ಶರಣ ಸಾಹಿತ್ಯಕ್ಕೆ ಉತ್ತಂಗಿ ಚೆನ್ನಪ್ಪನವರು ಸೇವೆ ಅಪಾರ: ಮಲ್ಲಿಕಾರ್ಜುನ ಸ್ವಾಮೀಜಿ

KannadaprabhaNewsNetwork |  
Published : Oct 13, 2025, 02:02 AM IST
ಮುಳಗುಂದ ಕಲಾಭವನದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಡಾ. ಎಸ್.ಬಿ. ಶೆಟ್ಟರ ಉದ್ಘಾಟಿಸಿದರು. ಮಲ್ಲಿಕಾರ್ಜುನ ಸ್ವಾಮೀಜಿ, ಪ್ರಭುಲಿಂಗ ದೇವರು ಇತರರು ಇದ್ದರು. | Kannada Prabha

ಸಾರಾಂಶ

ಉತ್ತಂಗಿ ಚೆನ್ನಪ್ಪ ಅವರು ಅನುಭವ ಮಂಟಪ ಅಸತ್ಯ ಎಂದವರಿಗೆ ಸತ್ಯವೆಂದು ಸಾಕ್ಷಿ ಸಮೇತ ಅರಿವು ಮೂಡಿಸಿದವರು. ಶರಣ ಸಾಹಿತ್ಯವನ್ನ ಆಳವಾಗಿ ಅಧ್ಯಯನ ಮಾಡಿ, ಆಧುನಿಕ ಸರ್ವಜ್ಞ ಎಂದೆ ಖ್ಯಾತರಾಗಿದ್ದರು.

ಮುಳಗುಂದ: ಶರಣ ಸಾಹಿತ್ಯದ ಅಧ್ಯಯನಶೀಲರಾಗಿದ್ದ ರೆವರೆಂಡ್ ಉತ್ತಂಗಿ ಚೆನ್ನಪ್ಪನವರ ಸೇವೆ ಅಪಾರವಾಗಿದೆ. ಅವರು ಮಾಡಿದ ಸಮಾಜ ಸೇವೆ, ಸಾಧನೆ, ತ್ಯಾಗ ಅವಿಸ್ಮರಣೀಯ. ಸಮಾಜದ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ ಎಂದು ಗವಿಮಠ ಹಾಗೂ ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಹಾಗೂ ಲಿಂ. ಗಂಗಮ್ಮ ಚನ್ನಬಸಪ್ಪ ಚವಡಿ ಅವರ ಸ್ಮರಣಾರ್ಥ ಬಿಎಂಎಸ್ ಕಲಾಭವನದಲ್ಲಿ ಭಾನುವಾರ ನಡೆದ ದತ್ತಿ ಉಪನ್ಯಾಸ, ಸನ್ಮಾನ ಹಾಗೂ ಚವಡಿ ಪ್ರತಿಷ್ಠಾನ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಅನುಭವ ಮಂಟಪ ಅಸತ್ಯ ಎಂದವರಿಗೆ ಸತ್ಯವೆಂದು ಸಾಕ್ಷಿ ಸಮೇತ ಅರಿವು ಮೂಡಿಸಿದವರು. ಶರಣ ಸಾಹಿತ್ಯವನ್ನ ಆಳವಾಗಿ ಅಧ್ಯಯನ ಮಾಡಿ, ಆಧುನಿಕ ಸರ್ವಜ್ಞ ಎಂದೆ ಖ್ಯಾತರಾಗಿದ್ದರು. ತ್ಯಾಗ ಜೀವಿಗಳು, ಸಮಾಜ ಸುಧಾರಕರ ಪರಿಚಯ, ಅವರ ಸೇವೆ ಸ್ಮರಿಸುವ ದತ್ತಿ ಉಪನ್ಯಾಸ ಕಾರ್ಯಕ್ರಮ ಶ್ಲಾಘನೀಯ ಎಂದರು.

ಸಾಹಿತಿ ರಮೇಶ ಕಲ್ಲನಗೌಡರ ಮಾತನಾಡಿ, ಉತ್ತಂಗಿ ಚೆನ್ನಪ್ಪನವರ ಕ್ರಿಶ್ಚಿಯನ್ ಧರ್ಮ ಪಾಲಕರಾಗಿದ್ದರೂ ಲಿಂಗಾಯತ ಶರಣ ಸಾಹಿತ್ಯದ ಕುರಿತು ಸಾಕಷ್ಟು ಅಧ್ಯಯನ ಮಾಡಿ ಅದರ ಉಳಿವಿಗೆ ಶ್ರಮಿಸಿದರು ಎಂದರು.

ವೈದ್ಯ ಡಾ. ಎಸ್.ಬಿ. ಶೆಟ್ಟರ ಚವಡಿ ಪ್ರತಿಷ್ಠಾನ ಉದ್ಘಾಟಿಸಿ ಮಾತನಾಡಿದರು. ಡಾ. ಅಶೋಕ ಗೋದಿ, ಡಾ. ಎಸ್.ಕೆ. ಜೋಶಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕಸಾಪ ಘಟಕದ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಅರ್ಬನ್ ಬ್ಯಾಂಕ್ ಅಧ್ಯಕ್ಷ ಶಿವಣ್ಣ ನೀಲಗುಂದ, ಬಿಎಂಎಸ್ ಶಿಕ್ಷಣ ಸಮಿತಿ ಅಧ್ಯಕ್ಷ ಎಂ.ಡಿ. ಬಟ್ಟೂರ,ಶಿವಕುಮಾರ ಚವಡಿ, ಹೋಬಳಿ ಘಟಕದ ಅಧ್ಯಕ್ಷ ಎಸ್.ಸಿ. ಚವಡಿ ಮೊದಲಾವದರು ಇದ್ದರು. ಈ ವೇಳೆ ಚವಡಿ ಕುಟುಂಬದವರಿಂದ ಕೋಟುಮಚಗಿ ಗ್ರಾಮದ ಗ್ರಂಥಾಲಯ ನಿರ್ಮಾಣಕ್ಕೆ ಭೂಮಿ ದಾನಪತ್ರ ಹಸ್ತಾಂತರಿಸಿದರು. ಆಕಾಶವಾಣಿ ಕಲಾವಿದ ಪ್ರಸಾದ ಸುತಾರ ಅವರಿಂದ ಸಂಗೀತ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ