ಕುಕನೂರು: ಸಾಹಿತ್ಯದಲ್ಲಿ ಗಟ್ಟಿತನ ಬಂದಿರುವುದೇ ವಚನ ಸಾಹಿತ್ಯದ ಮೂಲಕ ಎಂದು ಉಪನ್ಯಾಸಕ ಗಂಗಾಧರ ಅವಟೆರ್ ಹೇಳಿದರು.
ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ವೀರಣ್ಣ ವಾಲಿ ಮಾತನಾಡಿ, ಜಗತ್ತಿನ ಪ್ರಸಿದ್ಧ ಸಾಹಿತ್ಯ ರತ್ನಗಳು ನಮ್ಮೆಲ್ಲ ಬರವಣಿಗೆಗೆ ಸ್ಫೂತಿ೯ ನೀಡುತ್ತಿವೆ. ಮಹಾನ್ ದಿಗ್ಗಜರ ಆಶಯ ಉದಾಹರಿಸಿ ಉತ್ತಮ ಸಾಹಿತ್ಯ ರಚನೆಗೆ ಮುಂದಾಗಬೇಕೆಂದು ಹೇಳಿದರು.
ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ, ಲೇಖಕಿ ಗೀತಾ ಮಲ್ಲನಗೌಡರ, ಪರಿಷತ್ತಿನ ಅಧ್ಯಕ್ಷ ಕಳಕಪ್ಪ ಕುಂಬಾರ, ಸಾಹಿತಿ ಶಿವ ಪ್ರಸಾದ ಹಾದಿಮನಿ, ಬಳಗೆರಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಹೇಶ್ ಗೌಡ ಮಲ್ಲನಗೌಡರ, ನಿಲಯ ಮೇಲ್ವಿಚಾರಕ ರಾಮಚಂದ್ರಪ್ಪ ಹಣಗಿ, ರವಿ ಹಿರೇಮನಿ , ಮೇಘರಾಜ ಜೀಡಗಿ ಸೇರಿದಂತೆ ಇತರರು ಭಾಗವಹಿಸಿದ್ದರು. ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ್ ಉಪ್ಪಿನ ಅಧ್ಯಕ್ಷತೆ ವಹಿಸಿದ್ದರು.ಕವಿಗೋಷ್ಠಿಯಲ್ಲಿ ಭೋಜರಾಜ ಸೊಪ್ಪಿಮಠ, ವೀರೇಶ್ ಕುರಿ, ರಹೀಂ ಸಾಹೇಬ್, ಬಸವರಾಜ್ ಚೌಡಕಿ, ಮಹಾಲಕ್ಷ್ಮಿ ಮುಂಡರಗಿ, ರಾಣಿ ಹಳ್ಳಿ, ಮಾರುತಿ ಜೀವಣ್ಣವರ್ ಕವಿತೆಗಳನ್ನು ವಾಚಿಸಿದರು.ವಸಂತ ಗುಡಿ ನಿರೂಪಿಸಿದರು.