ಕನ್ನಡಪ್ರಭ ವಾರ್ತೆ ವಿಜಯಪುರ
ಕ್ರೀಡಾ ತಜ್ಞ ಡಾ.ಅಶೋಕಕುಮಾರ ರಾ.ಜಾಧವ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಕನ್ನಾಳ ತಾಂಡಾದಲ್ಲಿ ಗಜಾನನ ಉತ್ಸವದ ನಿಮಿತ್ತ ಶಾಂತಿನಗರ ಯುವ ಸೇನೆ ಹಾಗೂ ತಾಂಡಾದ ಕ್ರೀಡಾ ಪ್ರೋತ್ಸಾಹಕರ ವತಿಯಿಂದ ಸಂಘಟಿಸಲಾದ ಶಾಂತಿನಗರ ಪ್ರೀಮಿಯರ್ ಲೀಗ್ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ಮಾತನಾಡಿದ ಅವರು, ಇವೆಲ್ಲವುಗಳಿಂದ ವಂಚಿತರಾದ ಸಾವಿರಾರು ಆಟಗಾರರು ಪ್ರತಿಭೆಯಿದ್ದರೂ, ಅವಕಾಶ ವಂಚಿತರಾಗಿ ತಮ್ಮ ಕನಸನ್ನೇ ಮೊಟಕುಗೊಳಿಸಿ ನಿರಾಸೆ ಅನುಭವಿಸುತ್ತಿದ್ದಾರೆ. ಆದರೆ, ಗ್ರಾಮೀಣ ಪ್ರದೇಶದ ಮತ್ತು ಅತ್ಯಂತ ಹಿಂದುಳಿದ ಪ್ರದೇಶವಾದ ಕನ್ನಾಳ ತಾಂಡಾದಲ್ಲಿ ಗ್ರಾಮೀಣ ಭಾಗದ ಆಟಗಾರರಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಪಂದ್ಯಾವಳಿ ಸಂಘಟಿಸಿದ್ದು ಇದರ ಲಾಭವನ್ನು ಪಡೆದು ಯಶಸ್ಸು ಸಾಧಿಸಬೇಕು ಎಂದು ಸಲಹೆ ನೀಡಿದರು.ಬಿಎಲ್ಡಿಇ ಸಂಸ್ಥೆಯ ಆಡಳಿತಾಧಿಕಾರಿ ಶಿವನಗೌಡ ಬಿರಾದಾರ ಉದ್ಘಾಟಿಸಿ ಮಾತನಾಡಿ, ತಾಂಡಾದ ಯುವಕರು ಯಾವತ್ತೂ ಲವಲವಿಕೆಯಿಂದಿದ್ದು, ಒಂದಿಲ್ಲೊಂದು ಸಮಾಜಮುಖಿ ಕ್ರಿಯಾತ್ಮಕ ಚಟುವಟಿಕೆಗಳನ್ನು ಸಂಘಟಿಸುತ್ತ ಬರುತ್ತಿದ್ದಾರೆ. ಅವರು ಸಂಘಟಿಸುವ ಪ್ರತಿ ಚಟುವಟಿಕೆಗಳಿಗೆ ತಾವು ಯಾವತ್ತೂ ಬೆನ್ನೆಲುಬಾಗಿರುವೆ ಎಂದು ಭರವಸೆ ನೀಡಿದರು. ಶಾಂತಿನಗರದಲ್ಲಿ ಆಟಗಾರರು ಶಾಂತಿಯುತವಾಗಿ ಕ್ರೀಡಾಮನೋಭಾವದಿಂದ ಪಾಲ್ಗೊಂಡು ಮುಂದಿನ ಬಾರಿ ಇನ್ನೂ ಹೆಚ್ಚಿನ ರೀತಿಯಲ್ಲಿ ಪಂದ್ಯಾವಳಿ ಸಂಘಟಿಸುವಂತಾಗಲೂ ಪ್ರೇರಣೆ ನೀಡಬೇಕು. ನೀವು ಇಲ್ಲಿ ತೋರುವ ಕ್ರೀಡಾ ಸ್ಫೂರ್ತಿ ನಿಮ್ಮ ಜೀವನದಲ್ಲಿ ಅಭಿಮಾನದಿಂದಿರಲು ಸಹಾಯವಾಗುತ್ತದೆ. ತಾಂಡಾದ ಯುವಕರ ಪರಿಶ್ರಮ ಮತ್ತು ಬಹಳ ಉತ್ಸಾಹದಿಂದ ಸಂಘಟಿಸುತ್ತಿರುವ ರೀತಿ ವಿಶೇಷವಾಗಿ ಎಲ್ಲರನ್ನು ಒಗ್ಗಟ್ಟಿನಿಂದ ಪಂದ್ಯಾವಳಿ ಯಶಸ್ವಿಗೊಳಿಸಲು ಬೆನ್ನೆಲುಬಾಗಿ ನಿಂತಿರುವ ಮೋಹನ ಟೊಪು ಚವ್ಹಾಣ ಅವರನ್ನು ಅಭಿನಂದಿಸಿದರು.ಯುವ ಧುರೀಣ ಅಭಿನವ ದೇವಾನಂದ ಚವ್ಹಾಣ ಮಾತನಾಡಿ, ತಮ್ಮ ತಂದೆಯವರೂ ಕೂಡ ಕ್ರಿಕೆಟ್ ಆಟಗಾರರಿದ್ದರು. ಆ ಕ್ರೀಡಾಮನೋಭಾವದಿಂದ ಇವತ್ತಿಗೂ ಅವರು ಚೈತನ್ಯಭರಿತರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ದರಿಂದ ಯುವ ಆಟಗಾರಿಗೆ ಪ್ರೋತ್ಸಾಹಿಸಲು ಪ್ರಥಮ ಬಹುಮಾನ ಕೊಡಮಾಡಿದ್ದು, ಯುವ ಶಕ್ತಿಯೇ ದೇಶದ ಶಕ್ತಿಯಾಗಿದ್ದು, ಅವರನ್ನು ಹುರಿದುಂಬಿಸಲು ಸದಾ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿಸಿದರು.ಕ್ರಿಕೆಟ್ ಅಷ್ಟೇ ಅಲ್ಲ, ಯಾವುದೇ ಕ್ರೀಡೆಯಾಗಲಿ, ಸಾಂಸ್ಕೃತಿಕ ಚಟುವಟಿಕೆಗಳನ್ನು ಸಂಘಟಿಸುತ್ತ ತಾವು ಆರೋಗ್ಯವಂತರಾಗಿ ಸಮಾಜ ಆರೋಗ್ಯವಂತರನ್ನಾಗಿ ಮಾಡಬೇಕು. ಯುವಕರ ಆತ್ಮಬಲ ಹೆಚ್ಚಿಸಲು ಉಪಯೋಗವಾಗುವ ಇಂತಹ ಚಟುವಟಿಕೆಗಳನ್ನು ಸಂಘಟಿಸುತ್ತ ಇರಬೇಕು. ಅದಕ್ಕಾಗಿ ಬೇಕಾಗುವ ಎಲ್ಲ ಸಹಕಾರವನ್ನು ನೀಡಲು ಸದಾ ಸಿದ್ಧ ಎಂದು ಭರವಸೆ ನೀಡಿದರು.ವಿಶೇಷ ಅತಿಥಿ ಆನಂದಕುಮಾರ ಬಂಡಿ, ಮೋಹನ ಟಿ.ಚವ್ಹಾಣ, ಅಶೋಕ ನಾಯಕ (ಬುಟ್ಟಾ), ಪ್ರಸಾದ ಡಿ.ಚವ್ಹಾಣ ಮಾತನಾಡಿದರು.ಪಂದ್ಯಾವಳಿಯ ಪ್ರಮುಖ ಸಂಘಟಕ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಮೋಹನ ಟೋಪು ಚವ್ಹಾಣ ಪಂದ್ಯಾವಳಿಗೆ ಬೇಕಾಗಿರುವ ಆರ್ಥಿಕ ಸಹಾಯ ಕ್ರೋಢಿಕರಿಸಿದ್ದು, ಪಂದ್ಯಾವಳಿಯ ಹಾಗೂ ಕಾರ್ಯಕ್ರಮದ ರೂಪರೇಷ ಮಾಡಿ ನಿರೂಪಣೆ ಮಾಡಿದರು.
-ಡಾ.ಅಶೋಕಕುಮಾರ ರಾ.ಜಾಧವ,