ಮುಂಡರಗಿ: ತಾಲೂಕಿನಲ್ಲಿ ಶರಣ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ಶರಣ ಸಾಹಿತ್ಯ ಪರಂಪರೆಯು ಬೆಳೆಸಬೇಕು. ಶರಣರ ವಚನಗಳ ತಾತ್ಪರ್ಯವನ್ನು ಹೇಳುವುದರ ಮೂಲಕ ಶರಣರ ವಿಚಾರಗಳು ಯುವಕರಿಗೆ ತಲುಪಿಸಬೇಕು ಎಂದು ಡಾ. ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.
ಶಸಾಪ ಜಿಲ್ಲಾಧ್ಯಕ್ಷ ಕೆ.ಎ. ಬಳಿಗೇರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಸಾಪದಿಂದ ಬಸವಾದಿ ಶಿವಶರಣರು ಮನುಕುಲಕ್ಕೆ ನೀಡಿದ ತತ್ತ್ವಾದರ್ಶಗಳನ್ನು ಸರ್ವರಿಗೂ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ವಚನ ಸಾಹಿತ್ಯವು ಮನುಸ್ಸನ್ನು ಪರಿಶುದ್ಧಗೊಳಿಸುವ ಕೆಲಸ ಮಾಡುತ್ತದೆ ಎಂದರು.ತಾಲೂಕಾಧ್ಯಕ್ಷ ವೀರಣ್ಣ ಮಡಿವಾಳರ ಮಾತನಾಡಿ, ತಾಲೂಕಿನಲ್ಲಿ ಶಸಾಪನಿಂದ ಉಪಯುಕ್ತವಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವುದು. ಈಗ 6 ಇರುವ ದತ್ತಿಗಳನ್ನು12 ಆಗುವಂತೆ ಪ್ರೇರೆಪಿಸಲಾಗುವುದು. ತಾಲೂಕಿನಲ್ಲಿ ಶಸಾಪ ಸದಸ್ಯತ್ವ ಅಭಿಯಾನ ಹಾಕಿಕೊಂಡು ಹೆಚ್ಚು ಹೆಚ್ಚು ಸದಸ್ಯರನ್ನು ಮಾಡಲಾಗುವುದು ಎಂದರು.
ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ, ಕದಳಿ ಮಹಿಳಾ ವೇದಿಕೆ ತಾಲೂಕಾಧ್ಯಕ್ಷೆ ಸೀತಾ ಬಸಾಪೂರ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಡಾ. ಸಂತೋಷ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಎಸ್.ಆರ್. ಬಸಾಪೂರ ಸೇವಾದೀಕ್ಷೆ ಬೋಧನೆ ನಡೆಸಿಕೊಟ್ಟರು. ಎಂ.ಕೆ. ಲಮಾಣಿ ಹಾಗೂ ಶಸಾಪ, ಕದಳಿ ಮಹಿಳಾ ವೇದಿಕೆ ಪದಾಧಿಕಾರಿಗಳು, ಶರಣ ಸಾಹಿತ್ಯಾಸಕ್ತರು ಉಪಸ್ಥಿತರರಿದ್ದರು. ಶಸಾಪ ತಾಲೂಕು ಗೌರವಾಧ್ಯಕ್ಷ ಆರ್.ಎಲ್. ಪೊಲೀಸಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಪಿ. ಶೀರನಹಳ್ಳಿ ಸ್ವಾಗತಿಸಿದರು. ಬಸವರಾಜ ಹೆಬಲಿ ನಿರೂಪಿಸಿದರು.