ಕನ್ನಡಪ್ರಭ ವಾರ್ತೆ ಹನೂರು
ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದಲ್ಲಿ ಮಾಜಿ ಶಾಸಕ ವಾಸುರವರಿಗೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಾಸುರವರು ಮಹಾನಗರ ಪಾಲಿಕೆ ಸದಸ್ಯರಾಗಿ ಮೇಯರ್ ಆಗಿ, ಶಾಸಕರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದರು, ಇದಲ್ಲದೆ ಪತ್ರಿಕಾ ರಂಗದಲ್ಲಿ ದುಡಿದು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಇಂತಹ ಪ್ರಾಮಾಣಿಕ ರಾಜಕಾರಣಿಗಳು ಇತ್ತೀಚಿನ ದಿನಗಳಲ್ಲಿ ಸಿಗುವುದು ಅತ್ಯಂತ ವಿರಳವಾಗಿದೆ. ಈ ನಿಟ್ಟಿನಲ್ಲಿ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದರು.
ಪ್ರಜಾನುಡಿ ಪತ್ರಿಕೆಯ ವರದಿಗಾರ ಮಹಾದೇವ ಮಾತನಾಡಿ ವಾಸುರವರು ಶಿಕ್ಷಣ ಸಂಸ್ಥೆಯ ರೂವಾರಿಯಾಗಿದ್ದರು, ಜೊತೆಗೆ ಪತ್ರಿಕೆಯನ್ನು ಸಹ ನಡೆಸುತ್ತಿದ್ದರು ಎಂದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಾದೇಶ್ ಗೌಡ, ಜಿಲ್ಲಾ ನಿರ್ದೇಶಕ ಅಜ್ಜಿಪುರ ಸುರೇಶ್, ಪತ್ರಕರ್ತರಾದ ಸೋಮಶೇಖರ್, ಮಹದೇವಸ್ವಾಮಿ, ರವಿ, ಗೋವಿಂದ, ಮಂಜೇಶ್ ಉಸ್ಮಾನ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಹನೂರು ಪಟ್ಟಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕೋದ್ಯಮಿ ಹಾಗೂ ಮಾಜಿ ಶಾಸಕ ವಾಸುರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.