ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಪರಿಶಿಷ್ಟ ಜಾತಿ, ವರ್ಗಗಳ ನೌಕರರ ಸಂಘದ ಆವರಣದಲ್ಲಿ ಮಂಡ್ಯದಲ್ಲಿ ಜು.೧೮ರಂದು ನಡೆಯುವ ಮಂಡ್ಯ ಜಿಲ್ಲಾ ಮಟ್ಟದ ಪ್ರಥಮ ಬೌದ್ಧ ಸಮ್ಮೇಳನದ ಹಿನ್ನೆಲೆಯಲ್ಲಿ ಬುದ್ಧ ಅನುಯಾಯಿಗಳು, ಅಂಬೇಡ್ಕರ್ ಅನುಯಾಯಿಗಳು ಹಾಗೂ ಕುವೆಂಪು ಅನುಯಾಯಿಗಳು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತ ಸಂವಿಧಾನದ ಅನುಚ್ಚೇದ ೧೭ ಇಡೀ ಭಾರತದಲ್ಲಿ ಅಸ್ಪೃಶ್ಯತೆ ಆಚರಣೆ ನಿಷೇಧಿಸಿದೆ. ಆದರೆ, ಭಾರತದಲ್ಲಿ ಇಂದಿಗೂ ಸುಮಾರು ೮೨ ರೀತಿಯ ಅಸ್ಪಶ್ಯತೆ ಆಚರಣೆ ಮಾಡಲಾಗುತ್ತಿದೆ. ಅದು ನವ ನಾಗರೀಕತೆಯ ಬೇರೆ ಬೇರೆ ಮಗ್ಗುಲುಗಳಿಂದಲೇ ಹೊರ ಬರುತ್ತಿದೆ ಎಂದು ವಿಷಾದಿಸಿದರು.ಈ ಬಗ್ಗೆ ಮೂಲ ಭಾರತೀಯರೆಲ್ಲರೂ ಹಿಂದೂ ಧರ್ಮ ತೊರೆದು ತುರ್ತಾಗಿ ಬುದ್ಧನ ಕಡೆ ಮತ್ತು ಆತನ ಧಮ್ಮದ ಕಡೆ ಮುಖ ಮಾಡಬೇಕು ಎಂದರು.
ಬಳಿಕ ಚಿಕ್ಕರಸಿಕೆರೆ ಶಿವಲಿಂಗಯ್ಯ ಮಾತನಾಡಿ, ಸರ್ವ ಬೌದ್ಧರು, ಅಂಬೇಡ್ಕರ್ ಅನುಯಾಯಿಗಳು, ಕುವೆಂಪು ಅನುಯಾಯಿಗಳು ಎಲ್ಲರನ್ನೂ ಸಭೆ ಕರೆದಿದ್ದರು. ನಮ್ಮ ಮುಂದೆ ವಿವಿಧ ರೀತಿಯ ಸಾಮಾಜಿಕ ಅನಿಷ್ಟಗಳಿದ್ದು, ಈ ಎಲ್ಲಾ ಅನಿಷ್ಟಗಳನ್ನು ಹೋಗಲಾಡಿಸಲು ನಮಗೆ ಬುದ್ಧ ಮಾರ್ಗವೊಂದೇ ಉಳಿದಿರುವುದು ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ವಿಚಾರವಾದಿಗಳಾದ ಕೆ.ಮಾಯಿಗೌಡ, ಅನ್ನದಾನಿ, ಅಭಿಗೌಡ ಹನಕೆರೆ, ನಾಗರಾಜ ಅಂಬೇಡ್ಕರ್, ಪ್ರಗತಿಪರ ಚಿಂತಕರಾದ ಜೆ.ರಾಮಯ್ಯ, ಡಾ.ಯೋಗೇಂದ್ರ ಕುಮಾರ್, ಮೋಹನ್ ಪ್ರಭುದ್ಧಿ ಮತ್ತು ವಿವಿಧ ತಾಲೂಕುಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.