ಚಾಮರಾಜನಗರ ತಾಲೂಕಿನ ಬೆಟ್ಟದಪುರ ಗ್ರಾಮದ ಕೃಷಿಕರ ಮಕ್ಕಳಿಂದ ಸಮಾಜಮುಖಿ ಮದುವೆ---ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಮೂಡುಗೂರು ವಿರಕ್ತ ಮಠಾಧೀಶ ಇಮ್ಮಡಿ ಉದ್ದಾನ ಸ್ವಾಮೀಜಿ ಸಾರಥ್ಯದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಎಂ. ಶೈಲಕುಮಾರ್ (ಶೈಲೇಶ್) ನಿರೂಪಣೆ ನಡೆಸಿದರು. ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಹೂರದಹಳ್ಳಿ ಪ್ರಸಾದ್ ಸ್ವಾಗತಿಸಿದರು. ಕಟ್ನವಾಡಿ ಮಲೆಮಾದಪ್ಪ, ರಮೇಶ್, ಹೂರದಹಳ್ಳಿ ದೇವಪ್ಪ ತಂಡ ಭಜನೆ ನಡೆಸಿಕೊಟ್ಟಿತು. ಈ ಸಮಯದಲ್ಲಿ ಕಬ್ಬಹಳ್ಳಿ ಮಹೇಶ್, ಕಾಶಿಬುದ್ಧಿ ಕುಲಗಾಣ ಉಪಸ್ಥಿತರಿದ್ದರು.
---ಬಾಳು ಬಂಗಾರವಾಗಲಿ: ಪಡಗೂರು ಶ್ರೀಗುಂಡ್ಲುಪೇಟೆ: ಇಂದಿನ ದುಬಾರಿ ಯುಗದಲ್ಲಿ ಸರಳ ವಿವಾಹ ಮೂಗು ಮುರಿಯುವವರ ನಡುವೆ ನಾವು ‘ವಚನ ಕಲ್ಯಾಣʼ ಪದ್ಧತಿಯಲ್ಲಿ ಮದುವೆ ಆಗಲು ಸ್ವಇಚ್ಛೆಯಿಂದ ಬಂದ ನೂತನ ದಂಪತಿಗಳ ಬಾಳು ಬಂಗಾರವಾಗಲಿ ಎಂದು ಪಡಗೂರು ಅಡವಿ ಮಠಾಧೀಶ ಶಿವಲಿಂಗೇಂದ್ರ ಸ್ವಾಮೀಜಿ ಆಶೀರ್ವದಿಸಿದರು.
ಕೃಷಿಕರಾದರೂ ನಾವೇನು ಕಡಿಮೆ ಎಂದುಕೊಂಡು ಹಲವರು ಸಾಲ ಮಾಡುವ ಜೊತೆಗೆ ಇರುವ ಒಂದೋ, ಎರಡೋ ಎಕರೆ ಮಾರಿ ಅದ್ಧೂರಿ ಮದುವೆಯಾಗುವ ಬದಲು ಬದುಕಿಗೊಂದು ಆಧಾರ ಉಳಿಸಿಕೊಳ್ಳುವ ಜಾಣತನ ಈ ಮಕ್ಕಳದ್ದಾಗಿದೆ ಎಂದರು.
ವಚನ ಮಾಂಗಲ್ಯದ ಮೂಲಕ ಮದುವೆ ಆಗಲು ಇಚ್ಛಿಸುವ ವಧು, ವರರ ಬೆಂಬಲಕ್ಕೆ ಸಮಾಜ ನಿಲ್ಲುವ ಮೂಲಕ ಆಡಂಬರದ ಮದುವೆಗೆ ತೀಲಾಂಜಲಿ ನೀಡಲಿ ಎಂದು ಸಲಹೆ ನೀಡಿದರು.---
22ಜಿಪಿಟಿ2ಗುಂಡ್ಲುಪೇಟೆ ತಾಲೂಕಿನ ಪಡಗೂರು ಅಡವಿ ಮಠದಲ್ಲಿ ವಚನ ಮಾಂಗಲ್ಯದ ಮೂಲಕ ನೂತನ ಸತಿ, ಪತಿಗೆ ಪಡಗೂರು, ಮಾದಾಪಟ್ಟಣ, ಮೂಡುಗೂರು, ಕಬ್ಬಹಳ್ಳಿ ಶ್ರೀಗಳು ಆಶೀರ್ವಚನ ನೀಡಿದರು.