ಕನ್ನಡಪ್ರಭ ವಾರ್ತೆ ಚಳ್ಳಕೆರೆ
ತಾಲೂಕಿನ ರಾಮಜೋಗಿಹಳ್ಳಿ ಪಂಚಾಯಿತಿಯಲ್ಲಿ ಬುಧವಾರ ಆಯೋಜಿಸಿದ್ದ ಕೇಂದ್ರ ಸರ್ಕಾರದ ಪ್ರಾಯೋಜಿತ ಧರ್ತಿ ಮಾತಾ ಬಚಾವೋ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ರೈತರು ಅಧಿಕವಾಗಿ ಮಣ್ಣಿಗೆ ರಸಗೊಬ್ಬರ ಸೇರ್ಪಡೆ ಮಾಡಿ ಮಣ್ಣಿನ ಆರೋಗ್ಯವನ್ನು ಕೆಡಿಸುತ್ತಿದ್ದಾರೆ. ಇಂತಹ ನಡವಳಿಕೆಗಳಿಗೆ ಇತಿಶ್ರೀ ಹಾಡುವ ಅಗತ್ಯವಿದೆ ಎಂದರು.
ಕೇಂದ್ರ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮ ಇದಾಗಿರುವುದರಿಂದ ಪ್ರತಿ ಪಂಚಾಯಿತಿಯಲ್ಲೂ ರೈತರಿಗೆ ಮಣ್ಣಿನ ಸಂರಕ್ಷಣೆ ಕುರಿತು ಅರಿವು ಮಾಡಿಸುವ ಕೆಲಸ ಮಾಡಲಾಗುತ್ತಿದೆ.ರೈತರು ಪ್ರತಿ ಆರು ತಿಂಗಳಿಗೊಮ್ಮೆ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಆ ಮೂಲಕ ಮಣ್ಣಿನಲ್ಲಿರುವ ಕೊರತೆ ಸೇರಿದಂತೆ ಅದರ ಸಾರ ತಿಳಿಯಬೇಕು. ಅತಿಯಾದ ರಸಗೊಬ್ಬರವನ್ನು ಮಣ್ಣಿಗೆ ಹಾಕಿ ಬೆಳೆ ತೆಗೆಯುವ ನಾವುಗಳು ಮಣ್ಣಿನಲ್ಲಿರುವ ಕೊರತೆ ಏನು ಎಂಬುದನ್ನು ತಿಳಿಯದೇ ಸುಖಾಸುಮ್ಮನೆ ಬೇಕಾಗಿದ್ದನ್ನೆಲ್ಲಾ ಹಾಕಿಬಿಡುತ್ತೇವೆ ಎಂದರು.ಸಾವಯವ ಕೃಷಿಗೆ ಹೆಚ್ಚು ಆದ್ಯತೆ ನೀಡಬೇಕು. ಆಗ ಮಣ್ಣಿನ ಆರೋಗ್ಯ ಕಾಪಾಡಬಹುದಾಗಿದೆ. ಮಣ್ಣಿನ ಪರೀಕ್ಷೆ ಆದ ಮೇಲೆ ಅದಕ್ಕೆ ಬೇಕಾಗುವ ಪೋಷಕಾಂಶ, ಲವಣಗಳು ಸೇರಿದಂತೆ ಯಾವುದರ ಕೊರತೆ ಇದೆ ಎಂಬುದನ್ನು ತಿಳಿದು ಅದನ್ನು ನೀಗಿಸಬಹುದು. ರೈತರು ಇಂತಹ ಕೆಲವು ಸೂಕ್ಷ್ಮಗಳನ್ನು ಅರಿತುಕೊಂಡು ಮಣ್ಣಿನ ಸಂರಕ್ಷಣೆ ಹೊಣೆಯನ್ನು ತಾವುಗಳೇ ಹೊರಬೇಕಾಗಿದೆ.
ರಾಮಜೋಗಿಹಳ್ಳಿ ಪಂಚಾಯಿತಿಯ ರೈತರು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.