ಕನ್ನಡಪ್ರಭ ವಾರ್ತೆ ಮಂಡ್ಯ
ಸಂಪ್ರೀತ್ ಸಂತೋಷ್ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಂಡ್ಯದಲ್ಲಿ ಮುಗಿಸಿದ್ದು, ಬೆಂಗಳೂರಿನಲ್ಲಿ ಪ್ರೌಢಶಾಲೆ, ಪಿಯುಸಿ ವ್ಯಾಸಂಗ ಮುಗಿಸಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಗಳಿಸಿದ್ದಾರೆ. ಎಂ.ಎ.ಸಾರ್ವಜನಿಕ ಆಡಳಿತ ವಿಷಯದಲ್ಲಿ ಟಾಪರ್ ಆಗಿ ಸಂಪ್ರೀತ್ ಸಂಜಯ್ ಹೊರಹೊಮ್ಮಿದ್ದರು.
ಯುಪಿಎಸ್ಸಿ: ಎಂ.ಆರ್.ನಿಖಿಲ್ಗೆ ೭೨೪ನೇ ರ್ಯಾಂಕ್ಕನ್ನಡಪ್ರಭ ವಾರ್ತೆ ಮಂಡ್ಯ
ಯುಪಿಎಸ್ಸಿ ಪರೀಕ್ಷೆಯಲ್ಲಿ ಮಂಡ್ಯ ತಾಲೂಕು ಮೊಡಚಾಕನಹಳ್ಳಿ ಮೂಲದ ಎಂ.ಆರ್.ನಿಖಿಲ್ ೭೨೪ನೇ ರ್ಯಾಂಕ್ ಗಳಿಸಿದ್ದಾರೆ. ನಗರಸಭೆ ನಿವೃತ್ತ ಆಯುಕ್ತ ಎಂ.ಎಲ್.ರಮೇಶ್ ಹಾಗೂ ಡಾ.ಬಿ.ಕೆ.ಪ್ರತಿಮಾ ಅವರ ಪುತ್ರ ಎಂ.ಆರ್.ನಿಖಿಲ್ ಮೂರನೇ ಪ್ರಯತ್ನದಲ್ಲಿ ಯುಪಿಎಸ್ಸಿಯಲ್ಲಿ ತೇರ್ಗಡೆಯಾಗಿದ್ದಾರೆ. ಪ್ರಸ್ತುತ ಕಾರ್ಮಿಕ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಂಡ್ಯದಲ್ಲಿ ಪೂರೈಸಿ ಬಳಿಕ ಪ್ರೌಢಶಾಲೆ, ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಪೂರ್ಣಗೊಳಿಸಿದರು. ಮೈಸೂರಿನ ಜೆ.ಸಿ.ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಗಳಿಸಿದ್ದಾರೆ. ನಿಖಿಲ್ ಸಹೋದರ ಎಂ.ಆರ್.ಜಗದೀಶ್ಕುಮಾರ್ ಬಿಇ, ಎಂ.ಎಸ್.ವ್ಯಾಸಂಗ ಮಾಡಿ ಜರ್ಮನಿಯ ಏರೋನಾಟಿಕ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಡಾ.ಬಿ.ಕೆ.ಪ್ರತಿಮಾ ಅವರು ಶ್ರೀರಂಗಪಟಣ್ಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಶಿಕ್ಷಣ ಸಂಯೋಜಕರು ಆಗಿದ್ದಾರೆ.