ಸಮಾಜದಲ್ಲಿ ವೈದಕೀಯ ಸೇವೆ ಶ್ರೇಷ್ಠವಾದದ್ದು- ಪಾಟೀಲ

KannadaprabhaNewsNetwork |  
Published : Aug 05, 2025, 11:46 PM IST
(5ಎನ್.ಆರ್.ಡಿ4 ಪಿಕಾರ್ಡ ಬ್ಯಾಂಕನಿಂದ ಡಾ. ಜಿ.ಎಸ್.ನುಗ್ಗಾನಟ್ಟಿವರಗೆ ಸನ್ಮಾನ ಮಾಡುತ್ತಿದ್ದಾರೆ.)   | Kannada Prabha

ಸಾರಾಂಶ

ನಮ್ಮ ಸಮಾಜದಲ್ಲಿ ವೈದ್ಯರು ಜನರಿಗಾಗಿ ಮಾಡುವ ಸೇವೆ ದೊಡ್ಡದು, ನಾವು ಅವರನ್ನು ಗೌರವಿಸುವ ಕಾರ್ಯ ವನ್ನು ಮಾಡಬೇಕೆಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ಎಸ್. ಪಾಟೀಲ ಹೇಳಿದರು.

ನರಗುಂದ: ನಮ್ಮ ಸಮಾಜದಲ್ಲಿ ವೈದ್ಯರು ಜನರಿಗಾಗಿ ಮಾಡುವ ಸೇವೆ ದೊಡ್ಡದು, ನಾವು ಅವರನ್ನು ಗೌರವಿಸುವ ಕಾರ್ಯ ವನ್ನು ಮಾಡಬೇಕೆಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ಎಸ್. ಪಾಟೀಲ ಹೇಳಿದರು. ಅವರು ಪಟ್ಟಣದ ಪಿಕಾರ್ಡ್ ಬ್ಯಾಂಕನಲ್ಲಿ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಚಾನೆಲ್‌ನಿಂದ ಎಕ್ಸಲೆನ್ಸ್ ಆವಾರ್ಡ ಪಡೆದ ಡಾ. ಜಿ.ಎಸ್. ನುಗ್ಗಾನಟ್ಟಿವರನ್ನು ಸನ್ಮಾನಿಸಿ ಆನಂತರ ಮಾತನಾಡಿ, ತಾಲೂಕಿನ ಕಣಿಕಿಕೊಪ್ಪ ಗ್ರಾಮದ ಬಡ ರೈತ ಕುಟುಂಬದಲ್ಲಿ ಡಾ. ನುಗ್ಗಾನಟ್ಟಿಯವರು ಹುಟ್ಟಿ ಹಲವಾರು ಸವಾಲುಗಳನ್ನು ಎದುರಿಸಿ ವೈದಕೀಯ ಶಿಕ್ಷಣ ಕಲಿತು ಮುಂದೆ ವೈದ್ಯರಾಗಿ ನರಗುಂದದ ಪಟ್ಟಣದಲ್ಲಿ ಆಸ್ಪತ್ರೆ ಪ್ರಾರಂಭಿಸಿ ನೂರಾರು ಜನರಿಗೆ ಚಿಕಿತ್ಸೆ ನೀಡಿದ್ದಾರೆ. ಇದರ ಜೊತೆಗೆ ತಾಲೂಕಿನ ಭೈರನಹಟ್ಟಿ, ಮುದ್ಗಣಿಕಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮೇಲಾಗಿ ಡಾ. ನುಗ್ಗಾನಟ್ಕಿಯವರು ಶಾಲಾ ಕಾಲೇಜಿನ ದಿನಗಳಲ್ಲಿ ಕ್ರೀಡೆಗಳಾದ ಕೋಂ ಕೋ, ವಾಲಿಬಾಲ್, ಯೋಗದಲ್ಲಿ ಸಾಧನೆ ಮಾಡಿದ ಇವರನ್ನು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಚಾನೆಲ್‌ನವರು ಗುರುತಿಸಿ ಎಕ್ಸಲೆನ್ಸ್ ಆವಾರ್ಡ ನೀಡಿದ್ದು ನಮ್ಮ ತಾಲೂಕಿನ ಜನತೆಗೆ ಹೆಮ್ಮೆ ತಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಿಕಾರ್ಡ್‌ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಹುಡೇದಮನಿ, ಎಸ್.ಡಿ. ಕೊಳ್ಳಿಯುವರ, ಬಿ.ಬಿ. ಐನಾಪೂರ, ಶಂಕರಗೌಡ ಪಾಟೀಲ, ಗುರುಪಾದಪ್ಪ ಕುರಹಟ್ಟಿ, ಪ್ರವೀಣ ಅಳಗವಾಡಿ, ಮಹೇಶ ಬೋಳಶೆಟ್ಟಿ, ಬಿ.ಎಂ.ಅಳಗವಾಡಿ, ಪ್ರಭು ಭಾವಿಕಟ್ಟಿ, ರುದ್ರಗೌಡ ರಾಚನಗೌಡ್ರ, ಅಶೋಕ ಸಾಲೂಟಿಗಿ, ಪ್ರಕಾಶ ಭೂಮಣ್ಣವರ, ಶಂಕರಗೌಡ ಚನ್ನಪ್ಪಗೌಡ್ರ, ಶಿವಪ್ಪ ಹಳೇಮನಿ, ಸಂಗನಗೌಡ ಚಿನ್ನಪ್ಪಗೌಡ್ರ, ಬಸವರಾಜ ಭೂಮಣ್ಣವರ, ಡಿ.ಬಿ. ಆಲೂರ, ಮುತ್ತಣ್ಣ ಭೂಮಣ್ಣವರ, ಸೇರಿದಂತೆ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಧಾರಸಹಿತ ಇತಿಹಾಸಕಾರರನ್ನು ಪರಿಚಯಿಸಿ
ಬಿಜೆಪಿಯವರಿಗೆ ದ್ವೇಷ ಭಾಷಣ ಬೇಕಾ?: ಪದ್ಮರಾಜ್‌ ಪ್ರಶ್ನೆ