗಬೇಕು, ದೇಶ ಪ್ರೇಮಿಗಳಾಗಬೇಕು ದೇಶಕ್ಕಾಗಿ ದುಡಿದು ತ್ಯಾಗ ಬಲಿದಾನಗೈದ ಮಹಾತ್ಮರ ದುಷ್ಟಾಂತಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು, ದೇಶ್ಕಕೆ ಒಳಿತಾಗುವ ಆಲೋಚನೆಗಳನ್ನು ತೆರೆಯುವುದೇ ಶಿಕ್ಷಣದ ಪ್ರಮುಖ ಉದ್ದೇಶ, ಕಲಿತ ಅಕ್ಷರ ಲೆಗೆ ಬೀಳುವ ಬದಲು ಹೖದಯಕ್ಕೆ ಬೀಳುವಂತಾಗಬೇಕು, ಈನಿಟ್ಟಿನಲ್ಲಿ ಮಾಸಸ ಶಿಕ್ಷಣ ಸಂಸ್ಥೆ ಕಾಯ೯ ಶ್ಲಾಘನೀಯ ಎಂದರು.

ದೀನಬಂಧು ಸಂಸ್ಥಾಪಕ ಡಾ. ಜಿ.ಎಸ್. ಜಯದೇವ ಮಾತನಾಡಿ, ಸಂತೋಷಕ್ಕಾಗಿ ಹಣವೊಂದು ಕಾರಣವಾಗದು, ಯಶಸ್ಸು ಜೀವನದ ಮುಖ್ಯ ಉದ್ದೇಶವಲ್ಲ, ಪರಸ್ಪರ ಒಬ್ಬರನ್ನು ಒಬ್ಬರು ಪ್ರೀತಿಸುವ ಮುಗ್ದತೆ ಪಾವಿತ್ರ್ರತೆಯನ್ನು ಬೆಳೆಸಿಕೊಳ್ಳಬೇಕು, ಶಿಕ್ಷಣ ಸಂಸ್ಥೆಗಳು ಹಣಕ್ಕಾಗಿ ಕಾರ್ಯನಿರ್ವಹಿಸಬಾರದು, ಸಮಾಜ ಮುಖ್ಯಭಾಗವಾಗಿ, ಮಾನವೀಯ ಮೌಲ್ಯದ ಶಿಕ್ಷಣ ನೀಡುವಲ್ಲಿ ಮುಂದಾಗಬೇಕು, ಈನಿಟ್ಟಿನಲ್ಲಿ ಮಾನಸ ಸಂಸ್ಥೆ ಕಾರ್ಯ ಶ್ಲಾಘನೀಯವಾದುದು ಎಂದರು.

ಪತ್ರಕರ್ತ ಎಂ.ಆರ್. ಸತ್ಯನಾರಾಯಣ, ಡಾ. ಶಿವರಾಜಪ್ಪ, ಜಿಪಂ ಮಾಜಿ ಅಧ್ಯಕ್ಷ ಕೆ ಕೆ ನಟರಾಜು, ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ.ದತ್ತೇಶ್ ಕುಮಾರ್, ಅಧ್ಯಕ್ಷ ನಾಗರಾಜು, ರೂಪದತ್ತೇಶ್, ಡಾ. ಚನ್ನಶೆಟ್ಟಿ, ಕೖಷ್ಣೆಗೌಡ,

ನಾಗಭೂಷಣ್, ಶಂಕರ್, ನಯನ ಕ್ಲಾರಿಬಲ್ ಇನ್ನಿತರಿದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರೀಶ ವಿರುದ್ಧ ಸುಳ್ಳು ಕೇಸ್: ಶೀಘ್ರ ಹೋರಾಟ- ಸಿದ್ದೇಶ್ವರ
ಸಮರ್ಪಣ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಚಾಲನೆ