ವರ್ತಕರ ಕ್ಷೇಮಾಭಿವೃದ್ಧಿ ಸಂಘ ಇತರರಿಗೆ ಮಾದರಿ: ಶಿವಾನಂದ ಉದಪುಡಿ

KannadaprabhaNewsNetwork |  
Published : Jan 09, 2024, 02:00 AM IST
ಲೋಕಾಪುರ ಬಸವೇಶ್ವರ ದೇವಸ್ಥಾನದಲ್ಲಿ ಗುರು ಬಸವೇಶ್ವರ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಪ್ರದಗ್ರಹಣ ಸಮಾರಂಭದಲ್ಲಿ ಗಣ್ಯ ವಾಪಾರಸ್ಥ ದಿ. ಕೆ.ಆರ್.ಬೋಳಿಶೆಟ್ಟಿಯವರಿಗೆ ಗೌರವಪೂರ್ವಕವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. | Kannada Prabha

ಸಾರಾಂಶ

ಲೋಕಾಪುರ : ಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಗುರು ಬಸವೇಶ್ವರ ವರ್ತಕರ ಕ್ಷೇಮಾಭಿವೃದ್ಧಿ ಸಂಘ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಬಿಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ ಮಾತನಾಡಿ, ಸೇವೆಯೊಂದಿಗೆ ಸಂಘದ ಸದಸ್ಯರು ಸಹಕಾರದಿಂದ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದೆ, ಸದಸ್ಯರು ಪರಸ್ಪರ ಸಹಕಾರದೊಂದಿಗೆ ಸಂಘಟನೆ ಇನ್ನಷ್ಟು ಬಲಿಷ್ಠಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲು ಸಂಘದ ಪದಾಧಿಕಾರಿಗಳಿಗೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಸಹಕಾರದ ಮೂಲಕ ಸಹಬಾಳ್ವೆ ನಡೆಸುತ್ತಿರುವ ಸ್ಥಳೀಯ ವರ್ತಕರ ಕ್ಷೇಮಾಭಿವೃದ್ಧಿ ಸಂಘ ಇತರ ಸಂಘಟನೆಗಳಿಗೆ ಮಾದರಿಯಾಗಿದೆ, ಚಿಕ್ಕದಾಗಿದ್ದರೂ ಸಂಘದ ಮೂಲಕ ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡಲಾಗುತ್ತಿದೆ ಎಂದು ಬಿಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ ಹೇಳಿದರು.

ಶನಿವಾರ ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಗುರು ಬಸವೇಶ್ವರ ವರ್ತಕರ ಕ್ಷೇಮಾಭಿವೃದ್ಧಿ ಸಂಘ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಸೇವೆಯೊಂದಿಗೆ ಸಂಘದ ಸದಸ್ಯರು ಸಹಕಾರದಿಂದ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದೆ, ಸದಸ್ಯರು ಪರಸ್ಪರ ಸಹಕಾರದೊಂದಿಗೆ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲು ಸಂಘದ ಪದಾಧಿಕಾರಿಗಳಿಗೆ ಸಲಹೆ ನೀಡಿದರು.

ನಿವೃತ್ತ ಪ್ರಾಚಾರ್ಯ ವಿ.ಬಿ. ಮಾಳಿ ಮಾತನಾಡಿ, ಸಂಘದ ಸ್ಥಾಪನೆ ಸುಲಭ. ಆದರೆ ಅದನ್ನು ಪೋಷಿಸಿ ಬೆಳೆಸುವುದು ಕಷ್ಟ, ಪ್ರಾಮಾಣಿಕತೆಯ ಆಡಳಿತ ಮಂಡಳಿ ಇದ್ದರೆ ಸಂಘಟನೆಯು ಪ್ರಗತಿ ಸಾಧ್ಯ. ಕಷ್ಟಪಟ್ಟು ದುಡಿಯುವವರೆಲ್ಲ ಸೇರಿ ಸಂಘಟನೆ ಮೂಲಕ ಮತ್ತೊಬ್ಬರ ಕಷ್ಟದಲ್ಲಿ ನೆರವಾಗಬೇಕು ಎನ್ನುವ ಉದ್ದೇಶದಿಂದ ಸಂಘ ಹುಟ್ಟಿದ್ದು ಎಲ್ಲರಿಗೂ ಮಾದರಿಯಾಗಿದೆ ಎಂದರು.

ಸಂಘದ ಅಧ್ಯಕ್ಷ ಸದಾಶಿವ ಉದಪುಡಿ ಮಾತನಾಡಿ, ಸಣ್ಣ ಮಳಿಗೆ ಹಿಡಿದು ದೊಡ್ಡ ವಾಣಿಜ್ಯ ಮಳಿಗೆಯ ತನಕವೂ ವ್ಯಾಪಾರ ಮಾಡುವವರು ಎಲ್ಲರೂ ವರ್ತಕರೇ ಆಗಿದ್ದಾರೆ, ವರ್ತಕರಲ್ಲಿ ಸ್ಪರ್ಧೆ ಇರಬಾರದು. ವೈಮನಸ್ಸು ಬಿಟ್ಟು ಪರಸ್ಪರ ಸಹೋದರತ್ವ, ಪ್ರಮಾಣಿಕವಾಗಿ ವ್ಯಾಪಾರ ಮಾಡಿದಾಗ ಖಂಡಿತ ವ್ಯಾಪಾರದಲ್ಲಿ ಯಶಸ್ಸು ಸಿಗುತ್ತದೆ ಎಂದ ಅವರು, ಸಂಘದ ಅಭಿವೃದ್ಧಿಗೆ ಮತ್ತು ನಿರ್ಣಯಗಳಿಗೆ ಪ್ರತಿಯೊಬ್ಬರು ಸಹಕರಿಸಬೇಕೆಂದು ಕೋರಿದರು.

ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಿರಿಯ ಗಣ್ಯವ್ಯಾಪಾರಸ್ಥರನ್ನು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಸಯ್ಯ ಕಡಕೋಳಮಠರನ್ನು ಸನ್ಮಾನಿಸಲಾಯಿತು.

ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಶ್ರೀಗಳು, ಮಲ್ಲಯ್ಯನ ಗುಡ್ಡದ ಮಹಾರುದ್ರಯ್ಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಿಎಸೈ ಸಿದ್ದಪ್ಪ ಯಡಹಳ್ಳಿ, ಅಲ್ಲಾಸಾಹೇಬ ಯಾದವಾಡ, ಡಾ. ವಿನಯ ಕುಲಕರ್ಣಿ, ಪಪಂ ಆರೋಗ್ಯ ನಿರೀಕ್ಷಕ ಭಾಗ್ಯಶ್ರೀ ಪಾಟೀಲ ಇತರರು ಇದ್ದರು.

ಗುರು ಬಸವೇಶ್ವರ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಮೋಹನ ಸೊನ್ನದ, ಮುಖ್ಯ ಕಾರ್ಯದರ್ಶಿ ಬಾಬು ಗುದಗಿ, ಸಂಘಟನಾ ಕಾರ್ಯದರ್ಶಿಗಳಾದ ರವೀಂದ್ರ ಪತ್ತಾರ, ಮೈಬೂಬ ರಾಮದುರ್ಗ, ಲಾಲಾರಾಮ ಪಟೇಲ, ಖಜಾಂಜಿ ಸುಭಾಸ ಹಂಚಾಟೆ, ನಿರ್ದೇಶಕರಾದ ಷಣ್ಮೂಖಪ್ಪ ಕೋಲ್ಹಾರ, ಸದಾನಂದ ಬೋಳಿಶೆಟ್ಟಿ, ಸದಾಶಿವ ನಾವ್ಹಿ, ಸಂಗಮೇಶ ಬಟಕುರ್ಕಿ, ಶಿವಯೋಗಿ ಗಂಗಣ್ಣವರ, ಆನಂದಸಿಂಗ್‌ ಠಾಕೋರ್, ವಿವೇಕಾನಂದ ಹವಳಖೋಡ, ಸಲಹಾ ಸಮಿತಿ ಸದಸ್ಯ ಪ್ರವೀಣ ಗಂಗಣ್ಣವರ ನೂತನ ಪದಾಧಿಕಾರಿಗಳು ಹಾಗೂ ನಿರ್ದೇಶಕರು, ವ್ಯಾಪಾರಸ್ಥರು, ಸಂಘದ ಹಿತೈಶಿಗಳು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ