ಅಜೀಜಅಹ್ಮದ ಬಳಗಾನೂರ
ರಾಜ್ಯ ಸರ್ಕಾರದ ಜಲ ಸಂಪನ್ಮೂಲ ಇಲಾಖೆ ಅಡಿಯಲ್ಲಿ ವಿಶ್ವ ಬ್ಯಾಂಕಿನ ನೆರವಿನಿಂದ 1985ರಲ್ಲಿ ಆರಂಭಗೊಂಡ "ವಾಲ್ಮಿ " ಬದುಕಿನ ಮೂಲ ಸಂಪನ್ಮೂಲಗಳಾದ ಜಲ, ನೆಲ ಅಭಿವೃದ್ಧಿ, ಸಂರಕ್ಷಣೆ ಹಾಗೂ ನಿರ್ವಹಣೆ ವಿಷಯಗಳಲ್ಲಿ ಭಾಗೀದಾರರಾದ ರೈತರ ಮತ್ತು ಅಭಿಯಂತರರ ಸಾಮರ್ಥ್ಯವರ್ಧನೆಯಲ್ಲಿ ತೊಡಗಿಸಿಕೊಂಡಿದೆ.
ನೀರಾವರಿ ನಿರ್ವಹಣಾ ಸುಧಾರಣೆಗಾಗಿ ಸಂಸ್ಥೆಯು ಕರ್ನಾಟಕದ ಮುಂಚೂಣಿ ಕಾರ್ಯಕ್ರಮವಾದ ರೈತರ ಸಹಭಾಗಿತ್ವದ ನೀರಾವರಿ ಪದ್ಧತಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಜಾಗೃತಿ ಮೂಡಿಸುತ್ತಿದೆ.ರೈತರ ಸಹಭಾಗಿತ್ವದ ನೀರಾವರಿ ಪದ್ಧತಿ ಜಾಗತಿಕ ಹಾಗೂ ರಾಷ್ಟ್ರೀಯ ಮನ್ನಣೆ ಪಡೆದ ಪರಿಕಲ್ಪನೆಯಾಗಿದ್ದು, ಭಾರತದ ಅನೇಕ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಶೃಂಗ ಮಹಾಮಂಡಳಿ ರಚನೆ: ಪ್ರತಿಯೊಂದು ಅಚ್ಚುಕಟ್ಟು ಪ್ರದೇಶದಲ್ಲಿನ ತಳಮಟ್ಟ, ಯೋಜನಾ ಮಟ್ಟದಲ್ಲಿ ಈಗಾಗಲೇ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಅದರಂತೆ ಆರೂ ಅಚ್ಚುಕಟ್ಟು ಪ್ರದೇಶದಲ್ಲಿರುವ ನೀರು ಬಳಕೆದಾರರ ಸಂಘದವರು ಹಾಗೂ ರೈತರನ್ನು ಒಗ್ಗೂಡಿಸಿ ಕಾರ್ಯಚಟುವಟಿಕೆ ಕೈಗೊಳ್ಳುವ ಉದ್ದೇಶದಿಂದ "ಶೃಂಗ ಮಹಾಮಂಡಳ " ರಚಿಸಲಾಗಿದೆ. ಇದಕ್ಕೆ ಜಲಸಂಪನ್ಮೂಲ ಸಚಿವರಾಗಿರುವ ಡಿ.ಕೆ. ಶಿವಕುಮಾರ ಅಧ್ಯಕ್ಷರಾಗಿದ್ದರೆ, ಸಣ್ಣ ನೀರಾವರಿ ಸಚಿವರಾಗಿರುವ ಎನ್.ಎಸ್. ಭೋಸರಾಜು ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ. ವಾಲ್ಮಿ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತದೆ.
ಪ್ರತಿ ತಿಂಗಳು ಕಾರ್ಯಕ್ರಮ: ಪ್ರತಿ ತಿಂಗಳು ವಾಲ್ಮಿಯಿಂದ ರೈತರಿಗೆ ಉಪಯುಕ್ತವಾಗುವಂತಹ ಬೋಧನೆ, ತರಬೇತಿ, ಸಂಶೋಧನೆ, ಪ್ರಾತ್ಯಕ್ಷಿಕೆ, ತಾಂತ್ರಿಕ ಸಮಾಲೋಚನೆ, ಕ್ಷೇತ್ರ ಭೇಟಿ, ಕಾರ್ಯಾಗಾರ, ವಿಚಾರ ಸಂಕಿರಣ, ಸಂವಾದ, ತಾಂತ್ರಿಕ ಸಹಯೋಗ ಸೇರಿದಂತೆ ಸಾವಿರಾರು ಹಲವು ಚಟುವಟಿಕೆಗಳಲ್ಲಿ ಕೈಗೊಂಡು ರೈತಸ್ನೇಹಿಯಾಗಿ ಮುನ್ನಡೆಯುತ್ತಿದೆ.
----
ಧಾರವಾಡ ಕೃಷಿಮೇಳದಲ್ಲಿ ವಾಲ್ಮಿ ನಿರ್ದೇಶಕ ಡಾ. ಗಿರೀಶ ಎನ್. ಮರಡ್ಡಿ ರೈತರಿಗೆ ಮಾಹಿತಿ ನೀಡಿದರು.
ಫೋಟೋ... ಡಾ. ಗಿರೀಶ ಎನ್. ಮರಡ್ಡಿ