ಕಿತ್ತೂರು ಸೈನಿಕ ಶಾಲೆ ಫಲಿತಾಂಶದಲ್ಲಿ ವೇದ ಕೋಚಿಂಗ್ ಅಕಾಡೆಮಿ ವಿದ್ಯಾರ್ಥಿಗಳ ಸಾಧನೆ

KannadaprabhaNewsNetwork |  
Published : Feb 24, 2026, 04:15 AM IST
ಕಿತ್ತೂರು ಸೈನಿಕ ಶಾಲೆ ಫಲಿತಾಂಶದಲ್ಲಿ ವೇದ ಕೋಚಿಂಗ್ ಅಕಾಡೆಮಿ ವಿದ್ಯಾರ್ಥಿಗಳ ಸಾಧನೆ | Kannada Prabha

ಸಾರಾಂಶ

2026ನೇ ಸಾಲಿನ ಬಾಲಕಿಯರ ಕಿತ್ತೂರು ಸೈನಿಕ ಶಾಲೆ ಪ್ರವೇಶ ಪರೀಕ್ಷೆಯಲ್ಲಿ ನಗರದ ವೇದ ಕೋಚಿಂಗ್ ಅಕಾಡೆಮಿ ವಿದ್ಯಾರ್ಥಿನಿಯರು ಉತ್ತಮ ಫಲಿತಾಂಶ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಶಿವಾನಂದ ಕೆಲೂರ ಹಾಗೂ ಉಪಾಧ್ಯಕ್ಷ ದಯಾನಂದ ಕೆಲೂರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

2026ನೇ ಸಾಲಿನ ಬಾಲಕಿಯರ ಕಿತ್ತೂರು ಸೈನಿಕ ಶಾಲೆ ಪ್ರವೇಶ ಪರೀಕ್ಷೆಯಲ್ಲಿ ನಗರದ ವೇದ ಕೋಚಿಂಗ್ ಅಕಾಡೆಮಿ ವಿದ್ಯಾರ್ಥಿನಿಯರು ಉತ್ತಮ ಫಲಿತಾಂಶ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಶಿವಾನಂದ ಕೆಲೂರ ಹಾಗೂ ಉಪಾಧ್ಯಕ್ಷ ದಯಾನಂದ ಕೆಲೂರ ಹೇಳಿದರು.

ಪರೀಕ್ಷೆಗೆ ಹಾಜರಾದ 54 ವಿದ್ಯಾರ್ಥಿನಿಯರು ಆಯ್ಕೆಯಾಗುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಸಂಸ್ಥೆಯು ಕೇವಲ ಆಂಗ್ಲ ಮಾಧ್ಯಮದಲ್ಲಿಯೇ ತರಬೇತಿಯನ್ನು ನೀಡಿ 54 ವಿದ್ಯಾರ್ಥಿನಿಯರನ್ನು ಆಯ್ಕೆಯಾಗುವಂತೆ ಮಾಡುವುದರ ಜೊತೆಗೆ ಶೇ.70 ರಷ್ಟು ಫಲಿತಾಂಶ ಬಂದಿದ್ದು, 50 ಕ್ಕಿಂತ ಅಧಿಕ ಫಲಿತಾಂಶವನ್ನು ನೀಡುವಲ್ಲಿ ಸಫಲವಾಗಿದೆ. ನಮ್ಮ ಸಂಸ್ಥೆಯಲ್ಲಿ ಸೈನಿಕ ಶಾಲೆ, ನವೋದಯ, ಕಿತ್ತೂರು, ರಾಷ್ಟ್ರೀಯ ಮಿಲಿಟರಿ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ನೀಡಲಾಗುವ ವಿಶಿಷ್ಟ ತರಬೇತಿಯೇ ಇಂತಹ ಉತ್ತಮ ಫಲಿತಾವಂಶವನ್ನು ಪಡೆಯುವುದರ ಜೊತೆಗೆ ಪಾಲಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ. ವೇದ ಸಂಸ್ಥೆ ಪ್ರಾರಂಭವಾದ ಕೆಲವೇ ವರ್ಷಗಳಲ್ಲಿ ವರ್ಷದಿಂದ ವರ್ಷಕ್ಕೆ ತನ್ನ ಫಲಿತಾಂಶವನ್ನು ದ್ವಿಗುಣಗೊಳಿಸುತ್ತಲಿದೆ. ವಿದ್ಯಾರ್ಥಿಗಳ ಸಾಧನೆಗೆ ಮಕ್ಕಳ ಈ ಸಾಧನೆಗೆ ಶಿಕ್ಷಕವೃಂದ, ಆಡಳಿತ ಮಂಡಳಿ ಹಾಗೂ ಪದಾಧಿಕಾರಿಗಳು ಹರ್ಷವ್ಯಕ್ತಪಡಿಸಿದರು.ವಿದ್ಯಾರ್ಥಿಗಳಾದ ಅದ್ವಿಕಾ ಪಾಟೀಲ, ಅಕ್ಷರಾ.ಎ.ಕೆ, ಅನ್ಮಜಾ, ಅನನ್ಯ ವಿರಕ್ತಮಠ, ಅನುಶಾ ಪತ್ತಾರ, ಆರಾಧ್ಯ ದರಬಾರ, ಚೈತ್ರಾ ತೇಲಿ, ಚಿನ್ಮಯ ಪಾಟೀಲ, ದೇವಿಕಾ ಕಿರಸೂರ, ಜಾನ್ವಿ ಹಂಚನಾಳ, ಖುಷಿ ಮಲಾಪುರೆ, ನಂದಿನಿ ಹಿರೇಮಠ, ಪಾರ್ಥವಿ ಮುತ್ತಿನ, ಪ್ರದ್ನಿಕಾ ವಿಭೂತಿ, ಪ್ರೀತಿಲತಾ ದೇಸಾಯಿ, ಪ್ರಿಯಾಂಕ ಘೋಷ, ರಕ್ಷಿತಾ.ಬಿ, ಸಮನ್ವಿತಾ ಮಠ, ಸಂಧ್ಯಾ ರಾಠೋಡ, ಸಾನ್ವಿ ಜಲಾಪುರ, ಸಾನ್ವಿ ಬಾಗಲಕೋಟ, ಸಾನ್ವಿಕಾ ವಸ್ತೆರ, ಶ್ರಾವಣಿ ಬಿರಾದಾರ, ಶ್ರಾವಣಿ ಹೊಸೂರ, ಶ್ರಾವಣಿ ಕರಲೆ, ಶ್ರೀನಿಧಿ ತೇಲಿ, ಶ್ರೀನಿಧಿ ಮುತ್ತತ್ತಿ, ಶ್ರೀಷಾ ಪಾಟೀಲ, ಶ್ರೇಯಾ ಜಾನಮಟ್ಟಿ, ಶ್ರೇಯಾ ಗಿಡಗಂಟಿ, ಸ್ಪೂರ್ತಿ ಬರದಿ, ಉಮೇರಾ ಜಾಗೀರದಾರ, ವೈಷ್ಣವಿ ತಳವಾರ, ವರ್ಷ ಮದರಿ, ವರ್ಷ ಮಕಾಶಿ, ಆರಾಧ್ಯ ಸಿದ್ಧನಕೇರಿ, ಅದಿತಿ ಅಣ್ಣಿಗೇರಿ, ಅದ್ವಿಕಾ ಚಿನಗುಂಡಿ, ಆರಾಧ್ಯ ಸಾಲುಂಕೆ, ಅಯಾತ ಮುಲ್ಲಾ, ಭಾಗ್ಯಶ್ರೀ ಹೀರೆಮಠ, ದೃತಿ ಬಿರಾದಾರ, ಗಾಯತ್ರಿ ಪಾಟೀಲ, ಕೃತಿಕಾ ಕಲ್ಮಡಿ, ನಂದಿನಿ ಜೋಳದ, ನವೀಕಾ ಯವೂರ, ಪ್ರಣೀತಾ ಪಾಟೀಲ, ಸಾನ್ವಿ ಮೇತ್ರಿ, ಶ್ರೀನಿಧಿ ಮಾಶ್ಯಾಳ, ಶ್ರೇಯಾ ಕಮಲಾಪುರ, ಶ್ರೀಕಾ ಉಕ್ಕಲಿ, ಶ್ರೀನಿಧಿ ಜಮಖಂಡಿ, ಸೃಷ್ಠಿ ಹಲಸಂಗಿ, ವಿಜಯಾಶ್ರೀ ವಾಲಿಕಾರ ಆಯ್ಕೆಯಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ಭ್ರಷ್ಟಾಚಾರದ ಕೂಪವಿದ್ದಂತೆ
ದೇಶ ಉಳಿಯಲು ಎಲ್ಲ ಹಿಂದೂಗಳು ಗಟ್ಟಿಯಾಗಿ